ಸಾಂದರ್ಭಿಕ ಚಿತ್ರ 
ದೇಶ

ಬಿಹಾರದ 2ನೇ ಹಂತದ ಚುನಾವಣೆಗೂ ಮುನ್ನ ನೇಪಾಳ-ಭಾರತ ಗಡಿ ಬಂದ್

ಸರ್ಲಾಹಿ, ಮಹೋಟ್ಟಾರಿ ಮತ್ತು ರೌತತ್ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿನ ಗಡಿ ಪಾಯಿಂಟ್ ಗಳನ್ನು ಮೂರು ದಿನಗಳವರೆಗೆ ಮುಚ್ಚಲಾಗಿದೆ.

ಪಾಟ್ನಾ: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಬಿಹಾರ ವಿಧಾನಸಭೆ ಚುನಾವಣೆಯ ಎರಡನೇ ಹಂತಕ್ಕೆ ಮುಂಚಿತವಾಗಿ, ನೇಪಾಳ-ಭಾರತ ಗಡಿಯುದ್ದಕ್ಕೂ ಇರುವ ಗಡಿ ಪಾಯಿಂಟ್ ಗಳನ್ನು 72 ಗಂಟೆಗಳ ಕಾಲ ಬಂದ್ ಮಾಡಲಾಗಿದೆ.

ಸರ್ಲಾಹಿ, ಮಹೋಟ್ಟಾರಿ ಮತ್ತು ರೌತತ್ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿನ ಗಡಿ ಪಾಯಿಂಟ್ ಗಳನ್ನು ಮೂರು ದಿನಗಳವರೆಗೆ ಮುಚ್ಚಲಾಗಿದೆ.

ಮಹೋಟ್ಟಾರಿ ಜಿಲ್ಲೆ ಭಾರತದೊಂದಿಗಿನ ತನ್ನ ಹನ್ನೊಂದು ಗಡಿ ಪಾಯಿಂಟ್ ಳನ್ನು ಬಂದ್ ಮಾಡಿದೆ.

"ನವೆಂಬರ್ 11 ರಂದು ಬಿಹಾರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಭದ್ರತಾ ದೃಷ್ಟಿಕೋನದಿಂದ, ನಾವು ಗಡಿಯುದ್ದಕ್ಕೂ ಜನ ಸಂಚಾರವನ್ನು ಸ್ಥಗಿತಗೊಳಿಸಿದ್ದೇವೆ. ಮಹೋಟ್ಟಾರಿ ಜಿಲ್ಲೆಯ ಎಲ್ಲಾ ಗಡಿ ಪಾಯಿಂಟ್ ಗಳನ್ನು ಮುಚ್ಚಲಾಗಿದೆ. ಶನಿವಾರ ಸಂಜೆ 6 ರಿಂದ ಮಂಗಳವಾರ ಸಂಜೆ 6 ರವರೆಗೆ ಗಡಿ ಪಾಯಿಂಟ್ ಗಳನ್ನು ಬಂದ್ ಮಾಡಲಾಗಿದೆ" ಎಂದು ಮಹೋಟ್ಟಾರಿಯ ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ ಸಂಜಯ್ ಕುಮಾರ್ ಪೋಖ್ರೆಲ್ ಅವರು ಹೇಳಿದ್ದಾರೆ.

ತುರ್ತು ಪ್ರಕರಣಗಳನ್ನು ಹೊರತುಪಡಿಸಿ, ಗಡಿಯಾಚೆಗಿನ ಎಲ್ಲಾ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಭಾರತದ ಗಡಿಯುದ್ದಕ್ಕೂ ಇರುವ ಜಿಲ್ಲಾಡಳಿತ ಕಚೇರಿಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನರವಾಣೆ ಪುಸ್ತಕಕ್ಕೆ ಹೆದರಿ ಮೋದಿ ಲೋಕಸಭೆಗೆ ಗೈರು, ಭದ್ರತಾ ಕಾರಣದಿಂದ ಅಲ್ಲ: ರಾಹುಲ್ ಗಾಂಧಿ

'ಮತದಾರರ ತೀವ್ರ ಪರಿಷ್ಕರಣೆ ವಿಚಾರದಲ್ಲಿ ಯಾವುದೇ ರೀತಿಯ ಅಡಚಣೆಗೆ ಅವಕಾಶ ನೀಡಲ್ಲ': ಮಮತಾ ಸರ್ಕಾರಕ್ಕೆ 'ಸುಪ್ರೀಂ' ಶಾಕ್

ಸಂಸತ್ತಿನಲ್ಲಿ ಕೋಲಾಹಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಂದ ಸಭಾತ್ಯಾಗ; ಲೋಕಸಭೆ ನಾಳೆಗೆ ಮುಂದೂಡಿಕೆ

ಹುಬ್ಬಳ್ಳಿ: ಕನ್ನಡ, ಕನ್ನಡ ವಿವಾದದ ಬಳಿಕ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ ಬಾಲಿವುಡ್ ಗಾಯಕ ಸೋನು ನಿಗಮ್

ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ: ಎಸ್‌ಐಟಿಯಿಂದ 9 ಪುಟಗಳ ಟಿಪ್ಪಣಿ ಪರಿಶೀಲನೆ; ಅಧಿಕಾರಿಳು ಹೇಳಿದ್ದೇನು?

SCROLL FOR NEXT