ಸಾಂದರ್ಭಿಕ ಚಿತ್ರ online desk
ದೇಶ

ದೆಹಲಿ: ಮಾಜಿ ಲಿವ್ ಇನ್ ಸಂಗಾತಿಯಿಂದ ಗರ್ಭಿಣಿ ಸಾವು; ಪತಿಯಿಂದ ದಾಳಿಕೋರನ ಹತ್ಯೆ

ಶಾಲಿನಿಯ ಪತಿ 23 ವರ್ಷದ ಆಕಾಶ್ ತನ್ನ ಪತ್ನಿಯನ್ನು ಉಳಿಸಲು ಪ್ರಯತ್ನಿಸುವಾಗ ಬಹು ಇರಿತದ ಗಾಯಗಳಿಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ನಿಧಿನ್ ವಲ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನವದೆಹಲಿ: ದೆಹಲಿಯ ನಬಿ ಕರೀಮ್ ಪ್ರದೇಶದಲ್ಲಿ ಗರ್ಭಿಣಿಯೊಬ್ಬರನ್ನು ಆಕೆಯ ಮಾಜಿ ಲಿವ್-ಇನ್ ರಿಲೇಷನ್ ಸಂಗಾತಿ ಇರಿದು ಕೊಂದ ಘಟನೆ ನಡೆದಿದೆ, ನಂತರ ಆಕೆಯ ಪತಿ ಹತ್ಯೆಗೀಡುಮಾಡಿದವನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮೃತರನ್ನು 22 ವರ್ಷದ ಶಾಲಿನಿ ಮತ್ತು 34 ವರ್ಷದ ಆಶು ಅಲಿಯಾಸ್ ಶೈಲೇಂದ್ರ ಎಂದು ಗುರುತಿಸಲಾಗಿದೆ. ಶೈಲೇಂದ್ರ ನಬಿ ವಿರುದ್ಧ ಕರೀಮ್ ಪೊಲೀಸ್ ಠಾಣೆಯಲ್ಲಿ ಹಲವು ಕೇಸುಗಳು ದಾಖಲಾಗಿದ್ದವು.

ಶಾಲಿನಿಯ ಪತಿ 23 ವರ್ಷದ ಆಕಾಶ್ ತನ್ನ ಪತ್ನಿಯನ್ನು ಉಳಿಸಲು ಪ್ರಯತ್ನಿಸುವಾಗ ಬಹು ಇರಿತದ ಗಾಯಗಳಿಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ನಿಧಿನ್ ವಲ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿನ್ನೆ ರಾತ್ರಿ ಆಗಿದ್ದೇನು?

ನಿನ್ನೆ ಶನಿವಾರ ರಾತ್ರಿ 10:15 ರ ಸುಮಾರಿಗೆ ಆಕಾಶ್ ಮತ್ತು ಶಾಲಿನಿ ಕುತುಬ್ ರಸ್ತೆಯಲ್ಲಿ ತನ್ನ ತಾಯಿ ಶೀಲಾಳನ್ನು ಭೇಟಿಯಾಗಲು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆಶು ಇದ್ದಕ್ಕಿದ್ದಂತೆ ಅಲ್ಲಿಗೆ ಬಂದು ಆಕಾಶ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಆಕಾಶ್ ಮೊದಲ ಹೊಡೆತವನ್ನು ತಪ್ಪಿಸುವಲ್ಲಿ ಯಶಸ್ವಿಯಾದರು, ಆದರೆ ಆಶು ನಂತರ ರಿಕ್ಷಾದಲ್ಲಿ ಕುಳಿತಿದ್ದ ಶಾಲಿನಿಯ ಕಡೆಗೆ ತಿರುಗಿ, ಆಕೆಗೆ ಹಲವು ಬಾರಿ ಇರಿದಿದ್ದಾನೆ.

ಆಕಾಶ್ ಅವಳನ್ನು ರಕ್ಷಿಸಲು ಧಾವಿಸಿದಾಗ ಅವನ ಮೇಲೆ ಕೂಡ ಚಾಕುವಿನಿಂದ ಇರಿದಿದ್ದಾನೆ. ಆದರೂ ಆಶುವಿನ ಕೈಯಿಂದ ಚಾಕುವನ್ನು ಕಸಿದುಕೊಂಡು ಗಲಾಟೆಯ ಸಮಯದಲ್ಲಿ ಅವನಿಗೆ ಇರಿದನು.

ಶಾಲಿನಿಯ ಸಹೋದರ ರೋಹಿತ್ ಮತ್ತು ಕೆಲವು ಸ್ಥಳೀಯ ನಿವಾಸಿಗಳು ಮೂವರನ್ನೂ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಶಾಲಿನಿ ಮತ್ತು ಆಶು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ವಿಚಾರಣೆಯ ಸಮಯದಲ್ಲಿ, ಶಾಲಿನಿ ಸಾಯುವ ಸಮಯದಲ್ಲಿ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುತುಬ್ ರಸ್ತೆಯ ಬಳಿಯ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ಸಾರ್ವಜನಿಕರ ಸಮ್ಮುಖದಲ್ಲಿ ನಡೆದಿದ್ದು, ಆ ಪ್ರದೇಶದಲ್ಲಿ ಸದ್ಯ ಭೀತಿ ಮೂಡಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶಾಲಿನಿ ಮತ್ತು ಆಕಾಶ್ ಸಂಬಂಧ ಕೆಲ ಸಮಯಗಳ ಹಿಂದೆ ಹದಗೆಟ್ಟಿತ್ತು, ಆ ಸಮಯದಲ್ಲಿ ಆಕೆ ಆಶು ಜೊತೆ ಲಿವ್-ಇನ್ ಸಂಬಂಧ ಮಾಡಿಕೊಂಡರು. ನಂತರ, ಆಕಾಶ್ ಜೊತೆ ಸಂಬಂಧ ಸುಧಾರಿಸಿಕೊಂಡು ಇಬ್ಬರು ಮಕ್ಕಳೊಂದಿಗೆ ಚೆನ್ನಾಗಿ ಜೀವನ ನಡೆಸಿಕೊಂಡು ಹೋಗುತ್ತಿದ್ದರು ಎಂದು ಆಕೆಯ ತಾಯಿ ಶೀಲಾ ಹೇಳಿದ್ದಾರೆ.

ಇದು ಆಶುಗೆ ಅಸಮಾಧಾನ ತರಿಸಿತ್ತು, ಶಾಲಿನಿ ಗರ್ಭವತಿಯಾಗಿದ್ದು ಅದರ ತಂದೆ ನಾನೇ ಎಂದು ಆಶು ಹೇಳಿಕೊಂಡಿದ್ದನಂತೆ. ಆಶುವಿನ ಮೇಲೆ ಹಲವು ಕ್ರಿಮಿನಲ್ ಕೇಸುಗಳು ದಾಖಲಾಗಿದ್ದವು. ಆಕಾಶ್ ಕೂಡ ಮೂರು ಹಿಂದಿನ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಶೀಲಾ ಅವರ ದೂರಿನ ಆಧಾರದ ಮೇಲೆ, ನಬಿ ಕರೀಮ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103-1 (ಕೊಲೆ) ಮತ್ತು 109-1 (ಕೊಲೆಯ ಪ್ರಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Padma Awards 2026: ಕರ್ನಾಟಕದ 8 ಮಂದಿ ಸೇರಿದಂತೆ ದೇಶಾದ್ಯಂತ 131 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ!

60 ಎಸೆತಗಳಲ್ಲಿ 155 ರನ್; ನ್ಯೂಜಿಲ್ಯಾಂಡ್ ವಿರುದ್ಧ ದಾಖಲೆಯ ಗೆಲುವು; T20 ಸರಣಿ ಭಾರತ ಕೈವಶ!

ಮೈಸೂರು: ಕೌಟುಂಬಿಕ ಕಲಹ; ಇಬ್ಬರು ಮಕ್ಕಳೊಂದಿಗೆ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮೈಸೂರಿನ ಮಾಜಿ ಬಸ್ ಕಂಡಕ್ಟರ್, ಪುಸ್ತಕ ಪ್ರೇಮಿ ಅಂಕೇಗೌಡಗೆ 'ಪದ್ಮಶ್ರೀ' ಪ್ರಶಸ್ತಿ!

45 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ: ಕರ್ನಾಟಕದ 3 ಸಾಧಕರಿಗೆ ಗೌರವ

SCROLL FOR NEXT