ಬಿಜೆಪಿ ನಾಯಕ ಅಣ್ಣಾಮಲೈ-ಟಿವಿಕೆ ನಾಯಕ ವಿಜಯ್ online desk
ದೇಶ

ತಮಿಳುನಾಡಿನಲ್ಲಿ ಬದಲಾದ ರಾಜಕೀಯ ಸಮೀಕರಣ: ವಿಜಯ್ ಜೊತೆ ಬಿಜೆಪಿ ಮಾತುಕತೆ? ಕಾಲ್ತುಳಿತ ಘಟನೆಯ ನಂತರ TVKಗೆ ಪ್ರಮುಖ ಭರವಸೆ?

ದುರಂತದ ನಂತರ ತಮ್ಮನ್ನು ಬೆಂಬಲಿಸಿದ ರಾಜಕೀಯ ನಾಯಕರಿಗೂ ವಿಜಯ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಚೆನ್ನೈ: ಕರೂರ್ ಕಾಲ್ತುಳಿತದ ಕೆಲವು ದಿನಗಳ ನಂತರ ದಕ್ಷಿಣದ ಸೂಪರ್‌ಸ್ಟಾರ್ ವಿಜಯ್ ಅವರ ಪಕ್ಷವನ್ನು ಬಿಜೆಪಿ ಸಂಪರ್ಕಿಸಿದೆ ಎಂದು ಮೂಲಗಳು ತಿಳಿಸಿವೆ.

2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತನ್ನ ಅವಕಾಶಗಳನ್ನು ಸುಧಾರಿಸಲು ಬಿಜೆಪಿ ವಿಜಯ್ ಅವರ ಅಪಾರ ಅಭಿಮಾನಿಗಳನ್ನು ಬಳಸಿಕೊಳ್ಳಲು ಕೆಲಸ ಮಾಡುತ್ತಿದೆ. ಡಿಎಂಕೆ ಅನ್ಯಾಯವಾಗಿ ಟಾರ್ಗೆಟ್ ಮಾಡಿದರೆ, ವಿಜಯ್ ಒಂಟಿಯಾಗಿರುವುದಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕತ್ವಕ್ಕೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಡಿಎಂಕೆಯನ್ನು ಮೂಲೆಗುಂಪು ಮಾಡಲು ಬಿಜೆಪಿ ಬಯಸುತ್ತಿದೆ ಎಂದು ಟಿವಿಕೆಗೆ ಸಂದೇಶ ರವಾನೆ ಮಾಡಿದೆ ಮತ್ತು ವಿಜಯ್ ಅವರ ಭವಿಷ್ಯದ ರಾಜಕೀಯ ರ್ಯಾಲಿಗಳ ಬಗ್ಗೆ ಅನಿಶ್ಚಿತತೆಗೆ ಕಾರಣವಾದ ಕಾಲ್ತುಳಿತದ ಬಿಕ್ಕಟ್ಟನ್ನು ನಿಭಾಯಿಸಲು ನಟ ಪ್ರಯತ್ನಿಸುತ್ತಿರುವಾಗ ತಾಳ್ಮೆಯಿಂದ ಇರುವಂತೆ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ದುರಂತದ ನಂತರ ತಮ್ಮನ್ನು ಬೆಂಬಲಿಸಿದ ರಾಜಕೀಯ ನಾಯಕರಿಗೂ ವಿಜಯ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಬಿಜೆಪಿಯ ಜೊತೆಗೆ, ಕಾಂಗ್ರೆಸ್ ಕೂಡ ಟಿವಿಕೆಯನ್ನು ಸಂಪರ್ಕಿಸಿದ್ದು ಈ ಬೆಳವಣಿಗೆಗಳು ರಾಷ್ಟ್ರೀಯ ಪಕ್ಷಗಳು ದ್ರಾವಿಡ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪ್ರಾಬಲ್ಯ ಹೊಂದಿರುವ ರಾಜ್ಯ ರಾಜಕೀಯದಲ್ಲಿ ನೆಲೆಯೂರಲು ಒಂದು ಅವಕಾಶವೆಂದು ಗ್ರಹಿಸುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇತ್ತೀಚಿನ ಬೆಳವಣಿಗೆಗಳನ್ನು ತಮಿಳುನಾಡಿನಲ್ಲಿ ಬದಲಾಗುತ್ತಿರುವ ರಾಜಕೀಯ ಚಲನಶೀಲತೆಯ ಸಂದರ್ಭದಲ್ಲಿ ನೋಡಬೇಕು. 2026 ರ ಚುನಾವಣೆಯಲ್ಲಿ ಟಿವಿಕೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ವಿಜಯ್ ಈ ಹಿಂದೆ ಘೋಷಿಸಿದ್ದರು, ಆದರೆ ಇತ್ತೀಚಿನ ಬೆಳವಣಿಗೆಗಳು ಅವರ ಕಾರ್ಯತಂತ್ರಗಳನ್ನು ಮರುರೂಪಿಸಬಹುದು ಎಂದು ಹೇಳಲಾಗುತ್ತಿದೆ.

ಮುಂಬರುವ ಚುನಾವಣೆಯಲ್ಲಿ ಡಿಎಂಕೆ ಆಡಳಿತ ವಿರೋಧಿ ಅಲೆಯನ್ನು ಎದುರಿಸಲಿದೆ ಎಂದು ಬಿಜೆಪಿ ನಾಯಕತ್ವ ನಂಬಿದ್ದು, ಈಗ ಟಿವಿಕೆ ಜೊತೆ ಸೇರಿ ವಿರೋಧ ಪಕ್ಷದ ಮತಗಳನ್ನು ಕ್ರೋಢೀಕರಿಸಲು ಪ್ರಯತ್ನಿಸುತ್ತಿದೆ.

ಸೆಪ್ಟೆಂಬರ್ 27 ರ ಕಾಲ್ತುಳಿತದ ನಂತರ, ಬಿಜೆಪಿ ನೇತೃತ್ವದ ಎನ್‌ಡಿಎ ಕರೂರ್‌ಗೆ ತನ್ನ ನಿಯೋಗವನ್ನು ಕಳಿಸಿತ್ತು. 41 ಜನರ ಸಾವಿಗೆ ಕಾರಣವಾದ ದುಷ್ಕೃತ್ಯಕ್ಕೆ ಡಿಎಂಕೆ ಸರ್ಕಾರವನ್ನು ದೂಷಿಸುತ್ತಿದ್ದ ಬಿಜೆಪಿ, ಟಿವಿಕೆಯನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ವಾದಿಸಿದೆ.

ಡಿಎಂಕೆ ಸಂಪೂರ್ಣವಾಗಿ ಟಿವಿಕೆ ಮೇಲೆ ಆಪಾದನೆಯನ್ನು ಹೊರಿಸುತ್ತಿದ್ದರೂ, ಇತರ ಪಕ್ಷಗಳು ವಿಜಯ್ ಬಗ್ಗೆ ಮೃದು ಧೋರಣೆ ತಾಳಿವೆ, ವಿಶೇಷವಾಗಿ ಎಂಕೆ ಸ್ಟಾಲಿನ್ ನೇತೃತ್ವದ ಪಕ್ಷವು ಚುನಾಯಿತ ಸರ್ಕಾರವನ್ನು ಮುನ್ನಡೆಸುತ್ತಿರುವುದರಿಂದ ಅದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎನ್‌ಡಿಎ ಹೇಳಿದೆ.

ವಿಜಯ್ ಅವರ ವಾಕ್ಚಾತುರ್ಯ ಮತ್ತು ಜನಪ್ರಿಯತೆಯಿಂದಾಗಿ ಟಿವಿಕೆ ಮತದಾರರನ್ನು ಓಲೈಸಬಹುದು ಮತ್ತು ಚುನಾವಣೆಯ ಮೊದಲು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದ್ದು, ಡಿಎಮ್‌ಡಿಕೆ ಮತ್ತು ಎನ್‌ಟಿಕೆ ನಂತಹ ಸಣ್ಣ ಪಕ್ಷಗಳಿಂದ ಮತದಾರರು ಟಿವಿಕೆ ಕಡೆಗೆ ಒಲವು ಬದಲಾಯಿಸಿಕೊಳ್ಳಬಹುದು ಎಂದು ಬಿಜೆಪಿ ಭಾವಿಸುತ್ತದೆ.

ಆದರೆ ಎಐಎಡಿಎಂಕೆ ಜೊತೆಗಿನ ಮೈತ್ರಿಯನ್ನು ಮುರಿಯಲು ಬಿಜೆಪಿ ಬಯಸುವುದಿಲ್ಲವಾದ್ದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಎಐಎಡಿಎಂಕೆಯ ಅತ್ಯಂತ ಅಗತ್ಯವಾದ ಸಂಘಟನಾತ್ಮಕ ಶಕ್ತಿಯೊಂದಿಗೆ, ವಿಜಯ್ ಅವರು ಎನ್ ಡಿಎಗೆ ಮತ್ತಷ್ಟು ಶಕ್ತಿ ತುಂಬಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.

ಸೆಪ್ಟೆಂಬರ್ 27 ರಂದು ನಡೆದ ಕಾಲ್ತುಳಿತದಲ್ಲಿ ಕನಿಷ್ಠ 41 ಜನರು ಸಾವನ್ನಪ್ಪಿದ್ದರು, ರ್ಯಾಲಿಯಲ್ಲಿ 27,000 ಜನರು ಭಾಗವಹಿಸಿದ್ದರು. ಇದು ನಿರೀಕ್ಷಿತ 10,000 ಜನರಿಗಿಂತ ಸುಮಾರು ಮೂರು ಪಟ್ಟು ಹೆಚ್ಚಿನ ಜನಸಂಖ್ಯೆಯಾಗಿತ್ತು. ಈ ದುರಂತಕ್ಕೆ ವಿಜಯ್ ಅವರ ಏಳು ಗಂಟೆಗಳ ವಿಳಂಬವೇ ಕಾರಣ ಎಂದು ಪೊಲೀಸರು ಆರೋಪಿಸಿದ್ದಾರೆ. ಏತನ್ಮಧ್ಯೆ, ಪೊಲೀಸರ ಲಾಠಿಚಾರ್ಜ್ ಕಾಲ್ತುಳಿತಕ್ಕೆ ಕಾರಣ ಎಂದು ವಿಜಯ್ ಅವರ ಪಕ್ಷ ಆರೋಪಿಸಿದೆ. ಘಟನೆಯ ತನಿಖೆಗಾಗಿ ಮದ್ರಾಸ್ ಹೈಕೋರ್ಟ್ ಎಸ್ಐಟಿಯನ್ನು ರಚಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಜವಾಬ್ದಾರಿ ಮರೆತ ಕೆಲ ಮಾಧ್ಯಮಗಳಿಂದ ಸ್ಫೋಟಕ ತಯಾರಿಸುವ ಕುರಿತು ವರದಿ; ಎಚ್ಚರಿಕೆ ಕೊಟ್ಟ ಕೇಂದ್ರ ಸರ್ಕಾರ

Delhi Red Fort blast: ಡಿ.1 ರವರೆಗೆ ಅಲ್ ಫಲಾಹ್ ವಿವಿ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿ ED ಕಸ್ಟಡಿಗೆ

ಮಹಾಯುತಿಯಲ್ಲಿ ಮತ್ತಷ್ಟು ಬಿರುಕು: ಫಡ್ನವೀಸ್ ನೇತೃತ್ವದ ಸಂಪುಟ ಸಭೆ 'ಬಹಿಷ್ಕರಿಸಿದ' ಶಿಂಧೆ ಸಚಿವರು!

Belagavi BlackBuck Death Case: 31 ಕೃಷ್ಣಮೃಗಗಳ ಸಾವಿಗೆ 'Hemorrhagic Septicemia' ಸೋಂಕು ಕಾರಣ..!

ದೆಹಲಿ ಸ್ಫೋಟಕ್ಕೆ 1ವಾರ ಮೊದಲು ಪುಲ್ವಾಮಾ ಮನೆಗೆ ಭೇಟಿ: ಸಹೋದರನಿಗೆ ಮೊಬೈಲ್ ನೀಡಿದ್ದ ಡಾ. ಉಮರ್

SCROLL FOR NEXT