ಸೋನಿಯಾ ಗಾಂಧಿ 
ದೇಶ

ಪೌರತ್ವಕ್ಕೂ ಮುನ್ನ ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಹೆಸರು: ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಸೋನಿಯಾ ಗಾಂಧಿ 1983ರಲ್ಲಿ ಭಾರತೀಯ ಪ್ರಜೆಯಾದರು. ಆದರೆ, ಅವರ ಹೆಸರು 1980ರ ಮತದಾರರ ಪಟ್ಟಿಯಲ್ಲಿತ್ತು ಎಂಬ ಆರೋಪದ ತನಿಖೆಗಾಗಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.

ನವದೆಹಲಿ: ಭಾರತದ ಪೌರತ್ವ ಪಡೆಯುವುದಕ್ಕೂ ಮೂರು ವರ್ಷಗಳ ಮುನ್ನವೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಹೆಸರು ಮತದಾರರ ಸೇರಿಸಲಾಗಿತ್ತು ಎಂದು ಆರೋಪಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿ ಮೇಲಿನ ಆದೇಶವನ್ನು ದೆಹಲಿ ನ್ಯಾಯಾಲಯ ಬುಧವಾರ ಕಾಯ್ದಿರಿಸಿದೆ.

ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ, 'ನಾನು ಆದೇಶವನ್ನು ಕಾಯ್ದಿರಿಸಿದ್ದೇನೆ' ಎಂದು ಹೇಳಿದರು.

'ದೂರುದಾರರ ವಿಕಾಸ್ ತ್ರಿಪಾತ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪವನ್ ನಾರಂಗ್, 'ಇಲ್ಲಿರುವ ಏಕೈಕ ಸಮಸ್ಯೆಯೆಂದರೆ, 1980ರ ಜನವರಿಯಲ್ಲಿ ಸೋನಿಯಾ ಗಾಂಧಿ ಭಾರತೀಯ ಪ್ರಜೆಯಾಗಿಲ್ಲದಿದ್ದರೂ ಅವರ ಹೆಸರನ್ನು ನವದೆಹಲಿ ಕ್ಷೇತ್ರದ ಮತದಾರರಾಗಿ ಸೇರಿಸಲಾಗಿದೆ' ಎಂದರು.

'ಮೊದಲು, ನೀವು ಪೌರತ್ವ ಪಡೆದುಕೊಳ್ಳಬೇಕು, ನಂತರ ನೀವು ಒಂದು ಪ್ರದೇಶದ ನಿವಾಸಿಯಾಗುತ್ತೀರಿ. 1980 ರಲ್ಲಿ, ನಿವಾಸದ ಪುರಾವೆ ಬಹುಶಃ ಪಡಿತರ ಚೀಟಿ ಮತ್ತು ಪಾಸ್‌ಪೋರ್ಟ್ ಆಗಿರಬಹುದು' ಎಂದು ಅವರು ಹೇಳಿದರು.

ಅವರು ದೇಶದ ನಾಗರಿಕರಾಗಿದ್ದರೆ, 1982ರಲ್ಲಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಏಕೆ ಅಳಿಸಲಾಯಿತು? ಆಗ ಚುನಾವಣಾ ಆಯೋಗವು ಎರಡು ಹೆಸರುಗಳನ್ನು ಅಳಿಸಿಹಾಕಿತು. ಒಂದು ವಿಮಾನ ಅಪಘಾತದಲ್ಲಿ ನಿಧನರಾದ ನಂತರ ಸಂಜಯ್ ಗಾಂಧಿಯವರ ಹೆಸರು ಮತ್ತು ಇನ್ನೊಂದು ಸೋನಿಯಾ ಗಾಂಧಿಯವರ ಹೆಸರು' ಎಂದು ಹೇಳಿದರು.

ಮತದಾರರ ಪಟ್ಟಿಯಿಂದ ಸೋನಿಯಾ ಗಾಂಧಿ ಅವರ ಹೆಸರನ್ನು ತೆಗೆದುಹಾಕುವಾಗ ಚುನಾವಣಾ ಆಯೋಗಕ್ಕೆ ಏನೋ ತಪ್ಪು ಕಂಡುಬಂದಿರಬೇಕು ಎಂದು ನಾರಂಗ್ ಹೇಳಿದರು.

ಸೋನಿಯಾ ಗಾಂಧಿಯವರ ಹೆಸರನ್ನು 1980 ರಲ್ಲಿ ನವದೆಹಲಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಅದನ್ನು 1982 ರಲ್ಲಿ ಅಳಿಸಲಾಗಿತ್ತು ಮತ್ತು ಅವರು ಭಾರತೀಯ ಪೌರತ್ವವನ್ನು ಪಡೆದ ನಂತರ 1983ರಲ್ಲಿ ಮತ್ತೆ ಅವರ ಹೆಸರನ್ನು ಸೇರಿಸಲಾಯಿತು ಎಂದು ನಾರಂಗ್ ಹೇಳಿದರು.

ಸೋನಿಯಾ ಗಾಂಧಿ 1983ರಲ್ಲಿ ಭಾರತೀಯ ಪ್ರಜೆಯಾದರು. ಆದರೆ, ಅವರ ಹೆಸರು 1980ರ ಮತದಾರರ ಪಟ್ಟಿಯಲ್ಲಿತ್ತು ಎಂಬ ಆರೋಪದ ತನಿಖೆಗಾಗಿ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 175 (4) ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ.

'ಅಪರಾಧ ನಡೆದಿದೆಯೇ ಅಥವಾ ಇಲ್ಲವೇ ಎಂದು ನಿರ್ಧರಿಸಲು ನಾನು ನಿಮ್ಮನ್ನು ಕೇಳುತ್ತಿಲ್ಲ. ಎಫ್‌ಐಆರ್ ದಾಖಲಿಸುವ ಮೂಲಕ ಅಧಿಕೃತವಾಗಿ ತನಿಖೆಯನ್ನು ಪ್ರಾರಂಭಿಸಲು ಪೊಲೀಸರಿಗೆ ಸೂಚಿಸುವಂತೆ ನಾನು ನಿಮ್ಮನ್ನು ಕೇಳುತ್ತಿದ್ದೇನೆ. ಕಾನೂನನ್ನು ಉಲ್ಲಂಘಿಸಲಾಗಿದೆಯೇ ಎಂಬುದನ್ನು ನಿರ್ಧರಿಸುವುದು ಅವರಿಗೆ ಬಿಟ್ಟದ್ದು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗೋವಾ ನೈಟ್‌ಕ್ಲಬ್‌ ಅಗ್ನಿ ದುರಂತ: ಲೂತ್ರಾ ಸಹೋದರರನ್ನು ದೆಹಲಿಗೆ ಕರೆತಂದ ಪೊಲೀಸರು!

'ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ': ಬೆಳಗಾವಿ ಕಲಾಪದಲ್ಲಿ ಗುಡುಗಿದ ಸಿದ್ದರಾಮಯ್ಯ, ಕಾಲೆಳೆದ ವಿಪಕ್ಷ ನಾಯಕರು

ಮಗಳ ಬಿಟ್ಟಿರಲಾಗದೇ ಕನ್ನಡ ಕಿರುತೆರೆ ನಟಿಯನ್ನೇ ಕಿಡ್ನಾಪ್ ಮಾಡಿದ ನಿರ್ಮಾಪಕ! ಇಷ್ಟಕ್ಕೂ ಆಗಿದ್ದೇನು?

ರಾಜ್ಯದಲ್ಲಿ 'ಹೆಣ್ಣು ಭ್ರೂಣ ಹತ್ಯೆ' ತಡೆಗೆ ಎಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕ ನೋಡಲ್ ಅಧಿಕಾರಿಗಳ ನೇಮಕ: ದಿನೇಶ್ ಗುಂಡೂರಾವ್

ರಾಜ್ಯದ ಹಲವು ಕಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ; ಹಣ ಕಮೋಡ್‌ಗೆ ಸುರಿದ ಅಧಿಕಾರಿ!

SCROLL FOR NEXT