ಪ್ರಧಾನಿ ನರೇಂದ್ರ ಮೋದಿ  
ದೇಶ

'ಆರ್ಥಿಕ ಸ್ವಾರ್ಥ'ದಿಂದ ಸವಾಲುಗಳ ಹೊರತಾಗಿಯೂ ಶೇ.7.8ರಷ್ಟು ಪ್ರಗತಿ ಕಂಡಿದೆ, ಭಾರತದ ಸಣ್ಣ ಚಿಪ್ ಜಗತ್ತನ್ನೇ ಬದಲಿಸಲಿದೆ: ಪ್ರಧಾನಿ ಮೋದಿ

ಸೆಮಿಕಾನ್ ಇಂಡಿಯಾ 2025 ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, "ಕೆಲವೇ ದಿನಗಳ ಹಿಂದೆ, ಈ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ಸಂಖ್ಯೆಗಳು ಬಂದಿವೆ.

ನವದೆಹಲಿ: ಭಾರತದ ಮೇಲೆ ಅಮೆರಿಕ ವಿಧಿಸಿರುವ ವ್ಯಾಪಕ ಸುಂಕದಿಂದ "ಆರ್ಥಿಕ ಸ್ವಾರ್ಥ" ಸೃಷ್ಟಿಸಿದ ಸವಾಲುಗಳ ಹೊರತಾಗಿಯೂ, ಭಾರತದ ಜಿಡಿಪಿ ಶೇಕಡಾ 7.8 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸದಿಂದ ನುಡಿದಿದ್ದಾರೆ.

ಸೆಮಿಕಾನ್ ಇಂಡಿಯಾ 2025 ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, "ಕೆಲವೇ ದಿನಗಳ ಹಿಂದೆ, ಈ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ಸಂಖ್ಯೆಗಳು ಬಂದಿವೆ. ಮತ್ತೊಮ್ಮೆ, ಭಾರತವು ಪ್ರತಿ ನಿರೀಕ್ಷೆ ಮೌಲ್ಯಮಾಪನಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ವಿಶ್ವದ ಆರ್ಥಿಕತೆಯೊಳಗೆ ಇಂದು ಕಳವಳ ಗೊಂದಲಗಳಿರುವಾಗ, ಆರ್ಥಿಕ ಸ್ವಾರ್ಥದಿಂದ ಸೃಷ್ಟಿಯಾದ ಹಲವು ಸವಾಲುಗಳಿವೆ. ಇಂತಹ ಪರಿಸರ ಮಧ್ಯೆ, ಭಾರತವು ಶೇಕಡಾ 7.8 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ ಎಂದು ಹೇಳಿದರು.

ಸೆಮಿಕಂಡಕ್ಟರ್

ಹೊಸ ಜಗತ್ತಿನಲ್ಲಿ ಅರೆವಾಹಕಗಳ(semiconductor) ಪ್ರಾಮುಖ್ಯತೆ ಮತ್ತು ಸಾಮರ್ಥ್ಯದ ಬಗ್ಗೆ ಒತ್ತಿ ಹೇಳಿದ ಪ್ರಧಾನಿ, ಅರೆವಾಹಕ ಜಗತ್ತಿನಲ್ಲಿ ಇಂಧನವನ್ನು ಕಪ್ಪು ಚಿನ್ನ ಎಂದು ಹೇಳಲಾಗುತ್ತದೆ, ಚಿಪ್‌ಗಳು ಡಿಜಿಟಲ್ ವಜ್ರಗಳಾಗಿವೆ. ನಮ್ಮ ಕಳೆದ ಶತಮಾನವು ತೈಲದಿಂದ ರೂಪುಗೊಂಡಿತು. ಇಂದಿನ 21 ನೇ ಶತಮಾನದ ಶಕ್ತಿಯು ಸಣ್ಣ ಚಿಪ್‌ಗೆ ಸೀಮಿತವಾಗಿದೆ. ಈ ಚಿಪ್ ಗಳು ಪ್ರಪಂಚದ ಅಭಿವೃದ್ಧಿಯನ್ನು ವೇಗಗೊಳಿಸುವ ಶಕ್ತಿಯನ್ನು ಹೊಂದಿದೆ ಎಂದಿದೆ.

ಸೆಮಿಕಾನ್ ಇಂಡಿಯಾ

2021 ರಲ್ಲಿ, ನಾವು ಸೆಮಿಕಾನ್ ಇಂಡಿಯಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. 2023 ರ ಹೊತ್ತಿಗೆ, ಭಾರತದ ಮೊದಲ ಸೆಮಿಕಂಡಕ್ಟರ್ ಘಟಕಕ್ಕೆ ಅನುಮೋದನೆ ನೀಡಲಾಯಿತು. 2024 ರಲ್ಲಿ, ನಾವು ಹೆಚ್ಚುವರಿ ಸ್ಥಾವರಕ್ಕೆ ಅನುಮೋದನೆ ನೀಡಿದೆವು. 2025 ರಲ್ಲಿ, ನಾವು ಐದು ಹೆಚ್ಚುವರಿ ಯೋಜನೆಗೆ ಅನುಮೋದನೆ ನೀಡಿದ್ದೇವೆ. ಒಟ್ಟಾರೆಯಾಗಿ, ಹತ್ತು ಸೆಮಿಕಂಡಕ್ಟರ್ ಯೋಜನೆಗಳಲ್ಲಿ 1.5 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹೂಡಿಕೆ ಮಾಡಲಾಗುತ್ತಿದೆ. ಇದು ಜಗತ್ತಿನ ದೇಶಗಳು ಭಾರತದ ಮೇಲೆ ಬೆಳೆಯುತ್ತಿರುವ ನಂಬಿಕೆಯನ್ನು ತೋರಿಸುತ್ತದೆ ಎಂದು ಹೇಳಿದರು.

ನಾವು ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಇದರ ಮೂಲಕ, ಕೇಂದ್ರ ಮತ್ತು ರಾಜ್ಯಗಳಿಂದ ಎಲ್ಲಾ ಅನುಮೋದನೆಗಳನ್ನು ಒಂದೇ ವೇದಿಕೆಯಡಿ ಸ್ವೀಕರಿಸಲಾಗುತ್ತಿದೆ. ಪರಿಣಾಮವಾಗಿ, ನಮ್ಮ ಹೂಡಿಕೆದಾರರು ಈಗ ಸಾಕಷ್ಟು ಪ್ರಮಾಣದಲ್ಲಿ ದಾಖಲೆಗಳಿಂದ ಮುಕ್ತರಾಗಿದ್ದಾರೆ ಎಂದರು.

ಭಾರತವು ಪೂರ್ಣ ಸೆಮಿಕಂಡಕ್ಟರ್ ರಾಷ್ಟ್ರವಾಗುವ ಹಾದಿಯಲ್ಲಿ

ಭಾರತವು ಈಗ ಪೂರ್ಣ ಪ್ರಮಾಣದಲ್ಲಿ ಸೆಮಿಕಂಡಕ್ಟರ್ ರಾಷ್ಟ್ರವಾಗುವ ಹಾದಿಯಲ್ಲಿದೆ. ಭಾರತದ ಚಿಕ್ಕ ಚಿಪ್ ವಿಶ್ವದಲ್ಲಿ ಅತಿದೊಡ್ಡ ಬದಲಾವಣೆಯನ್ನು ತರುವ ದಿನಗಳು ದೂರವಿಲ್ಲ. ನಮ್ಮ ಪಯಣ ತಡವಾಗಿ ಆರಂಭವಾಯಿತು. ಆದರೆ ಈಗ ನಮ್ಮನ್ನು ತಡೆಯಲು ಯಾವುದೂ ಸಾಧ್ಯವಿಲ್ಲ ಎಂದರು,

ದೇಶಕ್ಕೆ ಹೆಚ್ಚಿನ ಹೂಡಿಕೆದಾರರನ್ನು ಆಹ್ವಾನಿಸಿದ ಮೋದಿ, ದೇಶದಲ್ಲಿ ಎಲ್ಲಾ ಹೂಡಿಕೆದಾರರನ್ನು ಸ್ವಾಗತಿಸಲು ಸಿದ್ಧರಿದ್ದೇವೆ. ಭಾರತದಲ್ಲಿ ವಿನ್ಯಾಸಗೊಂಡಿದ್ದು, ಭಾರತದಲ್ಲಿ ತಯಾರಾಗಿದ್ದು, ಜಗತ್ತು ನಂಬಿದ್ದು ಎಂದು ಹೇಳುವ ದಿನಗಳು ದೂರವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾಸಗಿ ಶಾಲೆಗಳ ಮಾನ್ಯತೆ: ನಿಯಮಗಳ ಪರಿಷ್ಕರಣೆಗೆ ಸದನ ಸಮಿತಿ ರಚನೆ- ಸಚಿವ ಮಧು ಬಂಗಾರಪ್ಪ

ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾ!

ದೇಶಕ್ಕೆ ಸ್ವಾತಂತ್ರ್ಯ ಬಂದ 79 ವರ್ಷಗಳ ನಂತರ 'ವಂದೇ ಮಾತರಂ' ಚರ್ಚೆಯ ಅಗತ್ಯವೇನಿತ್ತು?: ಪ್ರಿಯಾಂಕಾ ಗಾಂಧಿ; Video

ಪೂಮಾದಿಂದ 300 ಕೋಟಿ ಆಫರ್ ಕೈಬಿಟ್ಟ ಕೊಹ್ಲಿ: ತನ್ನದೇ ಬ್ರ್ಯಾಂಡ್ ಗಾಗಿ ಹೊಸ ಡೀಲ್, 40 ಕೋಟಿ ರೂ. ಹೂಡಿಕೆ!

ಮಳೆ, ಚಳಿಯಿಂದಾಗಿ ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ಶೇ. 19.55ರಷ್ಟು ಕುಸಿತ: ಸಚಿವ ತಿಮ್ಮಾಪುರ

SCROLL FOR NEXT