ಸ್ಪೋಟ ಸಂಭವಿಸಿದ ಪ್ರದೇಶದಲ್ಲಿ ತನಿಖಾ ಅಧಿಕಾರಿಗಳು 
ದೇಶ

Delhi Red Fort blast: ಸ್ಪೂಟಕ್ಕೂ ಮುನ್ನ 3 ಗಂಟೆ ಕಾರು ಪಾರ್ಕಿಂಗ್! ನಿರ್ಣಾಯಕ 'ಮೂರು ಆಯಾಮ'ಗಳಲ್ಲಿ ಪೊಲೀಸರ ತನಿಖೆ

ಡಾ. ಉಮರ್ ಚಾಲನೆ ಮಾಡುತ್ತಿದ್ದ i-20 car ಕೆಂಪು ಕೋಟೆ ಪಾರ್ಕಿಂಗ್ ಪ್ರದೇಶದಲ್ಲಿ ಮೂರು ಗಂಟೆಗಳ ಕಾಲ ನಿಲ್ಲಿಸಿದ್ದರ ಬಗ್ಗೆ ಮಹತ್ವದ ತನಿಖೆ ನಡೆಸಲಾಗುತ್ತಿದೆ.

ನವದೆಹಲಿ: ಐತಿಹಾಸಿಕ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಘಟನೆ ಕುರಿತು ದೆಹಲಿ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಮೂರು ನಿರ್ಣಾಯಕ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಶಂಕಿತರ ಚಲನವಲನಗಳು, ಫರಿದಾಬಾದ್‌ನ ವಿಶ್ವವಿದ್ಯಾಲಯವೊಂದರ ಶಂಕಿತರ ಜಾಲ ಮತ್ತು ಘಟನೆಯಲ್ಲಿ ಬಳಸಲಾದ ಸ್ಫೋಟಕದ ಸ್ವರೂಪದ ಮೇಲೆ ಕೇಂದ್ರೀಕರಿಸಿದ್ದಾರೆ ಎಂದು ದೆಹಲಿ ಪೊಲೀಸರ ಮೂಲಗಳು ಮಂಗಳವಾರ ತಿಳಿಸಿವೆ.

ಮೂರು ಗಂಟೆಗಳ ಕಾಲ ಕಾರು ಪಾರ್ಕಿಂಗ್ ಉದ್ದೇಶವೇನು? ಡಾ. ಉಮರ್ ಚಾಲನೆ ಮಾಡುತ್ತಿದ್ದ i-20 car ಕೆಂಪು ಕೋಟೆ ಪಾರ್ಕಿಂಗ್ ಪ್ರದೇಶದಲ್ಲಿ ಮೂರು ಗಂಟೆಗಳ ಕಾಲ ನಿಲ್ಲಿಸಿದ್ದರ ಬಗ್ಗೆ ಮಹತ್ವದ ತನಿಖೆ ನಡೆಸಲಾಗುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದಾಗ ಕಾರು ಸ್ಪೋಟಿಸಲು ಸಂಚು ರೂಪಿಸಲಾಗಿತ್ತೇ ಎಂಬುದರ ಕುರಿತು ಪೊಲೀಸರು ಸಮಗ್ರವಾಗಿ ತನಿಖೆ ನಡೆಸುತ್ತಿದ್ದಾರೆ.

ಶಂಕಿತ ಡಾ. ಉಮರ್ ಮಧ್ಯಾಹ್ನ 3:19 ರಿಂದ ಸಂಜೆ 6:22 ರ ನಡುವೆ ಏನು ಮಾಡುತ್ತಿದ್ದ? ಆತ ಕಾರು ಬಳಿಯೇ ಇದ್ದನಾ? ಯಾರನ್ನಾದರೂ ಭೇಟಿಯಾಗಿದ್ದಾನೆಯೇ ಅಥವಾ ಅಲ್ಲಿ ಪರಿಶೀಲನೆ ಮಾಡುತ್ತಿದ್ದನಾ? ಎಂಬುದನ್ನು ಪತ್ತೆ ಹಚ್ಚಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಸ್ಫೋಟ ಸಂಭವಿಸುವ ಮುನ್ನ ಸಮೀಪದ ರಸ್ತೆಗಳಲ್ಲಿ ಪೀಕ್ ಆವರ್ ನಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದಕ್ಕೆ ಆತ ಕಾಯುತ್ತಿದ್ದನೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಶಂಕಿತ ಯಾರೊಂದಿಗಾದರೂ ಮಾತುಕತೆ ನಡೆಸಿದ್ದಾನೆಯೇ?

ಮೂಲಗಳ ಪ್ರಕಾರ, ಶಂಕಿತ ಮಧ್ಯಾಹ್ನ 3-19 ರ ಸುಮಾರಿನಲ್ಲಿ ಪಾರ್ಕಿಂಗ್ ಸ್ಥಳಕ್ಕೆ ಬಂದಿದ್ದು, ಸಂಜೆ 6.22 ಕ್ಕೆ ನಿರ್ಗಮಿಸಿದ್ದಾನೆ. ಈ ಸಮಯದಲ್ಲಿ ಆತ ಯಾರೊಂದಿಗಾದರೂ ಮಾತುಕತೆ ನಡೆಸಿದ್ದಾನೆಯೇ ಅಥವಾ ಬೇರೆ ಮೂಲದಿಂದ ಸೂಚನೆ ಬಂದಿದ್ದೆಯೇ ಎಂಬುದನ್ನು ಪೊಲೀಸರು ವಿಶ್ಲೇಷಿಸುತ್ತಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಹೆಚ್ಚಿನ ಭದ್ರತಾ ವಲಯದಲ್ಲಿ ಆತ ಯಾಕೆ ಉಳಿದುಕೊಂಡಿದ್ದ ಎಂಬುದರ ಕುರಿತು ತನಿಖಾಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ. ಆತ ಲಾಜಿಸ್ಟಿಕಲ್ ಸಹಾಯಕ್ಕಾಗಿ ಅಥವಾ ಸೂಚನೆಗಾಗಿ ಕಾಯುತ್ತಿದ್ದನಾ?ಎಂಬ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ.

ತನಿಖೆಯ ಎರಡನೇ ಆಯಾಮ: ಫರಿದಾಬಾದ್‌ನ ವಿಶ್ವವಿದ್ಯಾಲಯದ ವೈದ್ಯರ ಸುತ್ತ ಕೇಂದ್ರೀಕರಿಸಿದೆ. ತನಿಖೆ ವೇಳೆ ಅವರ ಹೆಸರುಗಳು ಹೊರಬಂದಿವೆ. ಈ ಶಂಕಿತ ಜಾಲಕ್ಕೆ ಸಂಬಂಧಿಸಿದ ಸಕ್ರಿಯ ಮತ್ತು ನಿಷ್ಕ್ರಿಯ ಸದಸ್ಯರ ಸಂಖ್ಯೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ದೆಹಲಿ ಸ್ಫೋಟ ಮತ್ತು ಫರಿದಾಬಾದ್ ನಲ್ಲಿ ವೈದ್ಯರ ನಂಟು ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೊಡ್ಡ ಭಯೋತ್ಪಾದಕ ಜಾಲದ ಭಾಗವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಶಸ್ತ್ರಾಸ್ತ್ರಗಳು ಏಲ್ಲಿಂದ ಬಂದವು?

ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ಮೂಲ, ಅವು ಪ್ರತ್ಯೇಕ ಸರಕುಗಳಲ್ಲಿ ಬಂದಿವೆಯೇ ಮತ್ತು ಅವುಗಳನ್ನು ವಿತರಿಸಿದವರು ಯಾರು ಎಂಬುದರ ಬಗ್ಗೆ ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಸಂಪರ್ಕಕ್ಕಾಗಿ ಬಳಸಲಾಗುತ್ತಿದ್ದ ಟೆಲಿಗ್ರಾಮ್ ಗುಂಪಿನ ಇತರ ಸದಸ್ಯರನ್ನು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಉಮರ್, ಮುಜಮ್ಮಿಲ್ ಅಥವಾ ಆದಿಲ್ ದೆಹಲಿಯಲ್ಲಿ ವೈಯಕ್ತಿಕವಾಗಿ ಪರಿಶೀಲನೆ ನಡೆಸಿದ್ದಾರೆಯೇ ಅಥವಾ ಈ ಉದ್ದೇಶಕ್ಕಾಗಿ ಇನ್ನೊಬ್ಬ ಕಾರ್ಯಕರ್ತನನ್ನು ಅವಲಂಬಿಸಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಸೋಮವಾರ ಮಹತ್ವದ ಪ್ರಗತಿಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಹರಿಯಾಣ ಪೊಲೀಸರೊಂದಿಗೆ ಸೇರಿ, ಫರಿದಾಬಾದ್‌ನ ಅಪಾರ್ಟ್‌ಮೆಂಟ್‌ನಿಂದ 360 ಕೆಜಿ ಶಂಕಿತ ಅಮೋನಿಯಂ ನೈಟ್ರೇಟ್ ಮತ್ತು ರಾಸಾಯನಿಕಗಳು, ಡಿಟೋನೇಟರ್‌ಗಳು ಮತ್ತು ವೈರ್‌ಗಳು ಸೇರಿದಂತೆ 2,900 ಕೆಜಿ IED ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಡಾ. ಮುಜಮ್ಮಿಲ್ ಮತ್ತು ಆದಿಲ್ ರಾಥರ್ ಅವರನ್ನು ಬಂಧಿಸಲಾಗಿದೆ.

ತನಿಖೆಯ ಮೂರನೇ ಅಯಾಮ: ಸ್ಫೋಟದ ಸ್ವರೂಪದ ಮೇಲೆ ಅಧಿಕಾರಿಗಳು ಗಮನ ಕೇಂದ್ರೀಕರಿಸುತ್ತದೆ. ರಾಜಧಾನಿಯಲ್ಲಿ ಈ ಹಿಂದೆ ನಡೆದ ಸ್ಫೋಟಗಳಿಲ್ಲಿ ಸಾಮಾನ್ಯವಾಗಿ ಉಗುರುಗಳು, ಬಾಲ್ ಬೇರಿಂಗ್‌ಗಳು ಅಥವಾ ಬ್ಲೇಡ್‌ಗಳಂತಹ ಮೊಂಡಾದ ವಸ್ತುಗಳು ಈ ಸ್ಪೋಟದಲ್ಲಿ ಕಂಡುಬಂದಿಲ್ಲ. ಪ್ರಬಲ ಸ್ಫೋಟದ ನಂತರ ಸಾಮಾನ್ಯವಾಗಿ ಕಂಡುಬರುವ ಕುಳಿ ಮತ್ತಿತರ ಯಾವುದೇ ಸೂಚನೆ ಉಂಟಾಗದೆ ಸ್ಫೋಟವು ಹೇಗೆ ಗಮನಾರ್ಹ ಹಾನಿಯನ್ನುಂಟುಮಾಡಿತು. ಸಮೀಪದಲ್ಲಿದ್ದ ವಾಹನಗಳನ್ನು ಛಿದ್ರಗೊಳಿಸಿತು. ಎಂಬುದರ ಬಗ್ಗೆ ತನಿಖಾಧಿಕಾರಿಗಳು ಗೊಂದಲಕ್ಕೊಳಗಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ ವಿಧಾನಸಭಾ ಚುನಾವಣೆ 2025: Exit Poll Results ಬಹಿರಂಗ; ಯಾರಿಗೆ ಎಷ್ಟು ಸ್ಥಾನ?- ಇಲ್ಲಿದೆ ಮಾಹಿತಿ

Delhi Blast: ಆಪರೇಷನ್ ಸಿಂದೂರ್ ಗೆ ಸೇಡು... 20 ಟೈಮರ್, 3000 ಕೆಜಿ ಸ್ಫೋಟಕ.. ಉಗ್ರರ ಯೋಜನೆ ಕಾರ್ಯಗತವಾಗಿದ್ದರೇ ಇತಿಹಾಸದ ಅತೀ ದೊಡ್ಡ 'ಭಯೋತ್ಪಾದಕ ದಾಳಿ'!

Bihar Elections: ಎರಡನೇ ಹಂತದಲ್ಲಿ ದಾಖಲೆಯ ಶೇ. 67.14 ರಷ್ಟು ಮತದಾನ

ಕೆಂಪು ಕೋಟೆ ಬಳಿಯ ಸ್ಫೋಟ: ದಿನಬಳಕೆಯ ವಸ್ತುಗಳು ಭಯೋತ್ಪಾದನೆಯ ಆಯುಧವಾದದ್ದು ಹೇಗೆ? (ಜಾಗತಿಕ ಜಗಲಿ)

Delhi Blast: ಲಖನೌನಲ್ಲಿ ಡಾ. ಶಾಹೀನ್ ಶಾಹಿದ್ ಮನೆಯಲ್ಲಿ ಪೊಲೀಸರಿಂದ ತೀವ್ರ ಶೋಧ

SCROLL FOR NEXT