ಅಮಿತ್ ಶಾ, ಪ್ರಿಯಾಂಕಾ ಗಾಂಧಿ  
ದೇಶ

Bihar Polls: ರಂಗೇರಿದ ಪ್ರಚಾರ; ಅಮಿತ್ ಶಾ- ಪ್ರಿಯಾಂಕಾ ವಾದ್ರಾ ವಾಕ್ಸಮರ!

ಬಿಹಾರದ ಸಮಸ್ಯೆಗಳಿಗೆ ನೆಹರು ಮತ್ತು ಇಂದಿರಾ ಗಾಂಧಿಯವರನ್ನು ದೂಷಿಸುತ್ತಾ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ಸರ್ಕಾರ "65 ಲಕ್ಷ ಮತದಾರರ ಹಕ್ಕುಗಳನ್ನು ಕಸಿದುಕೊಂಡಿದೆ" ಎಂದು ಮೋದಿ ಮತ್ತು ಶಾ ಆರೋಪಿಸಿದರು.

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಂತೆಯೇ ಪ್ರಚಾರದ ಅಖಾಡ ರಂಗೇರಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಾಕ್ಸಮರ ನಡೆಸಿದ್ದಾರೆ.

ಆರ್ ಜೆಡಿ ನೇತೃತ್ವದ “ಜಂಗಲ್ ರಾಜ್” ಅಧಿಕಾರಕ್ಕೆ ಬಾರದಂತೆ ತಡೆಗಟ್ಟುವಂತೆ ಜನರಿಗೆ ಅಮಿತ್ ಶಾ ಮನವಿ ಮಾಡಿದ್ದರೆ, ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾದರೂ ದೆಹಲಿಯಿಂದ ಆಡಳಿತ ನಡೆಯುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ಅಮಿತ್ ಶಾ ಮತ್ತು ವಾದ್ರಾ ಅವರು ಶನಿವಾರ ರಾಜ್ಯದಾದ್ಯಂತ ವಿವಿಧೆಡೆ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿರುವುದಾಗಿ ಪಿಟಿಐ ವರದಿ ಮಾಡಿದೆ.

ಅಭಿವೃದ್ಧಿಗಾಗಿ ನಿಂತಿರುವ ಮೋದಿ-ನಿತೀಶ್ ಮೈತ್ರಿ ಮತ್ತು ಜಂಗಲ್ ರಾಜ್ ಅನ್ನು ಮರಳಿ ತರುವ ಆರ್‌ಜೆಡಿ ನೇತೃತ್ವದ ವಿರೋಧ ಪಕ್ಷಗಳ ನಡುವೆ ಯಾವುದನ್ನು ಆಯ್ಕೆ ಮಾಡಬೇಕು ಎಂಬುದನ್ನು ಚುನಾವಣೆ ನೀಡಿದೆ. ಬಿಹಾರದ ಭವಿಷ್ಯವನ್ನು ಯಾರಿಗೆ ವಹಿಸಬೇಕು ಎಂಬುದನ್ನು ನಿರ್ಧರಿಸಲು ಚುನಾವಣೆ ಒಂದು ಅವಕಾಶವಾಗಿದೆ ಎಂದು ಶಾ ಹೇಳಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ, ಬೇಗುಸರಾಯ್‌ನಲ್ಲಿ ತನ್ನ ಪ್ರಚಾರವನ್ನು ಆರಂಭಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, "ಡಬಲ್-ಇಂಜಿನ್ ಸರ್ಕಾರ ಅಲ್ಲ. ದೆಹಲಿಯಿಂದ ಆಡಳಿತ ನಡೆಸುವ ಏಕ ಇಂಜಿನ್ ಸರ್ಕಾರವಾಗಿದೆ."ದಯವಿಟ್ಟು ಮೂರ್ಖರಾಗಬೇಡಿ, ಬಿಹಾರದ ಜನರಿಗೆ ಧ್ವನಿ ಇಲ್ಲದಂತಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೂ ಯಾವುದೇ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವಾದ್ರಾ, ಎರಡು ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಎನ್‌ಡಿಎ, ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ. ಸಾಕಷ್ಟು ನೈಸರ್ಗಿಕ ಸಂಪತ್ತಿನ ಹೊರತಾಗಿಯೂ ರಾಜ್ಯದಲ್ಲಿ ಬಡತನ ಹೆಚ್ಚಾಗಿದೆ.

ಮೋದಿ ಮತ್ತು ಶಾ ಅವರು ಬಿಹಾರದ ಸಮಸ್ಯೆಗಳಿಗೆ ನೆಹರು ಮತ್ತು ಇಂದಿರಾ ಗಾಂಧಿಯವರನ್ನು ದೂಷಿಸುತ್ತಾ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ಸರ್ಕಾರ "65 ಲಕ್ಷ ಮತದಾರರ ಹಕ್ಕುಗಳನ್ನು ಕಸಿದುಕೊಂಡಿದೆ" ಎಂದು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಹಣೆಗೆ ಗನ್ ಇಟ್ಟು ತೇಜಸ್ವಿ ತನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿಕೊಂಡಿದ್ದಾರೆ: ಪ್ರಧಾನಿ ಮೋದಿ

3ನೇ ಟಿ20: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ದಾಖಲೆಯ ಜಯ, ತವರಿನಲ್ಲೇ ಕಾಂಗರೂಗಳಿಗೆ ಮುಖಭಂಗ

'200 ವರ್ಷ ಇತಿಹಾಸ, 1993ರಲ್ಲಿ ಕರ್ನಾಟಕ': ರಾಜ್ಯೋತ್ಸವದಂದೇ ಕನ್ನಡಕ್ಕೆ ಜಮೀರ್ ಅಪಮಾನ: ಜೆಡಿಎಸ್ ಕಿಡಿ, Video

3ನೇ ಟಿ20: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 5 ವಿಕೆಟ್ ಭರ್ಜರಿ ಜಯ

ಬಿಹಾರ: ಪ್ರಚಾರದ ವೇಳೆ 'ಮೀನು ಹಿಡಿದ' ರಾಹುಲ್ ಗಾಂಧಿ! Video

SCROLL FOR NEXT