ಬಿಹಾರದಿಂದ ಕಂಡ ಹಿಮಾಲಯ 
ದೇಶ

ಅತ್ಯಪರೂಪದ ದೃಶ್ಯ: ಬಿಹಾರದಿಂದಲೇ ಹಿಮಾಲಯ ದರ್ಶನ; Mount Everest ನೋಡಿ ಬಿಹಾರಿಗಳು ಪುಳಕಿತ! Video

ಬಿಹಾರದ ಗ್ರಾಮವೊಂದರಲ್ಲಿ ಆಗಸದಲ್ಲಿ ಹಿಮಾಲಯದ ಪರ್ವತಶ್ರೇಣಿಗಳು ಗೋಚರವಾಗುತ್ತಿವೆ. ಪ್ರಮುಖವಾಗಿ ಜಗತ್ತಿನ ಅತೀ ಎತ್ತರದ ಶಿಖರ್ ಮೌಂಟ್ ಎವರೆಸ್ಟ್ ಕೂಡ ಬರಿಗಣ್ಣಿಗೆ ಕಾಣುತ್ತಿದೆ.

ಪಾಟ್ನಾ: ನೈಸರ್ಗಿಕ ಅದ್ಭುತಗಳಲ್ಲಿ ಒಂದಾಗಿರುವ ಹಿಮಾಲಯ ಪರ್ವತಶ್ರೇಣಿಗಳನ್ನು ನೋಡುವುದು ಹಲವರ ಜೀವಮಾನ ಕನಸು.. ಅಂತಹುದರಲ್ಲಿ ಕುಳಿತಿದ್ದ ಸ್ಥಳದಿಂದಲೇ ಹಿಮಾಲಯ ಪರ್ವತ ಶ್ರೇಣಿಗಳ ದರ್ಶನವಾದರೆ....

ಅಚ್ಚರಿಯಾದರೂ ನಿಜ.. ಬಿಹಾರದ ಗ್ರಾಮವೊಂದರಲ್ಲಿ ಆಗಸದಲ್ಲಿ ಹಿಮಾಲಯದ ಪರ್ವತಶ್ರೇಣಿಗಳು ಗೋಚರವಾಗುತ್ತಿವೆ. ಪ್ರಮುಖವಾಗಿ ಜಗತ್ತಿನ ಅತೀ ಎತ್ತರದ ಶಿಖರ್ ಮೌಂಟ್ ಎವರೆಸ್ಟ್ ಕೂಡ ಬರಿಗಣ್ಣಿಗೆ ಕಾಣುತ್ತಿದೆ.

ಬಿಹಾರದ ಮಧುಬನಿ ಜಿಲ್ಲೆಯ ಸಣ್ಣ ಗಡಿ ಪಟ್ಟಣವಾದ ಜೈನಗರದಿಂದ ಕಂಡುಬರುತ್ತಿರವ, ಮೌಂಟ್ ಎವರೆಸ್ಟ್ ಶಿಖರದ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ವಿಡಿಯೋದಲ್ಲಿರುವಂತೆ ಬಿಹಾರದ ಮಧುಬನಿ ಜಿಲ್ಲೆಯ ಸಣ್ಣ ಗಡಿ ಪಟ್ಟಣವಾದ ಜೈನಗರದಲ್ಲಿ ಹಿಮಾಲಯ ಪರ್ವತಗಳು ಕಾಣಿಸುತ್ತಿದ್ದು, ಹಿಮಾಲಯದ ಥಮಸೇಕು, ಎವರೆಸ್ಟ್, ಲ್ಹೋಟ್ಸೆ, ಶಾರ್ಟ್ಸೆ, ಮೆರಾ ಪೀಕ್, ಚಮ್ಲಾಂಗ್ ಮತ್ತು ಮಕಲು ಪರ್ವತಗಳು ಕಾಣಿಸುತ್ತಿವೆ.

ಮಳೆ ಕಾರಣ

ಕಳೆದ ಕೆಲವು ದಿನಗಳಿಂದ ಭಾರೀ ಮಳೆಯನ್ನು ಕಂಡಿದ್ದ ಜೈನಗರದಲ್ಲಿ ಈಗ ಆಕಾಶ ಶುಭ್ರವಾಗಿದೆ. ಅಲ್ಲದೇ ಕಲುಷಿತ ಗಾಳಿಯೂ ದೂರವಾಗಿದ್ದರಿಂದ ಶುದ್ಧ ಪರಿಸರದಲ್ಲಿ ಹಿಮದಿಂದ ಆವೃತವಾದ ಪರ್ವತ ಶ್ರೇಣಿಗಳು ಬರಿಗಣ್ಣಿಗೆ ಗೋಚರವಾಗುತ್ತಿವೆ. ನೇಪಾಳದಲ್ಲಿರುವ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್‌ ಎವರೆಸ್ಟ್‌ನ ಭವ್ಯವಾದ ನೋಟವನ್ನು, ಬಿಹಾರದ ಜೈನಗರದ ನಿವಾಸಿಗಳು ತಮ್ಮ ಮನೆಗಳ ಮಹಡಿಯಿಂದಲೇ ನೋಡಿ ಪುಳಕಿತರಾಗುತ್ತಿದ್ದಾರೆ.

ಜೈನಗರದ ಕುರಿತು

ಜೈನಗರವು ಕಮಲಾ ನದಿಯ ದಡದಲ್ಲಿದೆ ಮತ್ತು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಬದಲಾಗುತ್ತಿರುವ ಹಿಮಾಲಯದ ವರ್ಣಗಳ ಸುಂದರ ನೋಟವನ್ನು ಈ ನಗರದಿಂದ ನೋಡಬಹುದಾಗಿದೆ. ವಸಂತ ಪಂಚಮಿಯಿಂದ ಹೋಳಿಯವರೆಗೆ ಮತ್ತು ದುರ್ಗಾ ಪೂಜೆಯಿಂದ ಕಾರ್ತಿಕ ಪೂರ್ಣಿಮೆಯವರೆಗೆ, ಹಿಮಾಲಯದ ಪರ್ವತ ಶ್ರೇಣಿಗಳನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ. ಏಕೆಂದರೆ ಈ ಅವಧಿಯಲ್ಲಿ ಈ ಭಾಗದ ಗಾಳಿ ಶುದ್ಧವಾಗಿರುತ್ತದೆ.‌

ವಿಡಿಯೋ ವೈರಲ್

ಜೈನಗರದದಿಂದ ಮೌಂಟ್‌ ಎವರೆಸ್ಟ್‌ ಕಾಣುತ್ತಿರುವ ವಿಡಿಯೋವೊಂದನ್ನು, ಸತ್ಯಂ ರಾಜ್‌ ಎಂಬ ಸ್ಥಳೀಯರು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. "ಬಿಹಾರದ ಮಧುಬನಿ ಜಿಲ್ಲೆಯ ಜೈನಗರದಿಂದ ಕಾಣುವ ಭವ್ಯ ಹಿಮಾಲಯದ ನೋಟ" ಎಂದು ಸತ್ಯಂ ರಾಜ್ ಅವರು ತಮ್ಮ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT