ಡಾ. ಇರ್ಫಾನ್ ಅನ್ಸಾರಿ 
ದೇಶ

ಬಿಎಲ್‌ಒಗಳನ್ನು ಮನೆಯೊಳಗೆ ಕೂಡಿಹಾಕಿ, ಹೆಸರು ಡಿಲೀಟ್ ಮಾಡಲು ಬಿಡಬೇಡಿ: SIR ಬಗ್ಗೆ ಜಾರ್ಖಂಡ್ ಸಚಿವ

ಬಿಜೆಪಿಯು, ಜನರನ್ನು "ಒಳನುಸುಳುಕೋರರು" ಎಂದು ಬ್ರಾಂಡ್ ಮಾಡಲು ಮತ್ತು ಎಸ್‌ಐಆರ್ ಸೋಗಿನಲ್ಲಿ ನಿಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು.

ರಾಂಚಿ: ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ(ಎಸ್‌ಐಆರ್)ಗಾಗಿ ನಿಮ್ಮ ಮನೆಗಳಿಗೆ ಭೇಟಿ ನೀಡಿದರೆ ಅವರನ್ನು ಒಳಗೆ ಕೂಡಿಹಾಕಿ ಬೀಗ ಹಾಕುವಂತೆ ಜಾರ್ಖಂಡ್ ಆರೋಗ್ಯ ಸಚಿವ ಡಾ. ಇರ್ಫಾನ್ ಅನ್ಸಾರಿ ಅವರ ಭಾನುವಾರ ಜನರಿಗೆ ವಿವಾದಾತ್ಮಕ ಸಲಹೆ ನೀಡಿದ್ದಾರೆ.

ಜಾಮ್ತಾರಾದಲ್ಲಿ ನಡೆದ "ಸೇವಾ ಕೆ ಅಧಿಕಾರ್ ಸಪ್ತಾಹ್" ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಇರ್ಫಾನ್ ಅನ್ಸಾರಿ, ಬಿಜೆಪಿಯು, ಜನರನ್ನು "ಒಳನುಸುಳುಕೋರರು" ಎಂದು ಬ್ರಾಂಡ್ ಮಾಡಲು ಮತ್ತು ಎಸ್‌ಐಆರ್ ಸೋಗಿನಲ್ಲಿ ನಿಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು.

"ಯಾರಾದರೂ(ಬಿಎಲ್‌ಒ) ಮತದಾರರ ಪಟ್ಟಿಯಿಂದ ನಿಮ್ಮ ಹೆಸರನ್ನು(ಎಸ್‌ಐಆರ್) ತೆಗೆದುಹಾಕಲು ಬಂದರೆ, ಅವರನ್ನು ನಿಮ್ಮ ಮನೆಯೊಳಗೆ ಕೂಡಿಹಾಕಿ ಬೀಗ ಹಾಕಿ.....ನಾನು ಬಂದು ಬೀಗ ತೆರೆಯುತ್ತೇನೆ. ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ನಿಮ್ಮ ಹೆಸರನ್ನು ತೆಗೆದುಹಾಕಲು ಅವರಿಗೆ ಅವಕಾಶ ನೀಡಬೇಡಿ" ಎಂದು ಇರ್ಫಾನ್ ಅನ್ಸಾರಿ ಹೇಳಿದ್ದಾರೆ.

ಅನ್ಸಾರಿ ಪ್ರಕಾರ, ಮತದಾರರ ಪಟ್ಟಿಯಿಂದ ಮತದಾರರನ್ನು ತೆಗೆದುಹಾಕಲು ಎಸ್‌ಐಆರ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಅದೇ ಪ್ರಕ್ರಿಯೆಯಡಿಯಲ್ಲಿ ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಸುಮಾರು 65 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರ ಪರಿಣಾಮವಾಗಿ ಮಹಾಘಟಬಂಧನ್‌ಗೆ ಸುಮಾರು 80 ವಿಧಾನಸಭಾ ಕ್ಷೇತ್ರಗಳಲ್ಲಿ ನಷ್ಟವಾಗಿದೆ.

ಚುನಾವಣಾ ಆಯೋಗದ ಈ ಕ್ರಮವು ಸಾವಿರಾರು ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಂಡಿದೆ. ಅಲ್ಲದೆ ಅವರ ಪೌರತ್ವದ ಬಗ್ಗೆಯೂ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಅನ್ಸಾರಿ ಹೇಳಿದರು.

ಬಿಜೆಪಿ ಈಗ ಪಶ್ಚಿಮ ಬಂಗಾಳ ಮತ್ತು ನಂತರ ಜಾರ್ಖಂಡ್‌ನಲ್ಲಿ ಇದೇ ರೀತಿಯ ತಂತ್ರಗಳನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ಅವರು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

KSCA ಅಧ್ಯಕ್ಷರಾಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ!

ಕಾಂಗ್ರೆಸ್‌ನಲ್ಲಿ ಅವರ ಶಾಸಕರನ್ನ ಅವರೇ ಖರೀದಿ ಮಾಡುತ್ತಿದ್ದಾರೆ; ಒಬ್ಬರಿಗೆ 100 ಕೋಟಿ ರೂ ಆಫರ್‌; ಕಾರು, ಫ್ಲ್ಯಾಟು ಗಿಫ್ಟು!

ಖಾಸಗಿ ಕಟ್ಟಡಗಳಲ್ಲಿ ಮತಗಟ್ಟೆ ಸ್ಥಾಪನೆ ನಿಷ್ಪಕ್ಷಪಾತದಲ್ಲಿ ರಾಜಿ: ಚುನಾವಣಾ ಆಯೋಗಕ್ಕೆ ಮಮತಾ ಪತ್ರ

ಅಧಿಕಾರಕ್ಕೆ ಬಂದ ಬೆನ್ನಲ್ಲೇ ಬಿಹಾರದಲ್ಲಿ NDA ಸರ್ಕಾರ ಮಹತ್ವದ ಘೋಷಣೆ: ಸನಾತನ ಧರ್ಮ ಪ್ರಚಾರಕ್ಕಾಗಿ 38 ಜಿಲ್ಲೆಗಳಲ್ಲಿ ಸಂಚಾಲಕರ ನೇಮಕ!

SCROLL FOR NEXT