ದೆಹಲಿ ಸ್ಫೋಟ 
ದೇಶ

ಒಂದು ವರ್ಷದಿಂದ ಆತ್ಮಹತ್ಯಾ ಬಾಂಬರ್‌ಗಾಗಿ 'ವೈಟ್ ಕಾಲರ್' ಭಯೋತ್ಪಾದಕ ಮಾಡ್ಯೂಲ್ ಹುಡುಕಾಟ: ಅಧಿಕಾರಿಗಳ ಮಾಹಿತಿ

ಈ ವರ್ಷದ ಏಪ್ರಿಲ್‌ನಲ್ಲಿ ಆ ವ್ಯಕ್ತಿ ತನ್ನ ಕಳಪೆ ಆರ್ಥಿಕ ಸ್ಥಿತಿ ಮತ್ತು ಇಸ್ಲಾಂನಲ್ಲಿ ಆತ್ಮಹತ್ಯೆ ನಿಷಿದ್ಧ ಎಂಬ ನಂಬಿಕೆಯನ್ನು ಉಲ್ಲೇಖಿಸಿ ಹಿಂದೆ ಸರಿದ ನಂತರ ಈ ಯೋಜನೆ ವಿಫಲವಾಯಿತು.

ಶ್ರೀನಗರ: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪತ್ತೆಹಚ್ಚಿದ 'ವೈಟ್-ಕಾಲರ್' ಭಯೋತ್ಪಾದಕ ಮಾಡ್ಯೂಲ್, ಕಳೆದ ವರ್ಷದಿಂದ ಆತ್ಮಹತ್ಯಾ ಬಾಂಬರ್‌ಗಾಗಿ ಸಕ್ರಿಯವಾಗಿ ಹುಡುಕಾಟ ನಡೆಸುತ್ತಿತ್ತು. ಡಾ. ಉಮರ್ ನಬಿ ಈ ಯೋಜನೆಯನ್ನು ಮುಂದಿಟ್ಟಿದ್ದ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಬಂಧಿತ ಸಹ-ಆರೋಪಿಯ ವಿಚಾರಣೆ ನಡೆಸಿದಾಗ, ಕೆಂಪು ಕೋಟೆ ಬಳಿ ಸ್ಫೋಟಗೊಂಡ ಸ್ಫೋಟಕ ತುಂಬಿದ ಕಾರನ್ನು ಚಾಲನೆ ಮಾಡುವಾಗ ಸಾವಿಗೀಡಾಗಿದ್ದಾನೆಂದು ಭಾವಿಸಲಾದ ಉಮರ್, ಒಬ್ಬ ಕಠಿಣ ಮೂಲಭೂತವಾದಿ ಮತ್ತು ತಮ್ಮ ಭಯೋತ್ಪಾದಕ ಕಾರ್ಯಾಚರಣೆಗಳು ಯಶಸ್ವಿಯಾಗಲು ಆತ್ಮಹತ್ಯಾ ಬಾಂಬರ್ ಅಗತ್ಯವಿದೆ ಎಂದು ಒತ್ತಾಯಿಸಿದನು ಎನ್ನಲಾಗಿದೆ.

ಡಾ. ಅದೀಲ್ ರಾಥರ್ ಮತ್ತು ಡಾ. ಮುಜಾಫ್ಪರ್ ಗನೈ ಸೇರಿದಂತೆ ಸಹ-ಆರೋಪಿಗಳ ವಿಚಾರಣೆಯ ಆಧಾರದ ಮೇಲೆ, ತಕ್ಷಣವೇ ಶ್ರೀನಗರ ಪೊಲೀಸರು ದಕ್ಷಿಣ ಕಾಶ್ಮೀರದ ಖಾಜಿಗುಂಡ್‌ಗೆ ಒಂದು ತಂಡವನ್ನು ಕಳುಹಿಸಿ, ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದ ಜಾಸಿರ್ ಅಲಿಯಾಸ್ 'ಡ್ಯಾನಿಶ್' ನನ್ನು ಬಂಧಿಸಿದರು.

ಬಂಧಿತ ವ್ಯಕ್ತಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕುಲ್ಗಾಮ್‌ನ ಮಸೀದಿಯಲ್ಲಿ 'ಡಾಕ್ಟರ್ ಮಾಡ್ಯೂಲ್' ಅನ್ನು ಭೇಟಿಯಾಗಲು ಒಪ್ಪಿಕೊಂಡರು. ಅಲ್ಲಿಂದ ಅವರನ್ನು ಹರಿಯಾಣದ ಫರಿದಾಬಾದ್‌ನಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯದ ಬಾಡಿಗೆ ವಸತಿಗೆ ಕರೆದೊಯ್ಯಲಾಯಿತು.

ಬಂಧಿತ ವ್ಯಕ್ತಿ ಹೇಳುವಂತೆ, ಮಾಡ್ಯೂಲ್‌ನಲ್ಲಿರುವ ಇತರರು ತಾನು ನಿಷೇಧಿತ ಜೈಶ್-ಎ-ಮೊಹಮ್ಮದ್‌ನ ಓವರ್-ಗ್ರೌಂಡ್ ವರ್ಕರ್ (OGW) ಆಗಬೇಕೆಂದು ಬಯಸಿದ್ದರು. ಆದರೆ, ಉಮರ್ ಆತ್ಮಹತ್ಯಾ ಬಾಂಬರ್ ಆಗಲು ಹಲವಾರು ತಿಂಗಳು ತನಗೆ ತೀವ್ರವಾಗಿ ಬ್ರೈನ್‌ವಾಶ್ ಮಾಡಿದ್ದನು ಎಂದಿದ್ದಾರೆ.

ಆದರೆ, ಈ ವರ್ಷದ ಏಪ್ರಿಲ್‌ನಲ್ಲಿ ಆ ವ್ಯಕ್ತಿ ತನ್ನ ಕಳಪೆ ಆರ್ಥಿಕ ಸ್ಥಿತಿ ಮತ್ತು ಇಸ್ಲಾಂನಲ್ಲಿ ಆತ್ಮಹತ್ಯೆ ನಿಷಿದ್ಧ ಎಂಬ ನಂಬಿಕೆಯನ್ನು ಉಲ್ಲೇಖಿಸಿ ಹಿಂದೆ ಸರಿದ ನಂತರ ಈ ಯೋಜನೆ ವಿಫಲವಾಯಿತು.

ಪಿಟಿಐ ಈ ಹಿಂದೆ ವರದಿ ಮಾಡಿದಂತೆ, ಪುಲ್ವಾಮಾದ 28 ವರ್ಷದ ವೈದ್ಯ ಉಮರ್, ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶಗಳನ್ನು ವ್ಯಾಪಿಸಿರುವ ಜಾಲದಲ್ಲಿ ಅತ್ಯಂತ ಮೂಲಭೂತವಾದಿ ಮತ್ತು ಪ್ರಮುಖ ಕಾರ್ಯಕರ್ತನಾಗಿ ಹೊರಹೊಮ್ಮಿದ್ದನು. ಡಿಸೆಂಬರ್ 6 ರಂದು ಬಾಬರಿ ಮಸೀದಿ ಧ್ವಂಸ ವಾರ್ಷಿಕೋತ್ಸವದ ಸಮಯದಲ್ಲಿ ಅವನು ಪ್ರಬಲ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದನು ಎಂದು ಅಧಿಕಾರಿಗಳು ನಂಬಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ ಗ್ರಾಹಕರಿಗೆ ಶಾಕ್: ಪೆಟ್ರೋಲ್, ಡೀಸೆಲ್ ದರ 5 ದಿನಗಳಲ್ಲಿ ಎರಡನೇ ಬಾರಿ ಏರಿಕೆ

ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನ ಸಮಾವೇಶ: ಗಿನ್ನೆಸ್ ದಾಖಲೆಗೆ ತುಮಕೂರು ಸಜ್ಜು!

ಗಲ್ಫ್ ರಾಷ್ಟ್ರಗಳ ಮನವಿ: ಇರಾನ್ ಮೇಲಿನ ದಾಳಿ ಮುಂದೂಡಿದ ಡೊನಾಲ್ಡ್ ಟ್ರಂಪ್

IPL 2026: ಸನ್ ರೈಸರ್ಸ್ ವಿರುದ್ಧ ಗೆದ್ದ ಬಳಿಕ 'ವಿಸಿಲ್ ಪೋಡು' ಮೂಲಕ CSK ಅಭಿಮಾನಿಗಳನ್ನು ಕೆಣಕಿದ ಇಶಾನ್ ಕಿಶನ್! Video

Gautam Adaniಗೆ ಬಿಗ್ ರಿಲೀಫ್: ಎಲ್ಲ ಪ್ರಕರಣಗಳ ವಿಚಾರಣೆ ಶಾಶ್ವತವಾಗಿ ಕೈ ಬಿಟ್ಟ ಅಮೆರಿಕ: ವರದಿ

SCROLL FOR NEXT