ಪ್ರಾತಿನಿಧಿಕ ಚಿತ್ರ 
ದೇಶ

ಮೊಬೈಲ್ ಗೇಮ್ ಆಡಿದ್ದಕ್ಕೆ ಗದರಿಸಿದ ಅಪ್ಪ; ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಗ

ತಂದೆ ಗದರಿಸಿದ್ದರಿಂದ ಕೋಪಗೊಂಡ ವಿಷ್ಣು, ತನ್ನ ಕೋಣೆಗೆ ಹೋಗಿದ್ದಾನೆ. ಮನೆಯವರು ಊಟಕ್ಕೆ ಕರೆದಾಗ ಆತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಪುರ: ಮೊಬೈಲ್ ಗೇಮ್ ಆಡಿದ್ದಕ್ಕೆ ತಂದೆ ಬೈದಿದ್ದರಿಂದ ಬೇಸತ್ತ 13 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಧೋಲ್ಪುರ ಜಿಲ್ಲೆಯ ಕುರೇಂದ್ರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ತಂದೆ ಗದರಿಸಿದ್ದರಿಂದ ಕೋಪಗೊಂಡ ವಿಷ್ಣು, ತನ್ನ ಕೋಣೆಗೆ ಹೋಗಿದ್ದಾನೆ. ಮನೆಯವರು ಊಟಕ್ಕೆ ಕರೆದಾಗ ಆತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಪರಿಶೀಲಿಸಿದಾಗ 8ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆ ವೇಳೆಗಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಮೊಬೈಲ್ ಗೇಮ್ ಆಡಿದ್ದಕ್ಕಾಗಿ ತನ್ನ ತಂದೆ ಗದರಿಸಿದ್ದಕ್ಕಾಗಿ ಬಾಲಕ ಬೇಸರ ಮಾಡಿಕೊಂಡಿದ್ದನು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಳಗಾವಿಯಲ್ಲಿ ತಾರಕಕ್ಕೇರಿದ ರೈತರ ಪ್ರತಿಭಟನೆ: ಸಂಪುಟ ಸಭೆ ನಂತರ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಬಿಹಾರ ವಿಧಾನಸಭಾ ಚುನಾವಣೆ 2025: ಸಂಜೆ 5 ಗಂಟೆಯವರೆಗೂ ಶೇ. 60 ರಷ್ಟು ಮತದಾನ!

ಕೊನೆಗೂ IPL ಚಾಂಪಿಯನ್ RCB ಸೇಲ್..!: ಯಾರ ಪಾಲು..? ಎಷ್ಟು ಮೊತ್ತಕ್ಕೆ ಮಾರಾಟ?

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕ್ರಿಕೆಟಿಗರಿಗೆ ಸಂಕಷ್ಟ: ಸುರೇಶ್ ರೈನಾ, ಶಿಖರ್ ಧವನ್‌ಗೆ ಸೇರಿದ 11 ಕೋಟಿ ಆಸ್ತಿ ED ಮುಟ್ಟುಗೋಲು!

ಪಾಕ್ ಭದ್ರತಾ ಪಡೆಗಳಿಂದ ನಿಷೇಧಿತ ಟಿಟಿಪಿ ಕಮಾಂಡರ್‌ ಹತ್ಯೆ

SCROLL FOR NEXT