ಪ್ರಧಾನಿ ಮೋದಿ, ಜೈರಾಮ್ ರಮೇಶ್ ಸಾಂದರ್ಭಿಕ ಚಿತ್ರ 
ದೇಶ

ಭಾರತ-ಪಾಕ್ ಯುದ್ಧ ಕುರಿತು ಮತ್ತೆ ಟ್ರಂಪ್ ಹೇಳಿಕೆ: ಈ ಬಗ್ಗೆ 'ಹೌಡಿ' ಮೋದಿ ಏನು ಹೇಳುತ್ತಾರೆ?

2019 ರಲ್ಲಿ ಹೂಸ್ಟನ್‌ನಲ್ಲಿ ನಡೆದ "ಹೌಡಿ ಮೋದಿ" ಕಾರ್ಯಕ್ರಮವನ್ನು ಉಲ್ಲೇಖಿಸಿ, ಟ್ರಂಪ್‌ಟ್ರ್ಯಾಕರ್ ಇಂದು ಬೆಳಿಗ್ಗೆ 59ಕ್ಕೆ ತಲುಪಿದೆ. ವ್ಯಾಪಾರ ಮತ್ತು ಸುಂಕಾಸ್ತ್ರ ಬಳಸಿ 24 ಗಂಟೆಯೊಳಗೆ ಆಪರೇಷನ್ ಸಿಂಧೂರ್ ನಿಲ್ಲಿಸಿದೆ.

ನವದೆಹಲಿ: ತಮ್ಮಿಂದಲೇ ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಂತಿತು ಎಂದು ಅಮೆರಿಕಾ ಅಧ್ಯಕ್ಷ ಮತ್ತೆ ಪುನರುಚ್ಛರಿಸಿದ್ದು, ಇದರ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ಟ್ರಂಪ್ ತಮ್ಮ ಹೇಳಿಕೆಗಳನ್ನು 59 ಬಾರಿ ಪುನರಾವರ್ತಿಸಿದ್ದಾರೆ. ಇಂದು ಬೆಳಿಗ್ಗೆ ಟ್ರಂಪ್‌ ಟ್ರ್ಯಾಕರ್ 59 ಅನ್ನು ತಲುಪಿದೆ ಎಂದು ಹೇಳಿದ್ದಾರೆ.

2019 ರಲ್ಲಿ ಹೂಸ್ಟನ್‌ನಲ್ಲಿ ನಡೆದ "ಹೌಡಿ ಮೋದಿ" ಕಾರ್ಯಕ್ರಮವನ್ನು ಉಲ್ಲೇಖಿಸಿ, ಟ್ರಂಪ್‌ಟ್ರ್ಯಾಕರ್ ಇಂದು ಬೆಳಿಗ್ಗೆ 59ಕ್ಕೆ ತಲುಪಿದೆ. ವ್ಯಾಪಾರ ಮತ್ತು ಸುಂಕಾಸ್ತ್ರ ಬಳಸಿ 24 ಗಂಟೆಯೊಳಗೆ ಆಪರೇಷನ್ ಸಿಂಧೂರ್ ನಿಲ್ಲಿಸಿದೆ. ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಬಹುತೇಕ ನಿಲ್ಲಿಸಿದೆ. ನಾನು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದ್ದೇನೆ. ಭಾರತಕ್ಕೆ ಭೇಟಿ ನೀಡಲು ಬಯಸುತ್ತಿದ್ದೇನೆಂದು ಟ್ರಂಪ್ ಅವರು ಹೇಳಿದ್ದಾರೆ. ಮುಂದಿನ ವರ್ಷ ಟ್ರಂಪ್ ಭಾರತಕ್ಕೆ ಭೇಟಿ ನೀಡಬಹುದು. ಈ ಬಗ್ಗೆ ಹೌಡಿ ಮೋದಿ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಅವರು, ನಾನು ಕೊನೆಗೊಳಿಸಿದ ಎಂಟು ಯುದ್ಧಗಳಲ್ಲಿ, ಐದು ಅಥವಾ ಆರು ಯುದ್ಧಗಳು ಸುಂಕಗಳಿಂದಾಗಿ ನಿಂತವು. ನೀವು ಭಾರತ ಮತ್ತು ಪಾಕಿಸ್ತಾನವನ್ನು ನೋಡಿದರೆ, ಅವರು ಹೋರಾಡಲು ಹೊರಟಿದ್ದರು, ಅವೆರಡೂ ಪರಮಾಣು ರಾಷ್ಟ್ರಗಳು. ಎಂಟು ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ನಂತರ ನಾನು ಮಧ್ಯಪ್ರವೇಶಿಸಿ 'ನೀವು ಹೋರಾಡಲು ಹೋದರೆ, ನಾನು ನಿಮ್ಮ ಮೇಲೆ ಸುಂಕಗಳನ್ನು ವಿಧಿಸುತ್ತೇನೆ ಎಂದು ಹೇಳಿದೆ. ಹೀಗಾಗಿ 24 ಗಂಟೆಗಳ ಒಳಗೆ, ನಾನು ಯುದ್ಧವನ್ನು ಇತ್ಯರ್ಥಪಡಿಸಿದೆ. ಸುಂಕಗಳಿಲ್ಲದೆ, ನಾನು ಅದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದರು.

ಇದೇ ವೇಳೆ ಪ್ರಧಾನಿ ಮೋದಿಯವರನ್ನು ಹೊಗಳಿದ ಅವರು, ಮೋದಿ ‘ಒಬ್ಬ ಮಹಾನ್ ವ್ಯಕ್ತಿ’ ಮತ್ತು ‘ಉತ್ತಮ ಸ್ನೇಹಿತ’ ಎಂದು ಬಣ್ಣಿಸಿದರು.

ಭಾರತ ರಷ್ಯಾದಿಂದ ಖರೀದಿಸುವುದನ್ನು ಹೆಚ್ಚಾಗಿ ನಿಲ್ಲಿಸಿದೆ. ಅವರು ನನ್ನ ಸ್ನೇಹಿತ ಮತ್ತು ನಾವು ಮಾತನಾಡುತ್ತಿದ್ದೇವೆ. ಪ್ರಧಾನಿ ಮೋದಿ ಒಬ್ಬ ಮಹಾನ್ ವ್ಯಕ್ತಿ. ನಾನು ಅಲ್ಲಿಗೆ ಹೋಗಬೇಕೆಂದು ಅವರು ಬಯಸುತ್ತಾರೆ, ನಾನು ಭಾರತಕ್ಕೆ ಹೋಗಲು ಬಯಸಿದ್ದೇನೆ, ನಾವು ಅದನ್ನು ಲೆಕ್ಕಾಚಾರ ಮಾಡುತ್ತೇವೆ, ಆ ಮೂಲಕ ಮುಂದಿನ ವರ್ಷ ತಾನು ಭಾರತಕ್ಕೆ ಭೇಟಿ ನೀಡಬಹುದು ಎಂದು ಸೂಚಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT