ರಾಹುಲ್ ಗಾಂಧಿ-ಫಿರೋಜ್ ಪಠಾಣ್ 
ದೇಶ

ಗುಜರಾತ್: ರಾಹುಲ್ ಗಾಂಧಿ ಪರ ವಕಾಲತ್ತು ವಹಿಸಿದ್ದ ವಕೀಲ ಫಿರೋಜ್ ಪಠಾಣ್ ಮೃತದೇಹ ತಾಪಿ ನದಿಯ ದಡದಲ್ಲಿ ಪತ್ತೆ!

ಮಾಜಿ ಕಾಂಗ್ರೆಸ್ ಕಾನೂನು ಸಂಚಾಲಕ ವಕೀಲ ಫಿರೋಜ್ ಪಠಾಣ್ ಸೆಪ್ಟೆಂಬರ್ 5ರಂದು ಕೇಬಲ್ ಸೇತುವೆಯಿಂದ ತಾಪಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಹುಡುಕಾಟದ ನಂತರ, ಇಂದು ಬೆಳಿಗ್ಗೆ ಉಭರತ್ ದಡದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಸೂರತ್(ಗುಜರಾತ್): ನಗರದ ಪ್ರಮುಖ ವಕೀಲ ಮತ್ತು ಮಾಜಿ ಕಾಂಗ್ರೆಸ್ ಕಾನೂನು ಸಂಚಾಲಕ ವಕೀಲ ಫಿರೋಜ್ ಪಠಾಣ್ ಸೆಪ್ಟೆಂಬರ್ 5ರಂದು ಕೇಬಲ್ ಸೇತುವೆಯಿಂದ ತಾಪಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಹುಡುಕಾಟದ ನಂತರ, ಇಂದು ಬೆಳಿಗ್ಗೆ ಉಭರತ್ ದಡದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಉದ್ನಾ ದರ್ವಾಜಾ ಪ್ರದೇಶದ ನಿವಾಸಿ ಫಿರೋಜ್ ಪಠಾಣ್ ಕೆಲವು ಸಮಯದಿಂದ ಕುಟುಂಬ ಮತ್ತು ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಆರ್ಥಿಕ ತೊಂದರೆಗಳು ಮತ್ತು ಆಸ್ತಿಯ ಮೇಲೆ ಪಡೆದ ಸಾಲವನ್ನು ಮರುಪಾವತಿಸಲು ಅಸಮರ್ಥತೆಯಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದರು. ಅವರು ಕಳೆದ ವರ್ಷವೂ ಆತ್ಮಹತ್ಯೆಗೆ ಯತ್ನಿಸಿದ್ದರು.

ಫಿರೋಜ್ ಪಠಾಣ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಮ್ಮ ಕಿರಿಯ ವಕೀಲ ದೀಪಕ್ ಅವರಿಗೆ ಕರೆ ಮಾಡಿ, 'ನನಗೆ ಏನಾದರೂ ಸಂಭವಿಸಿದರೆ, ನ್ಯಾಯಾಲಯದ ಪಕ್ಕದ ಸೇತುವೆಯ ಮೇಲೆ ನನ್ನನ್ನು ಹುಡುಕಿ ಬನ್ನಿ' ಎಂದು ಹೇಳಿದ್ದರು. ಇದನ್ನು ಕೇಳಿದ ದೀಪಕ್ ತಕ್ಷಣ ಫಿರೋಜ್ ಅವರ ಕಚೇರಿ ಆಗಮಿಸಿದ್ದರು. ಆದರೆ ಅವರು ಅಲ್ಲಿ ಇರಲಿಲ್ಲ.

ದೀಪಕ್ ತಕ್ಷಣ ಫಿರೋಜ್ ಅವರ ಮಗನಿಗೆ ಮಾಹಿತಿ ನೀಡಿದ್ದು ಇಬ್ಬರೂ ಕೇಬಲ್ ಸೇತುವೆಯನ್ನು ತಲುಪಿದರು. ಅಲ್ಲಿ ಜನಸಮೂಹ ಸೇರಿತ್ತು. ಸೇತುವೆಯ ಕೆಳಗಿರುವ ಪಾರ್ಕಿಂಗ್ ಸ್ಥಳದಲ್ಲಿ ಫಿರೋಜ್ ಅವರ ಕಾರು ಪತ್ತೆಯಾಗಿತ್ತು. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡವು ತಕ್ಷಣ ಸ್ಥಳಕ್ಕೆ ತಲುಪಿ, ತಾಪಿ ನದಿಯ ರಭಸದಿಂದ ಹರಿಯುವ ಪ್ರವಾಹದಲ್ಲಿ ಹುಡುಕಾಟ ಆರಂಭಿಸಿತು. ತೀವ್ರ ಹುಡುಕಾಟದ ನಂತರ, ಇಂದು ಮುಂಜಾನೆ ಉಭಾರತ್ ನದಿಯ ದಡದಲ್ಲಿ ಅವರ ಶವ ಪತ್ತೆಯಾಗಿದೆ.

ಈ ಘಟನೆಯು ನಗರದ ಕಾನೂನು ವಲಯ ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ದುಃಖದ ಭಾವನೆಯನ್ನು ಮೂಡಿಸಿದೆ. ಫಿರೋಜ್ ಪಠಾಣ್ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಕೀಲರಾಗಿಯೂ ಕೆಲಸ ಮಾಡಿದ್ದರು. ಪೊಲೀಸರು ಪ್ರಸ್ತುತ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದು ಸೇತುವೆಯಿಂದ ಕಂಡುಬಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಯುದ್ಧದ ಕುರಿತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಮೋದಿ ಮಹತ್ವದ ಮಾತುಕತೆ

ಭಾರತಕ್ಕೆ ಉತ್ತಮ ವಿರೋಧಪಕ್ಷಕ್ಕಾಗಿ ಅಭಿಯಾನ ಅಗತ್ಯ: ಸೀತಾರಾಮನ್

ಧರ್ಮಸ್ಥಳ ಬುರುಡೆ ರಹಸ್ಯ ಬಹಿರಂಗ: ಮುಸುಕುಧಾರಿಗೆ 'ಬುರುಡೆ' ಕೊಟ್ಟಿದ್ದು ಸೌಜನ್ಯ ಮಾವ!

ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ; ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಅನುಷ್ಠಾನ

ಬೀಡಿಗಳಿಗೆ ಬಿಹಾರದ ಹೋಲಿಕೆ: ಕೇರಳ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥನ ತಲೆದಂಡ

SCROLL FOR NEXT