ಆಸ್ಪತ್ರೆಯಲ್ಲಿ ಅಮಿತ್ ಶಾ 
ದೇಶ

ದೆಹಲಿ ಸ್ಫೋಟದ ನಂತರ ಅಮಿತ್ ಶಾ ಗುಜರಾತ್ ಭೇಟಿ ರದ್ದು

ಅಮಿತ್ ಶಾ ಅವರು ನಾಳೆ ಗುಜರಾತ್ ಗೆ ತೆರಳಬೇಕಿತ್ತು. ಆದರೆ ಇಂದು ಅವರ ಗುಜರಾತ್ ಭೇಟಿ ರದ್ದಾಗಿದೆ.

ಅಹಮದಾಬಾದ್: ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗುಜರಾತ್ ಭೇಟಿ ರದ್ದಾಗಿದೆ ಎಂದು ಬಿಜೆಪಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಅಮಿತ್ ಶಾ ಅವರು ನಾಳೆ ಗುಜರಾತ್ ಗೆ ತೆರಳಬೇಕಿತ್ತು. ಆದರೆ ಇಂದು ಅವರ ಗುಜರಾತ್ ಭೇಟಿ ರದ್ದಾಗಿದ್ದು, ರದ್ದತಿಗೆ ಯಾವುದೇ ಅಧಿಕೃತ ಕಾರಣ ನೀಡಲಾಗಿಲ್ಲವಾದರೂ, ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರು ಸ್ಫೋಟದ ನಂತರ ಕೇಂದ್ರ ಗೃಹ ಸಚಿವರು ಆ ವಿಚಾರದಲ್ಲಿ ಹೆಚ್ಚು ಕಾರ್ಯನಿರತರಾಗಿದ್ದಾರೆ ಎಂದು ನಂಬಲಾಗಿದೆ.

ನವೆಂಬರ್ 13 ರಂದು ಸಬರಮತಿ ನದಿ ಮುಂಭಾಗದ ಈವೆಂಟ್ ಸೆಂಟರ್‌ನಲ್ಲಿ ಅಹಮದಾಬಾದ್ ಆಹಾರ ಉತ್ಸವ ಮತ್ತು ಅಹಮದಾಬಾದ್ ಅಂತರರಾಷ್ಟ್ರೀಯ ಪುಸ್ತಕ ಉತ್ಸವ 2025 ಅನ್ನು ಅಮಿತ್ ಶಾ ಅವರು ಉದ್ಘಾಟಿಸಬೇಕಾಗಿತ್ತು. ಮೆಹ್ಸಾನಾದ ಬೋರಿಯಾವಿಯಲ್ಲಿರುವ ದೂಧ್‌ಸಾಗರ್ ಡೈರಿಯಲ್ಲಿ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವರನ್ನು ಆಹ್ವಾನಿಸಲಾಗಿತ್ತು ಎಂದು ಗಾಂಧಿನಗರ ಲೋಕಸಭಾ ವಕ್ತಾರ ಮತ್ತು ಬಿಜೆಪಿ ನಾಯಕ ಬಿಮಲ್ ಜೋಶಿ ತಿಳಿಸಿದ್ದಾರೆ.

"ಅಹಮದಾಬಾದ್ ಮತ್ತು ಮೆಹ್ಸಾನಾಗೆ ಅಮಿತ್ ಶಾ ಅವರ ಭೇಟಿ ರದ್ದಾಗಿದೆ. ಕೇಂದ್ರ ಸಚಿವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಬೋರಿಯಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ" ಎಂದು ಜೋಶಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಸಿವಿಲ್ ಸೇವಾ ಹುದ್ದೆಗಳಿಗೆ ನೇಮಕಾತಿ ವಯೋಮಿತಿ 5 ವರ್ಷ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

ಐಷಾರಾಮಿ ರಿಯಲ್ ಎಸ್ಟೇಟ್ ಮೂಲಕ ಅಮೆರಿಕದಿಂದ 'ಹೊಸ ಗಾಜಾ' ಕಟ್ಟುವ ಭರವಸೆ!

ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತದಿಂದ ಮುರಳಿ ಕೃಷ್ಣ ಸಾವು!

1997ರ ಮಂಗಳೂರು ಡಬಲ್ ಮರ್ಡರ್ ಪ್ರಕರಣ: 29 ವರ್ಷಗಳ ಬಳಿಕ ಕುಖ್ಯಾತ 'ದಂಡುಪಾಳ್ಯ ಗ್ಯಾಂಗ್' ಸದಸ್ಯನ ಬಂಧನ!

ಟ್ರಂಪ್ ರ 'ಶಾಂತಿ ಮಂಡಳಿ' ಸೇರಲು ಭಾರತ ನಕಾರ; ಪಾಕಿಸ್ತಾನ ಸಹಿ!

SCROLL FOR NEXT