ಸಾಂಕೇತಿಕ ಚಿತ್ರ online desk
ದೇಶ

ಗುಜರಾತ್: ಮನೆಯ ಕಸದ ಬುಟ್ಟಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಷೇರು ಪ್ರಮಾಣಪತ್ರ ಪತ್ತೆ; ಮಾಲಿಕತ್ವಕ್ಕಾಗಿ ತಂದೆ-ಮಗ ಜಟಾಪಟಿ!

ಷೇರು ಪ್ರಮಾಣಪತ್ರಗಳು ಷೇರುಗಳ ಮಾಲೀಕತ್ವವನ್ನು ಸಾಬೀತುಪಡಿಸಲು ಮೊದಲು ನೀಡಲಾದ ಭೌತಿಕ ದಾಖಲೆಗಳಾಗಿವೆ. ಇವುಗಳನ್ನು ಡಿಮೆಟೀರಿಯಲೈಸ್ಡ್ ಫಾರ್ಮ್‌ಗೆ ವರ್ಗಾಯಿಸಬಹುದು.

ಉನಾ: ಗುಜರಾತ್‌ನ ವ್ಯಕ್ತಿಯೊಬ್ಬನಿಗೆ ಹಳ್ಳಿಯಲ್ಲಿರುವ ತನ್ನ ಅಜ್ಜನ ಮನೆಯಲ್ಲಿ ಕೋಟ್ಯಂತರ ಮೌಲ್ಯದ ಷೇರು ಪ್ರಮಾಣಪತ್ರಗಳು ಕಸದ ಬುಟ್ಟಿಯಲ್ಲಿ ಪತ್ತೆಯಾಗಿದೆ.

ಇದು ಜೀವನ ಸಾಗಿಸಲು ಕಷ್ಟಪಟ್ಟು ದುಡಿಯುತ್ತಿದ್ದ ಕುಟುಂಬಕ್ಕೆ ಸಂತೋಷ ಮತ್ತು ಸಂಘರ್ಷ ಎರಡನ್ನೂ ಉಂಟುಮಾಡಿದೆ. ತನ್ನ ಅಜ್ಜ ಸಾವ್ಜಿ ಪಟೇಲ್ ಅವರ ಮರಣದ ನಂತರ ಉನಾದಲ್ಲಿದ್ದ ಮನೆಯನ್ನು ಆನುವಂಶಿಕವಾಗಿ ಪಡೆದ ಆ ವ್ಯಕ್ತಿ ಅದನ್ನು ಸ್ವಚ್ಛಗೊಳಿಸಲು ಹಿಂತಿರುಗಿದಾಗ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಗಳನ್ನು ಕಸದ ಬುಟ್ಟಿಯಲ್ಲಿರುವುದನ್ನು ಕಂಡಿದ್ದಾರೆ.

ಷೇರುಗಳ ಮಾರುಕಟ್ಟೆ ಮೌಲ್ಯವನ್ನು ಪರಿಶೀಲಿಸಿದಾಗ, ಅದು 2.5 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ್ದಾಗಿತ್ತು.

ಆದರೆ ಈ ವ್ಯಕ್ತಿಗೆ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗುವ ಸಂತೋಷ ತನ್ನದೇ ಆದ ಸಂಘರ್ಷದೊಂದಿಗೆ ಬಂದಿದೆ. ಷೇರು ಪ್ರಮಾಣಪತ್ರಗಳನ್ನು ಪತ್ತೆ ಮಾಡಿದ ವ್ಯಕ್ತಿ ಹಾಗೂ ಆತನ ತಂದೆ ಇಬ್ಬರೂ ಷೇರು ಪ್ರಮಾಣಪತ್ರಗಳ ಮಾಲೀಕತ್ವವನ್ನು ಪ್ರತಿಪಾದಿಸಿದ ಬೆನ್ನಲ್ಲೇ, ಇದು ಕುಟುಂಬದೊಳಗೆ ವಿವಾದಕ್ಕೆ ಕಾರಣವಾಗಿದೆ.

ಷೇರು ಪ್ರಮಾಣಪತ್ರಗಳು ಷೇರುಗಳ ಮಾಲೀಕತ್ವವನ್ನು ಸಾಬೀತುಪಡಿಸಲು ಮೊದಲು ನೀಡಲಾದ ಭೌತಿಕ ದಾಖಲೆಗಳಾಗಿವೆ. ಇವುಗಳನ್ನು ಡಿಮೆಟೀರಿಯಲೈಸ್ಡ್ ಫಾರ್ಮ್‌ಗೆ ವರ್ಗಾಯಿಸಬಹುದು.

ಉತ್ತರಾಧಿಕಾರಿ ಯಾರು?

ಪಟೇಲ್ ಡಿಯುನಲ್ಲಿರುವ ಹೋಟೆಲ್‌ನಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದರು. ಇದಕ್ಕೂ ಮೊದಲು ಅವರು ಅದರ ಮಾಲೀಕರ ಒಡೆತನದ ಬಂಗಲೆಯಲ್ಲಿ ಮನೆಕೆಲಸಗಾರರಾಗಿದ್ದರು. ಪಟೇಲ್ ಹೋಟೆಲ್ ಆವರಣದೊಳಗಿನ ಒಂದು ಮನೆಯಲ್ಲಿ ವಾಸಿಸುತ್ತಿದ್ದರು, ಆದರೆ ಅವರ ತಂದೆ ಉನಾದಲ್ಲಿ ರೈತರಾಗಿದ್ದರು ಮತ್ತು ಅಲ್ಲಿ ಒಂದು ಮನೆಯನ್ನು ಹೊಂದಿದ್ದರು. ಅವರ ಮಗ ಕೂಡ ದಿಯುನಲ್ಲಿ ಕೆಲಸ ಮಾಡುತ್ತಿದ್ದರು.

ಪಟೇಲ್ ಸಾಯುವ ಮೊದಲು ತಮ್ಮ ಮೊಮ್ಮಗನನ್ನು ಆಸ್ತಿಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ಆದರೆ ಷೇರುಗಳು ಬೆಳಕಿಗೆ ಬಂದ ನಂತರ, ಮನೆಯಿಂದ ಗಮನ ಬೇರೆಡೆಗೆ ತಿರುಗಿದೆ. ಪಟೇಲ್ ಅವರ ಮಗ ಷೇರು ಪ್ರಮಾಣಪತ್ರಗಳ ನಿಜವಾದ ಮಾಲೀಕನೆಂದು ಹೇಳಿಕೊಂಡು, ತಾನು ಸಾವ್ಜಿ ಪಟೇಲ್ ಅವರ ನೇರ ಉತ್ತರಾಧಿಕಾರಿ ಎಂದು ವಾದಿಸಿದ್ದಾರೆ.

ಆದಾಗ್ಯೂ, ಮೊಮ್ಮಗ ಅವುಗಳನ್ನು ನೀಡಲು ನಿರಾಕರಿಸಿದ್ದಾನೆ. ತನಗೆ ಸೇರಿದ ಮನೆಯಲ್ಲಿ ಪ್ರಮಾಣಪತ್ರಗಳು ಸಿಕ್ಕಿವೆ ಆದ್ದರಿಂದ ತಾನೇ ಅದಕ್ಕೆ ಉತ್ತರಾಧಿಕಾರಿ ಎಂದು ವಾದಿಸಿದ್ದಾರೆ.

ನ್ಯಾಯಾಲಯ ಈಗ ಮಗ ಮತ್ತು ಅವನ ತಂದೆಯ ನಡುವೆ 'ಕೌನ್ ಬನೇಗಾ ಕರೋಡ್‌ಪತಿ' (ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊಂದಿರುವವರು ಯಾರು?) ಎಂದು ನಿರ್ಧರಿಸುವ ನಿರೀಕ್ಷೆಯಿದೆ. ಗುಜರಾತ್ ಹೈಕೋರ್ಟ್ ನವೆಂಬರ್ 3 ರಂದು ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT