ಜೈರಾಮ್ ರಮೇಶ್ 
ದೇಶ

'ವಂದೇ ಮಾತರಂ' ವಿವಾದ: ಪ್ರಧಾನಿ ಮೋದಿ ಹೇಳಿಕೆ ಸಂಪೂರ್ಣ ಸುಳ್ಳು, ದೇಶದ ಕ್ಷಮೆಯಾಚಿಸಬೇಕು- ಕಾಂಗ್ರೆಸ್ ಒತ್ತಾಯ

ವಂದೇ ಮಾತರಂ ಗೀತೆ ಹಾಗೂ ರವೀಂದ್ರನಾಥ ಟ್ಯಾಗೋರ್ ಅವರ ಹೇಳಿಕೆ ನೀಡಲಾಗಿತ್ತು. ದೈನಂದಿನ ಕಾಳಜಿಯ ಪ್ರಸ್ತುತ ವಿಷಯಗಳ ಕುರಿತು ತಮ್ಮ ರಾಜಕೀಯ ಹೋರಾಟಗಳನ್ನು ನಡೆಸಬೇಕು ಎಂದು ಅವರು ಹೇಳಿದ್ದರು.

ನವದೆಹಲಿ: 'ವಂದೇ ಮಾತರಂ' ವಿವಾದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿರುವ ಕಾಂಗ್ರೆಸ್, 1937 ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು "ಅವಮಾನಿಸಿದ್ದಾರೆ" ಎಂದು ಹೇಳಿಕೊಂಡಿದೆ.

ಅದರಲ್ಲಿ ವಂದೇ ಮಾತರಂ ಗೀತೆ ಹಾಗೂ ರವೀಂದ್ರನಾಥ ಟ್ಯಾಗೋರ್ ಅವರ ಹೇಳಿಕೆ ನೀಡಲಾಗಿತ್ತು. ದೈನಂದಿನ ಕಾಳಜಿಯ ಪ್ರಸ್ತುತ ವಿಷಯಗಳ ಕುರಿತು ತಮ್ಮ ರಾಜಕೀಯ ಹೋರಾಟಗಳನ್ನು ನಡೆಸಬೇಕು ಎಂದು ಅವರು ಹೇಳಿದ್ದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಪ್ರಧಾನಿಯವರು ಸಿಡಬ್ಲ್ಯೂಸಿ ಮತ್ತು ರವೀಂದ್ರ ನಾಥ ಟ್ಯಾಗೋರ್ ಅವರನ್ನು ಅವಮಾನಿಸಿದ್ದಾರೆ. ಇದರಲ್ಲಿ ಆಶ್ಚರ್ಯವೇನಿಲ್ಲ, ಏಕೆಂದರೆ "ಮಹಾತ್ಮ ಗಾಂಧಿ ನೇತೃತ್ವದ ನಮ್ಮ ಸ್ವಾತಂತ್ರ್ಯ ಚಳವಳಿಯಲ್ಲಿ ಆರ್‌ಎಸ್‌ಎಸ್ ಯಾವುದೇ ಪಾತ್ರವನ್ನು ವಹಿಸಿಲ್ಲ ಎಂದಿದ್ದಾರೆ.

1937 ರಲ್ಲಿ ರಾಷ್ಟ್ರಗೀತೆ "ವಂದೇ ಮಾತರಂ" ನ ಪ್ರಮುಖ ಚರಣಗಳನ್ನು ಕೈಬಿಡಲಾಗಿತ್ತು. ಇದು ವಿಭಜನೆಯ ಬೀಜಗಳನ್ನು ಬಿತ್ತಿತ್ತು. ಅಂತಹ "ವಿಭಜಕ ಮನಸ್ಥಿತಿ" ಇನ್ನೂ ದೇಶಕ್ಕೆ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿಕೆ ನೀಡಿದ ನಂತರ ಅವರ ವಿರುದ್ಧ ಕಾಂಗ್ರೆಸ್ ತೀವ್ರ ದಾಳಿಯನ್ನು ನಡೆಸುತ್ತಿದೆ.

ಇಂದಿನ ಆನಂದ ಬಜಾರ್ ಪತ್ರಿಕೆಯಲ್ಲಿ ಸೆಮಂತಿ ಘೋಷ್ ಅವರ ಈ ವಿವರವಾದ ಲೇಖನವು ನೆಹರು ಮತ್ತು ವಂದೇ ಮಾತರಂ ಬಗ್ಗೆ ಪ್ರಧಾನಿಯವರ ಹೇಳಿಕೆ ಸಂಪೂರ್ಣವಾಗಿ ಸುಳ್ಳು ಎಂಬುದನ್ನು ಬಹಿರಂಗಪಡಿಸುತ್ತದೆ. ರವೀಂದ್ರನಾಥ ಟ್ಯಾಗೋರ್ ಅವರು ರಾಷ್ಟ್ರೀಯ ಗೀತೆಯಾಗಲು ಹೇಗೆ ಮತ್ತು ಏಕೆ ಕಾರಣರಾಗಿದ್ದರು ಎಂಬುದನ್ನು ಇದು ವಿವರಿಸುತ್ತದೆ.

ಪ್ರಧಾನಿಯವರು ಪಶ್ಚಿಮ ಬಂಗಾಳದ ಜನರಿಗೆ ವಿಶೇಷವಾಗಿ ರಾಷ್ಟ್ರಕ್ಕೆ ಕ್ಷಮೆಯಾಚಿಸಬೇಕು. ಲೇಖಕಿ ಸ್ವತಃ ಪಶ್ಚಿಮ ಬಂಗಾಳದ ಪ್ರಸಿದ್ಧ ಕವಿಗಳಲ್ಲಿ ಒಬ್ಬರಾದ ಶಂಖ ಘೋಷ್ ಅವರ ಪುತ್ರಿಯಾಗಿದ್ದಾರೆ ಎಂದು ಜೈ ರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

360 ಕೆಜಿ ಸ್ಫೋಟಕ, ಶಸ್ತ್ರಾಸ್ತ್ರಗಳು ಪತ್ತೆ ಪ್ರಕರಣ: ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಸೇರಿ ಇಬ್ಬರ ಬಂಧನ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ: ಮೂವರು ಅಧಿಕಾರಿಗಳು ಅಮಾನತು, ಸಮಿತಿ ರಚನೆ

Video: ಮಹಾಪಚಾರ, ಪವಿತ್ರ ತಿರುಮಲದಲ್ಲಿ ಮಾಂಸಾಹಾರ ಸೇವಿಸಿದ 'ಸಿಬ್ಬಂದಿಗಳು', TTD ಕಠಿಣ ಕ್ರಮ

ಬಿಹಾರ ಮೊದಲ ಹಂತದ ಚುನಾವಣೆ: NDA ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಹೆಸರು ಪ್ರಸ್ತಾಪಿಸಿದ ಬಿಜೆಪಿ!

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

SCROLL FOR NEXT