ಪ್ರಧಾನಿ ಮೋದಿ, ಜೈರಾಮ್ ರಮೇಶ್ ಸಾಂದರ್ಭಿಕ ಚಿತ್ರ 
ದೇಶ

ಭಾರತ-ಪಾಕ್ ಯುದ್ಧ ಕುರಿತು ಮತ್ತೆ ಟ್ರಂಪ್ ಹೇಳಿಕೆ: ಈ ಬಗ್ಗೆ 'ಹೌಡಿ' ಮೋದಿ ಏನು ಹೇಳುತ್ತಾರೆ?

2019 ರಲ್ಲಿ ಹೂಸ್ಟನ್‌ನಲ್ಲಿ ನಡೆದ "ಹೌಡಿ ಮೋದಿ" ಕಾರ್ಯಕ್ರಮವನ್ನು ಉಲ್ಲೇಖಿಸಿ, ಟ್ರಂಪ್‌ಟ್ರ್ಯಾಕರ್ ಇಂದು ಬೆಳಿಗ್ಗೆ 59ಕ್ಕೆ ತಲುಪಿದೆ. ವ್ಯಾಪಾರ ಮತ್ತು ಸುಂಕಾಸ್ತ್ರ ಬಳಸಿ 24 ಗಂಟೆಯೊಳಗೆ ಆಪರೇಷನ್ ಸಿಂಧೂರ್ ನಿಲ್ಲಿಸಿದೆ.

ನವದೆಹಲಿ: ತಮ್ಮಿಂದಲೇ ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಂತಿತು ಎಂದು ಅಮೆರಿಕಾ ಅಧ್ಯಕ್ಷ ಮತ್ತೆ ಪುನರುಚ್ಛರಿಸಿದ್ದು, ಇದರ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ಟ್ರಂಪ್ ತಮ್ಮ ಹೇಳಿಕೆಗಳನ್ನು 59 ಬಾರಿ ಪುನರಾವರ್ತಿಸಿದ್ದಾರೆ. ಇಂದು ಬೆಳಿಗ್ಗೆ ಟ್ರಂಪ್‌ ಟ್ರ್ಯಾಕರ್ 59 ಅನ್ನು ತಲುಪಿದೆ ಎಂದು ಹೇಳಿದ್ದಾರೆ.

2019 ರಲ್ಲಿ ಹೂಸ್ಟನ್‌ನಲ್ಲಿ ನಡೆದ "ಹೌಡಿ ಮೋದಿ" ಕಾರ್ಯಕ್ರಮವನ್ನು ಉಲ್ಲೇಖಿಸಿ, ಟ್ರಂಪ್‌ಟ್ರ್ಯಾಕರ್ ಇಂದು ಬೆಳಿಗ್ಗೆ 59ಕ್ಕೆ ತಲುಪಿದೆ. ವ್ಯಾಪಾರ ಮತ್ತು ಸುಂಕಾಸ್ತ್ರ ಬಳಸಿ 24 ಗಂಟೆಯೊಳಗೆ ಆಪರೇಷನ್ ಸಿಂಧೂರ್ ನಿಲ್ಲಿಸಿದೆ. ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಬಹುತೇಕ ನಿಲ್ಲಿಸಿದೆ. ನಾನು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದ್ದೇನೆ. ಭಾರತಕ್ಕೆ ಭೇಟಿ ನೀಡಲು ಬಯಸುತ್ತಿದ್ದೇನೆಂದು ಟ್ರಂಪ್ ಅವರು ಹೇಳಿದ್ದಾರೆ. ಮುಂದಿನ ವರ್ಷ ಟ್ರಂಪ್ ಭಾರತಕ್ಕೆ ಭೇಟಿ ನೀಡಬಹುದು. ಈ ಬಗ್ಗೆ ಹೌಡಿ ಮೋದಿ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಅವರು, ನಾನು ಕೊನೆಗೊಳಿಸಿದ ಎಂಟು ಯುದ್ಧಗಳಲ್ಲಿ, ಐದು ಅಥವಾ ಆರು ಯುದ್ಧಗಳು ಸುಂಕಗಳಿಂದಾಗಿ ನಿಂತವು. ನೀವು ಭಾರತ ಮತ್ತು ಪಾಕಿಸ್ತಾನವನ್ನು ನೋಡಿದರೆ, ಅವರು ಹೋರಾಡಲು ಹೊರಟಿದ್ದರು, ಅವೆರಡೂ ಪರಮಾಣು ರಾಷ್ಟ್ರಗಳು. ಎಂಟು ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ನಂತರ ನಾನು ಮಧ್ಯಪ್ರವೇಶಿಸಿ 'ನೀವು ಹೋರಾಡಲು ಹೋದರೆ, ನಾನು ನಿಮ್ಮ ಮೇಲೆ ಸುಂಕಗಳನ್ನು ವಿಧಿಸುತ್ತೇನೆ ಎಂದು ಹೇಳಿದೆ. ಹೀಗಾಗಿ 24 ಗಂಟೆಗಳ ಒಳಗೆ, ನಾನು ಯುದ್ಧವನ್ನು ಇತ್ಯರ್ಥಪಡಿಸಿದೆ. ಸುಂಕಗಳಿಲ್ಲದೆ, ನಾನು ಅದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದರು.

ಇದೇ ವೇಳೆ ಪ್ರಧಾನಿ ಮೋದಿಯವರನ್ನು ಹೊಗಳಿದ ಅವರು, ಮೋದಿ ‘ಒಬ್ಬ ಮಹಾನ್ ವ್ಯಕ್ತಿ’ ಮತ್ತು ‘ಉತ್ತಮ ಸ್ನೇಹಿತ’ ಎಂದು ಬಣ್ಣಿಸಿದರು.

ಭಾರತ ರಷ್ಯಾದಿಂದ ಖರೀದಿಸುವುದನ್ನು ಹೆಚ್ಚಾಗಿ ನಿಲ್ಲಿಸಿದೆ. ಅವರು ನನ್ನ ಸ್ನೇಹಿತ ಮತ್ತು ನಾವು ಮಾತನಾಡುತ್ತಿದ್ದೇವೆ. ಪ್ರಧಾನಿ ಮೋದಿ ಒಬ್ಬ ಮಹಾನ್ ವ್ಯಕ್ತಿ. ನಾನು ಅಲ್ಲಿಗೆ ಹೋಗಬೇಕೆಂದು ಅವರು ಬಯಸುತ್ತಾರೆ, ನಾನು ಭಾರತಕ್ಕೆ ಹೋಗಲು ಬಯಸಿದ್ದೇನೆ, ನಾವು ಅದನ್ನು ಲೆಕ್ಕಾಚಾರ ಮಾಡುತ್ತೇವೆ, ಆ ಮೂಲಕ ಮುಂದಿನ ವರ್ಷ ತಾನು ಭಾರತಕ್ಕೆ ಭೇಟಿ ನೀಡಬಹುದು ಎಂದು ಸೂಚಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಬ್ಬು ಬೆಳೆಗಾರರ ಕಿಚ್ಚು: ಬೆಳಗಾವಿಯಲ್ಲಿ ಪೊಲೀಸರ ಲಾಠಿ ಚಾರ್ಜ್ ವಿರುದ್ಧ ಸಿಡಿದೆದ್ದ ರೈತರು; ಕಲ್ಲು ತೂರಾಟ; ಪರಿಸ್ಥಿತಿ ಉದ್ವಿಗ್ನ!

ಕಬ್ಬು ಬೆಳೆಗಾರರ ಪ್ರತಿಭಟನೆ: ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ತುರ್ತು ಸಭೆ; ದರ ಏರಿಕೆಗೆ ಕೇಂದ್ರದ ಮೇಲೆ ಒತ್ತಡ ಹೇರಲು ಆಗ್ರಹ..!

'ಹೊರೆ ಹೊತ್ತುಕೊಳ್ಳಬೇಡಿ, ನಿಮ್ಮ ಮಗನದ್ದು ತಪ್ಪು ಎಂದರೆ ಭಾರತದಲ್ಲಿ ಯಾರೂ ನಂಬುವುದಿಲ್ಲ'; Air India ಪೈಲಟ್ ತಂದೆಗೆ 'ಸುಪ್ರೀಂ' ಸಾಂತ್ವನ

ಐಪಿಒಗೆ Edtech ಯೂನಿಕಾರ್ನ್ PhysicsWallah: ಷೇರುಗಳ ಬೆಲೆ ವಿವರ ಹೀಗಿದೆ...

ಜಯ್ ಶಾ ಮಧ್ಯ ಪ್ರವೇಶ: ಕೊನೆಗೂ ಭಾರತ Pratika Rawal ಗೆ ಸಿಕ್ತು ಪದಕ, ಐಸಿಸಿ ನಿಯಮಕ್ಕೇ ತಿದ್ದುಪಡಿ?

SCROLL FOR NEXT