ಬೆಂಗಳೂರು: ದೇಶಾದ್ಯಂತ ವೃದ್ಧರಿಗೆ ಪ್ರಯೋಜನಕಾರಿಯಾದ ಕ್ರಮದಲ್ಲಿ, ಜೀವನ ವೆಚ್ಚದಲ್ಲಿನ ಹೆಚ್ಚಳವನ್ನು ಪರಿಗಣಿಸಿ, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007ರ ಸೆಕ್ಷನ್ 9 ಅನ್ನು ಮರುಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರಕ್ಕೆ ಶಿಫಾರಸು ಮಾಡಿದೆ.
“ಇಷ್ಟು ಕಡಿಮೆ ನಿರ್ವಹಣೆಯು ಕಾಯ್ದೆಯ ಉದ್ದೇಶಗಳನ್ನು ಈಡೇರಿಸಬಹುದೇ? ಸೆಕ್ಷನ್ 9 ರ ಮಿತಿಯೊಳಗೆ ನಾಗರಿಕನು ಘನತೆ, ಜೀವನಾಧಾರ ಮತ್ತು ವೈದ್ಯಕೀಯ ಸಹಾಯವನ್ನು ಪಡೆಯಬಹುದೇ? ಈ ಬಗ್ಗೆ ಚಿಂತನೆಯ ಅಗತ್ಯವಿದೆ. ಇಲ್ಲದಿದ್ದರೆ ಆ ಹಿರಿಯ ನಾಗರಿಕರ ಅಸ್ತಿತ್ವವನ್ನು 'ಕೇವಲ ಪ್ರಾಣಿಗಳ' ಮಟ್ಟಕ್ಕೆ ಇಳಿಸುತ್ತದೆ ಎಂದು ಹೈಕೋರ್ಟ್ ಕಿಡಿ ಕಾರಿದೆ.
ಈ ನ್ಯಾಯಾಲಯವು ಶಾಸನ ಮಾಡಲು ಸಾಧ್ಯವಿಲ್ಲ; ಇದು ಸೆಕ್ಷನ್ 9 ಅನ್ನು ಪುನಃ ಬರೆಯಲು ಸಾಧ್ಯವಿಲ್ಲ. ಆದರೆ 2007 ರಲ್ಲಿ ಅರ್ಥಪೂರ್ಣವಾಗಿದ್ದ ಈ ನಿಬಂಧನೆಯು ಈಗ 2025 ರಲ್ಲಿ ಅದನ್ನು ಅಣಕಿಸುವಂತಿದೆ ಎಂದ ಹೈಕೋರ್ಟ್, ಕೇಂದ್ರ ಸರ್ಕಾರ ಸಂವೇದನಾಶೀಲಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ” ಎಂದು ಹೇಳಿದೆ.
ಆಹಾರ, ವಸತಿ, ಔಷಧ ಬೆಲೆ ಏರಿಕೆಯಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಈ ನ್ಯಾಯಾಲಯವು ಕೇಂದ್ರ ಸರ್ಕಾ, ಸೆಕ್ಷನ್ 9 ಅನ್ನು ಮರುಪರಿಶೀಲಿಸುವಂತೆ ಮತ್ತು ಜೀವನ ವೆಚ್ಚ ಸೂಚ್ಯಂಕಕ್ಕೆ ಅನುಗುಣವಾಗಿ ಮಿತಿಯನ್ನು ಪರಿಷ್ಕರಿಸುವಂತೆ ಶಿಫಾರಸು ಮಾಡುವುದು ಸೂಕ್ತವೆಂದು ಪರಿಗಣಿಸುತ್ತದೆ. ವೃದ್ಧಾಪ್ಯದಲ್ಲಿ ಘನತೆಯ ಜೀವನ ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಿದೆ.
ಈ ಕಾಯ್ದೆ ಜಾರಿಗೆ ಬಂದು 18 ವರ್ಷವಾದರೂ ಮಿತಿಯನ್ನು ಹೆಚ್ಚಿಸಲಾಗಿಲ್ಲ. 2007-08ರಲ್ಲಿ, ವೆಚ್ಚ ಹಣದುಬ್ಬರ ಸೂಚ್ಯಂಕವು 129 ರಷ್ಟಿತ್ತು; ಇಂದು ಅದು 363 ಕ್ಕೆ ಏರಿದೆ. ಹೀಗಾಗಿ, 2007ರಲ್ಲಿ 100 ರೂ.ಗೆ ಖರೀದಿಸಬಹುದಾದ ವಸ್ತು ಖರೀದಿಸಲು ಈಗ 1,000 ರೂ.ಗಳ ಅಗತ್ಯವಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ತೀವ್ರ ಅಸಮಾಧಾನವ ವ್ಯಕ್ತಪಡಿಸಿದರು.