ಜಹೂರ್ ಪಂಜಾಬಿ 
ದೇಶ

ಪಾಕಿಸ್ತಾನ ಶೆಲ್ ದಾಳಿ: 25 ಲಕ್ಷ ನಷ್ಟಕ್ಕೆ 10 ಸಾವಿರ ರೂ; ಸರ್ಕಾರದ ಪರಿಹಾರ ಕುರಿತು ಜಮ್ಮು-ಕಾಶ್ಮೀರ ಗಡಿ ಗ್ರಾಮಸ್ಥರಿಗೆ ಅಸಮಾಧಾನ!

ಕುಪ್ವಾರಾ ಜಿಲ್ಲೆಯ ತಂಗ್ಧರ್ ಮತ್ತು ಕರ್ನಾ ಗಡಿ ಪ್ರದೇಶಗಳಲ್ಲಿ ಮತ್ತು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ಪಾಕಿಸ್ತಾನಿ ಪಡೆಗಳ ಮಾರ್ಟರ್ ಮತ್ತು ಫಿರಂಗಿ ಶೆಲ್ ದಾಳಿಯಲ್ಲಿ ನೂರಕ್ಕೂ ಹೆಚ್ಚು ಮನೆಗಳು ಮತ್ತು ರಚನೆಗಳು ಹಾನಿಗೊಳಗಾಗಿವೆ.

ಶ್ರೀನಗರ: ಪಾಕಿಸ್ತಾನದ ಶೆಲ್ ದಾಳಿಯಲ್ಲಿ ನಮ್ಮ ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಅವಶೇಷಗಳನ್ನು ತೆರವುಗೊಳಿಸಲು ನನಗೆ 15 ಸಾವಿರ ರೂಪಾಯಿ ಖರ್ಚಾಯಿತು. ಸರ್ಕಾರದಿಂದ ನನಗೆ ಬಂದಿದ್ದು ಕೇವಲ 10 ಸಾವಿರ ರೂಪಾಯಿ ನೆರವು ಎಂದು ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆಯ (LoC) ಬಳಿಯ ಕ್ರಾಲಪೋರಾದ ಸೋನೋರಾ ನಿವಾಸಿ ಮೊಹಮ್ಮದ್ ಮಕ್ಬೂಲ್ ಖಾನ್ ಹೇಳುತ್ತಾರೆ.

ಶೆಲ್ ದಾಳಿಯಿಂದ ಮನೆ ಸಂಪೂರ್ಣವಾಗಿ ಹಾನಿಯಾಗಿ ಅಂದಾಜು 25-30 ಲಕ್ಷ ರೂಪಾಯಿ ನಷ್ಟವಾಗಿರಬಹುದು. ಉನ್ನತ ನಾಗರಿಕ ಮತ್ತು ಪೊಲೀಸ್ ಅಧಿಕಾರಿಗಳು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ನನ್ನ ಮನೆ ಮತ್ತು ಹಳ್ಳಿಯ ಇತರ ಮನೆಗಳಿಗೆ ಆಗಿರುವ ಹಾನಿಯನ್ನು ನೋಡಿ ಹೋಗಿ ಅಲ್ಪ ಪರಿಹಾರ ನೀಡಿದ್ದಾರೆ. ನನಗೆ ಈಗ ಏನು ಮಾಡಬೇಕೆಂದೇ ತೋಚುತ್ತಿಲ್ಲ ಎನ್ನುತ್ತಾರೆ.

ಕುಪ್ವಾರಾ ಜಿಲ್ಲೆಯ ತಂಗ್ಧರ್ ಮತ್ತು ಕರ್ನಾ ಗಡಿ ಪ್ರದೇಶಗಳಲ್ಲಿ ಮತ್ತು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ಪಾಕಿಸ್ತಾನಿ ಪಡೆಗಳ ಮಾರ್ಟರ್ ಮತ್ತು ಫಿರಂಗಿ ಶೆಲ್ ದಾಳಿಯಲ್ಲಿ ನೂರಕ್ಕೂ ಹೆಚ್ಚು ಮನೆಗಳು ಮತ್ತು ರಚನೆಗಳು ಹಾನಿಗೊಳಗಾಗಿವೆ. ಎಲ್‌ಒಸಿಗೆ ಹತ್ತಿರದಲ್ಲಿರುವ ಉರಿಯ ಪರಂಪಿಲ್ಲ ಗ್ರಾಮದಲ್ಲಿ, ಪಾಕಿಸ್ತಾನಿ ಶೆಲ್ ದಾಳಿಯಲ್ಲಿ ಸೈಯದ್ ಮುಸ್ತಫಾ ಅವರ ಸಹೋದರಿಯ ಮನೆ ತೀವ್ರವಾಗಿ ಹಾನಿಗೊಳಗಾಯಿತು.

ಶೆಲ್ ದಾಳಿಯಿಂದ ಮನೆಯ ಎಲ್ಲಾ ವಸ್ತುಗಳು ಹಾನಿಗೊಳಗಾದವು. ಕಿಟಕಿ ಗಾಜುಗಳು, ಗಾಜುಗಳು ಮತ್ತು ಬಾಗಿಲುಗಳು ಛಿದ್ರಗೊಂಡವು. ಗೋಡೆಗಳು ಬಿರುಕು ಬಿಟ್ಟವು.ಅವರ ಪ್ರಕಾರ, ಲಕ್ಷಾಂತರ ರೂಪಾಯಿಗಳ ನಷ್ಟವಾಗಿದೆ, ಮನೆಯನ್ನು ಪುನರ್ನಿರ್ಮಿಸಲು ನಮಗೆ ಸಾಕಷ್ಟು ಪರಿಹಾರ ನೀಡುವ ಬದಲು, ಸರ್ಕಾರ ನಮಗೆ ಕೇವಲ 6,500 ರೂಪಾಯಿ ನೀಡಿದೆ, ಇದೇನು ತಮಾಷೆಯೇ ಎಂದು ಕೇಳುತ್ತಾರೆ.

ಉರಿಯ ನೆರೆಯ ಸಲಾಂಬಾದ್ ಗ್ರಾಮದಲ್ಲಿ, ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಮೂರು ಮನೆಗಳು ಸಂಪೂರ್ಣವಾಗಿ ಮತ್ತು ಇತರ ಮೂರು ಮನೆಗಳು ಭಾಗಶಃ ಹಾನಿಗೊಳಗಾದವು. ಸುಲ್ತಾನ್ ನಿಯಾಕ್ ಅವರ ಪುತ್ರರಾದ ತಾಲಿಬ್ ಹುಸೇನ್ ಮತ್ತು ಮೊಹಮ್ಮದ್ ಯೂನಿಸ್ ಎಂಬ ಇಬ್ಬರು ಸಹೋದರರ ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಈ ಮನೆಗಳು ವಾಸಿಸಲು ಅಸುರಕ್ಷಿತವಾಗಿವೆ ಎಂದು ಗ್ರಾಮದ ಮಾಜಿ ಸರಪಂಚ ಅಬ್ದುಲ್ ರಶೀದ್ ಅವನ್ ಹೇಳುತ್ತಾರೆ.

ನಮ್ಮ ಗ್ರಾಮದಲ್ಲಿ ನಿರ್ಮಾಣ ಸಾಮಗ್ರಿಗಳು ಮತ್ತು ಕಾರ್ಮಿಕರ ವೇತನ ಸಾಕಷ್ಟು ದುಬಾರಿಯಾಗಿದ್ದು, ಎರಡು ಅಂತಸ್ತಿನ ಮನೆಯನ್ನು ನಿರ್ಮಿಸಲು 35 ರಿಂದ 40 ಲಕ್ಷ ರೂಪಾಯಿ ಖರ್ಚಾಗಬಹುದು ಎನ್ನುತ್ತಾರೆ.

ಇಬ್ಬರು ಸಹೋದರರಿಗೆ ಸರ್ಕಾರವು ತಲಾ 1.30 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ, ಆದರೆ ಇನ್ನೊಬ್ಬ ನಿವಾಸಿ ಶಮೀಮ್ ಅವರ ಮನೆಗೆ ಆದ ಹಾನಿಯನ್ನು ಮರು ಮೌಲ್ಯಮಾಪನ ಮಾಡಲಾಗುತ್ತಿದೆ. ಈ ಗ್ರಾಮಸ್ಥರು ಬಡ ಕುಟುಂಬಗಳಿಂದ ಬಂದವರಾಗಿದ್ದು, ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ತಮ್ಮ ಇಡೀ ಜೀವನದ ಗಳಿಕೆಯನ್ನು ಮನೆಗಳ ನಿರ್ಮಾಣದಲ್ಲಿ ಕಳೆದಿದ್ದರು, ಈಗ ಅವರಿಗೆ ಮನೆಗಳನ್ನು ಪುನರ್ನಿರ್ಮಿಸಲು 1.3 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಆ ಮೊತ್ತದಲ್ಲಿ ಮನೆ ನಿರ್ಮಿಸಲು ಸಾಧ್ಯವೇ, ಸರ್ಕಾರವು ಸಾಕಷ್ಟು ಪರಿಹಾರವನ್ನು ನೀಡದಿದ್ದರೆ ಈ ಮೂವರಿಗೆ ಸಂಪೂರ್ಣವಾಗಿ ಹಾನಿಗೊಳಗಾದ ಮನೆಗಳನ್ನು ಪುನರ್ನಿರ್ಮಿಸುವುದು ವಾಸ್ತವಿಕವಾಗಿ ಅಸಾಧ್ಯ ಎನ್ನುತ್ತಾರೆ.

ಮೇ 7 ರಂದು ಬೆಳಗ್ಗೆ ಗಡಿಯಾಚೆಗಿನ ಶೆಲ್ ದಾಳಿಯಲ್ಲಿ ಪೂಂಚ್‌ನ ಡೊಂಗಾಸ್‌ನಲ್ಲಿರುವ ಮೆಹ್ತಾಬ್ ದಿನ್ ಶೇಖ್ ಅವರ ಮನೆ ಕೂಡ ತೀವ್ರವಾಗಿ ಹಾನಿಗೊಳಗಾಯಿತು. ಅವರಿಗೂ ಇದೇ ರೀತಿಯ ಪರಿಹಾರ ಸಿಕ್ಕಿತು. “ನನಗೆ 15 ಲಕ್ಷ ರೂಪಾಯಿಗಳಷ್ಟು ನಷ್ಟವಾಗಿದೆ, ಸರ್ಕಾರ ನನಗೆ ಕೇವಲ 1.3 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ ಎಂದು ಮೆಹ್ತಾಬ್ ಹೇಳುತ್ತಾರೆ. ನಾನು 1.3 ಲಕ್ಷ ರೂಪಾಯಿಗಳಲ್ಲಿ ಮನೆಯನ್ನು ಹೇಗೆ ನಿರ್ಮಿಸಬಹುದು ಹಾನಿಗೊಳಗಾದ ಮನೆಯ ಸಣ್ಣ ದುರಸ್ತಿಗೂ ಅದು ಸಾಕಾಗುವುದಿಲ್ಲ ಎಂದು ಅವರು ಹೇಳುತ್ತಾರೆ.

ಮನೆಗಳಿಗೆ ಹಾನಿಯಾಗಿರುವ ಗಡಿ ನಿವಾಸಿಗಳು ತಮ್ಮ ಮನೆಗಳನ್ನು ಪುನರ್ನಿರ್ಮಿಸಲು ಸಾಕಷ್ಟು ಪರಿಹಾರವನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಪೂಂಚ್ ಮತ್ತು ರಾಜೌರಿಯಲ್ಲಿ ಪಾಕಿಸ್ತಾನಿ ಪಡೆಗಳ ಶೆಲ್ ದಾಳಿಯಲ್ಲಿ ಕನಿಷ್ಠ 31 ಶಾಲೆಗಳು ಹಾನಿಗೊಳಗಾಗಿವೆ. ಪೂಂಚ್‌ನಲ್ಲಿ 23 ಶಾಲೆಗಳು ಶೆಲ್ ದಾಳಿಗೆ ತುತ್ತಾಗಿದ್ದರೆ, ನಂತರದ ದಿನಗಳಲ್ಲಿ ಏಳು ಶಾಲೆಗಳು ಮತ್ತು ಒಂದು ಖಾಸಗಿ ಶಿಕ್ಷಣ ಸಂಸ್ಥೆಗೆ ಹಾನಿಯಾಗಿದೆ.

ಪಾಕ್ ಶೆಲ್ ದಾಳಿಯಲ್ಲಿ 100 ಕ್ಕೂ ಹೆಚ್ಚು ಮನೆಗಳು, ರಚನೆಗಳು ಹಾನಿಗೊಳಗಾಗಿವೆ.

ಕುಪ್ವಾರಾ ಜಿಲ್ಲೆಯ ತಂಗ್ಧರ್ ಮತ್ತು ಕರ್ನಾ ಮತ್ತು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನಿ ಪಡೆಗಳ ಮಾರ್ಟರ್ ಮತ್ತು ಫಿರಂಗಿ ಶೆಲ್ ದಾಳಿಯಲ್ಲಿ ನೂರಕ್ಕೂ ಹೆಚ್ಚು ಮನೆಗಳು ಮತ್ತು ರಚನೆಗಳು ಹಾನಿಗೊಳಗಾಗಿವೆ. ಮನೆಗಳನ್ನು ಪುನರ್ನಿರ್ಮಿಸಲು ನಮಗೆ ಸಹಾಯ ಮಾಡಲು ಪರಿಹಾರ ಸಾಕಾಗುವುದಿಲ್ಲ.

ಸೈಯದ್ ಮುಸ್ತಫಾ ಅವರ ಪ್ರಕಾರ, ಅವರ ಮನೆ ಹಾನಿಗೊಳಗಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ, ಆದರೆ ಅವರಿಗೆ ಕೇವಲ 6,500 ರೂಪಾಯಿ ಪರಿಹಾರ ನೀಡಲಾಗಿದೆ. ಅವರಂತೆಯೇ, ಇತರ ಅನೇಕ ಸ್ಥಳೀಯ ನಿವಾಸಿಗಳು ತಮ್ಮ ಮನೆಗಳನ್ನು ಪುನರ್ನಿರ್ಮಿಸಲು ಸಾಕಷ್ಟು ಪರಿಹಾರವನ್ನು ನೀಡಬೇಕೆಂದು ಆಡಳಿತವನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT