ನಿತೀಶ್ ಕುಮಾರ್ 
ದೇಶ

ಚುನಾವಣೆ ಸಮಯದಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಹಾಲಿ, ಮಾಜಿ ಶಾಸಕರು ಸೇರಿ 16 ಮಂದಿಯನ್ನು ಉಚ್ಛಾಟಿಸಿದ JDU

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಶಾಸಕ ಗೋಪಾಲ್ ಮಂಡಲ್ ಸೇರಿದಂತೆ 16 ನಾಯಕರನ್ನು ಪಕ್ಷದಿಂದ ಉಚ್ಛಾಟಿಸಿದೆ.

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಶಾಸಕ ಗೋಪಾಲ್ ಮಂಡಲ್ ಸೇರಿದಂತೆ 16 ನಾಯಕರನ್ನು ಪಕ್ಷದಿಂದ ಉಚ್ಛಾಟಿಸಿದೆ. 2025ರ ವಿಧಾನಸಭಾ ಚುನಾವಣೆಯ ಮಧ್ಯೆ ಪಕ್ಷ ವಿರೋಧಿ ಚಟುವಟಿಕೆ ಮತ್ತು ಸಂಘಟನಾ ನಡವಳಿಕೆಯ ವಿರುದ್ಧ ಕ್ರಮಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಈ ನಾಯಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟಿಸಲಾಗಿದೆ. ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ ಎಂದು ಪಕ್ಷವು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

ಈ ನಾಯಕರಲ್ಲಿ ಗೋಪಾಲ್‌ಪುರ ಶಾಸಕ ನರೇಂದ್ರ ಕುಮಾರ್ ನೀರಜ್ ಅಲಿಯಾಸ್ ಗೋಪಾಲ್ ಮಂಡಲ್, ಮಾಜಿ ಸಚಿವ ಹಿಮರಾಜ್ ಸಿಂಗ್, ಮಾಜಿ ಶಾಸಕ ಸಂಜೀವ್ ಶ್ಯಾಮ್ ಸಿಂಗ್, ಮಾಜಿ ಶಾಸಕರಾದ ಮಹೇಶ್ವರ್ ಪ್ರಸಾದ್ ಯಾದವ್ ಮತ್ತು ಪ್ರಭಾತ್ ಕಿರಣ್ ಸೇರಿದ್ದಾರೆ. ಶನಿವಾರದಂದು, ಮಾಜಿ ಗ್ರಾಮೀಣ ಕಾಮಗಾರಿ ಸಚಿವ ಮತ್ತು ಜಮಾಲ್‌ಪುರ ಶಾಸಕ ಶೈಲೇಶ್ ಕುಮಾರ್ ಮತ್ತು ಮಾಜಿ ಶಾಸಕರು ಸೇರಿದಂತೆ 11 ಇತರರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಟಿಕೆಟ್ ನಿರಾಕರಿಸಿದ ನಂತರ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಯಿತು.

ಪಕ್ಷದಿಂದ ಉಚ್ಛಾಟಿತ 16 ನಾಯಕರ ಪಟ್ಟಿ:

* ಶೈಲೇಶ್ ಕುಮಾರ್ - ಮಾಜಿ ಸಚಿವ

* ನರೇಂದ್ರ ಕುಮಾರ್ ನೀರಜ್ ಅಲಿಯಾಸ್ ಗೋಪಾಲ್ ಮಂಡಲ್ - ಶಾಸಕ, ಗೋಪಾಲಪುರ

* ಹಿಮ್ರಾಜ್ ಸಿಂಗ್ - ಮಾಜಿ ಸಚಿವ

* ಸಂಜೀವ್ ಶ್ಯಾಮ್ ಸಿಂಗ್ - ಮಾಜಿ MLC

* ಮಹೇಶ್ವರ ಪ್ರಸಾದ್ ಯಾದವ್ - ಮಾಜಿ ಶಾಸಕ

* ಸಂಜಯ್ ಪ್ರಸಾದ್ - ಮಾಜಿ ಎಂಎಲ್ ಸಿ

* ಶ್ಯಾಮ್ ಬಹದ್ದೂರ್ ಸಿಂಗ್ - ಮಾಜಿ ಶಾಸಕ

* ರಣವಿಜಯ್ ಸಿಂಗ್ - ಮಾಜಿ MLC

* ಸುದರ್ಶನ್ ಕುಮಾರ್ - ಮಾಜಿ ಶಾಸಕ

* ಪ್ರಭಾತ್ ಕಿರಣ್

* ಅಮರ್ ಕುಮಾರ್ ಸಿಂಗ್

* ಡಾ. ಅಸ್ಮಾ ಪರ್ವೀನ್

* ಲ್ಯಾಬ್ ಕುಮಾರ್

* ಆಶಾ ಸುಮನ್

* ದಿವ್ಯಾಂಶು ಭಾರದ್ವಾಜ್

* ವಿವೇಕ್ ಶುಕ್ಲಾ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಭಾರತ ಜತೆಗಿನ ಸಂಬಂಧಕ್ಕೆ ಧಕ್ಕೆ ತಂದು ಪಾಕ್‌ ಜೊತೆ ಸ್ನೇಹ ಇಲ್ಲ': ಅಮೆರಿಕ ಕಾರ್ಯದರ್ಶಿ ಮಾರ್ಕೋ ರುಬಿಯೋ

ಅಲ್ಬೇನಿಯಾದ ಎಐ ಸಚಿವೆ ಈಗ ಗರ್ಭಿಣಿ, 83 ಮಕ್ಕಳ ತಾಯಿ..: ಅಲ್ಬೇನಿಯಾ ಪ್ರಧಾನಿ ಎಡಿ ರಾಮ ವಿಲಕ್ಷಣ ಘೋಷಣೆ!

ICC Womens World Cup 2025: ಭಾರತ-ಬಾಂಗ್ಲಾದೇಶ ಪಂದ್ಯ ಮಳೆಗಾಹುತಿಚ ಸೆಮೀಸ್ ನಲ್ಲಿ ಇಂಡಿಯಾ-ಆಸಿಸ್ ಮುಖಾಮುಖಿ!

ದೇಶಾದ್ಯಂತ SIR ಪ್ರಯೋಗ: ಮೊದಲ ಹಂತದಲ್ಲಿ ಬಂಗಾಳ, ಕೇರಳ, ತಮಿಳುನಾಡು; ನಾಳೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ಸುದ್ದಿಗೋಷ್ಠಿ

ಭಯೋತ್ಪಾದಕರ ಪಟ್ಟಿಗೆ Bollywood ನಟ ಸಲ್ಮಾನ್ ಖಾನ್ ಹೆಸರು ಸೇರಿಸಿದ ಪಾಕಿಸ್ತಾನ!

SCROLL FOR NEXT