ದೆಹಲಿ  online desk
ದೇಶ

ದೆಹಲಿಗೆ ಮರುನಾಮಕರಣ ಮಾಡಿ: ಅಮಿತ್ ಶಾ ಗೆ ಬಿಜೆಪಿ ಸಂಸದನ ಪತ್ರ; ಸೂಚಿಸಿದ ಹೆಸರೇನು ಗೊತ್ತೇ?

ದೆಹಲಿ "ಕೇವಲ ಆಧುನಿಕ ಮಹಾನಗರವಲ್ಲ, ಆದರೆ ಭಾರತೀಯ ನಾಗರಿಕತೆಯ ಆತ್ಮ" ಎಂದು ಖಂಡೇಲ್ವಾಲ್ ಉಲ್ಲೇಖಿಸಿದ್ದಾರೆ.

ನವದೆಹಲಿ: ದೆಹಲಿ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಶನಿವಾರ ಗೃಹ ಸಚಿವ ಅಮಿತ್ ಶಾ ಅವರನ್ನು ರಾಷ್ಟ್ರೀಯ ರಾಜಧಾನಿಗೆ ಮರುನಾಮಕರಣ ಮಾಡಬೇಕೆಂದು ಮನವಿ ಮಾಡಿ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

ಅಮಿತ್ ಶಾ ಅವರಿಗೆ ಬರೆದ ಪತ್ರವನ್ನು ಸಂಸದ ಪ್ರವೀಣ್ ಖಂಡೇಲ್ವಾಲ್ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಇತರ ಮಂತ್ರಿಗಳಿಗೆ ಕಳುಹಿಸಿದ್ದಾರೆ. ದೆಹಲಿಗೆ ಮರು ನಾಮಕರಣ ಮಾಡುವ ಈ ಕ್ರಮ ದೇಶದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ನಾಗರಿಕತೆಯ ಬೇರುಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

"ಪ್ರಾಚೀನ ಬೇರುಗಳನ್ನು" ಉಲ್ಲೇಖಿಸಿ 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡಬೇಕೆಂದು ಸಂಸದ ಪ್ರವೀಣ್ ಖಂಡೇಲ್ವಾಲ್ ಒತ್ತಾಯಿಸಿದ್ದಾರೆ. ಹಳೆಯ ದೆಹಲಿ ರೈಲು ನಿಲ್ದಾಣವನ್ನು 'ಇಂದ್ರಪ್ರಸ್ಥ ಜಂಕ್ಷನ್' ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು 'ಇಂದ್ರಪ್ರಸ್ಥ ವಿಮಾನ ನಿಲ್ದಾಣ' ಎಂದು ಮರುನಾಮಕರಣ ಮಾಡಬೇಕೆಂದು ಪತ್ರದಲ್ಲಿ ಹೇಳಿದ್ದಾರೆ.

"ದೆಹಲಿಯ ಇತಿಹಾಸ ಸಾವಿರಾರು ವರ್ಷಗಳ ಹಿಂದಿನದು ಮಾತ್ರವಲ್ಲದೆ, ಭಾರತೀಯ ನಾಗರಿಕತೆಯ ಆತ್ಮ ಮತ್ತು ಪಾಂಡವರು ಸ್ಥಾಪಿಸಿದ 'ಇಂದ್ರಪ್ರಸ್ಥ' ನಗರದ ರೋಮಾಂಚಕ ಪರಂಪರೆಯನ್ನು ಸಹ ಸಾಕಾರಗೊಳಿಸುತ್ತದೆ" ರಾಷ್ಟ್ರ ರಾಜಧಾನಿಯಲ್ಲಿ ಪಾಂಡವರ ಭವ್ಯ ಪ್ರತಿಮೆಗಳನ್ನು ಸ್ಥಾಪಿಸಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

"ಇಂದ್ರಪ್ರಸ್ಥದ ಪವಿತ್ರ ಭೂಮಿಯಲ್ಲಿ ಪಾಂಡವರ ಪ್ರತಿಮೆಗಳನ್ನು ಸ್ಥಾಪಿಸುವುದರಿಂದ ಭಾರತದ ಇತಿಹಾಸ, ಸಂಸ್ಕೃತಿ ಮತ್ತು ನಂಬಿಕೆ ಪುನರುಜ್ಜೀವನಗೊಳ್ಳುತ್ತದೆ. ಇದು ಹೊಸ ಪೀಳಿಗೆಗೆ ಭಾರತದ ಇತಿಹಾಸ, ಸಂಸ್ಕೃತಿ ಮತ್ತು ಪಾಂಡವರ ನೀತಿ, ಸದಾಚಾರ ಮತ್ತು ಧೈರ್ಯದ ಸಂಕೇತವಾಗಿ ನಂಬಿಕೆಯನ್ನು ನೆನಪಿಸುತ್ತದೆ. ಇದು ಅದ್ಭುತ ಸಂಪ್ರದಾಯದೊಂದಿಗೆ ಸಂಪರ್ಕಗೊಳ್ಳುತ್ತದೆ" ಎಂದು ಬಿಜೆಪಿ ಸಂಸದರು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ "ಕೇವಲ ಆಧುನಿಕ ಮಹಾನಗರವಲ್ಲ, ಆದರೆ ಭಾರತೀಯ ನಾಗರಿಕತೆಯ ಆತ್ಮ" ಎಂದು ಖಂಡೇಲ್ವಾಲ್ ಉಲ್ಲೇಖಿಸಿದ್ದಾರೆ.

ಖಂಡೇಲ್ವಾಲ್ ಪ್ರಕಾರ, ದೇಶದ ಇತರ ಐತಿಹಾಸಿಕ ನಗರಗಳಾದ ಪ್ರಯಾಗ್‌ರಾಜ್, ಅಯೋಧ್ಯೆ, ಉಜ್ಜಯಿನಿ, ವಾರಣಾಸಿಗಳು ತಮ್ಮ "ಪ್ರಾಚೀನ ಗುರುತುಗಳೊಂದಿಗೆ" ಮರುಸಂಪರ್ಕಿಸುತ್ತಿರುವಾಗ, ದೆಹಲಿಯನ್ನು "ಅದರ ಮೂಲ ರೂಪದಲ್ಲಿ ಗೌರವಿಸಬೇಕು". "ಈ ಬದಲಾವಣೆಯು ಐತಿಹಾಸಿಕ ನ್ಯಾಯ ಮಾತ್ರವಲ್ಲದೆ ಸಾಂಸ್ಕೃತಿಕ ಪುನರುಜ್ಜೀವನದತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ಇತಿಹಾಸವನ್ನು ಪುನಃಸ್ಥಾಪಿಸುತ್ತದೆ ಮತ್ತು ಐತಿಹಾಸಿಕ ನ್ಯಾಯ ಮತ್ತು ಸಾಂಸ್ಕೃತಿಕ ಗೌರವವನ್ನು ಪ್ರತಿನಿಧಿಸುತ್ತದೆ" ಎಂದು ಅವರು ಹೇಳಿದರು.

"ಪ್ರಧಾನಿ ನರೇಂದ್ರ ಮೋದಿಯವರ ಸಾಂಸ್ಕೃತಿಕ ಪುನರುಜ್ಜೀವನದ ದೃಷ್ಟಿಕೋನಕ್ಕೆ ಅನುಗುಣವಾಗಿ: ದೇಶವು ಅಯೋಧ್ಯೆ, ಕಾಶಿ ಮತ್ತು ಪ್ರಯಾಗ್‌ರಾಜ್‌ನಂತಹ ತನ್ನ ಪ್ರಾಚೀನ ನಗರಗಳನ್ನು ಪುನರುಜ್ಜೀವನಗೊಳಿಸುತ್ತಿದ್ದರೆ, ದೆಹಲಿಯನ್ನು ಏಕೆ ಗೌರವಿಸಬಾರದು?" ಎಂದು ಬಿಜೆಪಿ ಸಂಸದರು ಪ್ರಶ್ನಿಸಿದ್ದಾರೆ.

ದೆಹಲಿಯನ್ನು 'ಇಂದ್ರಪ್ರಸ್ಥ' ಎಂದು ಮರುನಾಮಕರಣ ಮಾಡುವುದರಿಂದ ಭವಿಷ್ಯದ ಪೀಳಿಗೆಗೆ ಭಾರತದ ರಾಜಧಾನಿ ಕೇವಲ ಅಧಿಕಾರ ಕೇಂದ್ರವಲ್ಲ, ಧರ್ಮ, ನೀತಿಶಾಸ್ತ್ರ ಮತ್ತು ರಾಷ್ಟ್ರೀಯತೆಯ ಸಂಕೇತವಾಗಿದೆ ಎಂಬ ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಕಳೆದ ತಿಂಗಳು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಇದೇ ರೀತಿಯ ಬೇಡಿಕೆಯನ್ನು ಮುಂದಿಟ್ಟಿತ್ತು.

ದೆಹಲಿ ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ ಅವರಿಗೆ ಬರೆದ ಪತ್ರದಲ್ಲಿ, ವಿಎಚ್‌ಪಿಯ ದೆಹಲಿ ಘಟಕ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವದೆಹಲಿ ರೈಲು ನಿಲ್ದಾಣದ ಜೊತೆಗೆ ರಾಷ್ಟ್ರ ರಾಜಧಾನಿಯ ಹೆಸರನ್ನು ನಗರದ "ನಿಜವಾದ ಸಾಂಸ್ಕೃತಿಕ ಗುರುತನ್ನು" ಪ್ರತಿಬಿಂಬಿಸಲು ಬದಲಾಯಿಸಬೇಕೆಂದು ಒತ್ತಾಯಿಸಿದೆ.

ಕಳೆದ ತಿಂಗಳು, ಮಾಜಿ ಸಚಿವ ವಿಜಯ್ ಗೋಯೆಲ್ ಅವರು ಹೊಸ ಲೋಗೋ ಮತ್ತು ಭವಿಷ್ಯದ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ 'ದೆಹಲಿ' ಯ ಇಂಗ್ಲಿಷ್ ಕಾಗುಣಿತವನ್ನು 'ದಿಲ್ಲಿ' ಎಂದು ಬದಲಾಯಿಸುವಂತೆ ದೆಹಲಿ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದರು. ಅವರು ತಮ್ಮ ಸಾಂಪ್ರದಾಯಿಕ ಹೆಸರುಗಳಾಗಿ ಬದಲಾದ ಇತರ ನಗರಗಳ ಉದಾಹರಣೆಗಳನ್ನು ಉಲ್ಲೇಖಿಸಿದ್ದರು - ಬಾಂಬೆಯಿಂದ ಮುಂಬೈ, ಕಲ್ಕತ್ತಾದಿಂದ ಕೋಲ್ಕತ್ತಾ ಮತ್ತು ಮದ್ರಾಸ್‌ನಿಂದ ಚೆನ್ನೈ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಯಕತ್ವ ಬದಲಾವಣೆ ಬಗ್ಗೆ ನಾನು, ಸಿಎಂ ಹೇಳಿದರಷ್ಟೇ ಬೆಲೆ: ಡಿಕೆ.ಶಿವಕುಮಾರ್

MES ಮುಖಂಡನ ಜೊತೆ ಸೆಲ್ಫಿ; ಪೊಲೀಸ್‌ ಇನ್‌ಸ್ಪೆಕ್ಟರ್‌ ವಿರುದ್ಧ ಶೀಘ್ರದಲ್ಲೇ ಕ್ರಮ ಎಂದ ಗೃಹ ಸಚಿವ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊ? ಡಿಕೆಶಿಯೋ?: HDK ಪ್ರಶ್ನೆ

ವಿವಿಧ ಕ್ಷೇತ್ರಗಳ ಸಾಧಕರಿಗೆ 'ರಾಜ್ಯೋತ್ಸವ ಪ್ರಶಸ್ತಿ' ಪ್ರದಾನ; ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್!

ಬೆಳಗಾವಿ: ರಾಜ್ಯೋತ್ಸವ ಮೆರವಣಿಗೆ ವೇಳೆ ಐವರಿಗೆ ಚಾಕು ಇರಿತ; ಇಬ್ಬರ ಸ್ಥಿತಿ ಗಂಭೀರ!

SCROLL FOR NEXT