ರಾಹುಲ್ ಗಾಂಧಿ  
ದೇಶ

ಮತದಾರನ ಮೊಬೈಲ್ ಸಂಖ್ಯೆ ಬಹಿರಂಗಗೊಳಿಸಿದ ರಾಹುಲ್ ಗಾಂಧಿ; ಪ್ರಯಾಗ್ ರಾಜ್ ವ್ಯಕ್ತಿಗೆ ಸಂಕಷ್ಟ: 300ಕ್ಕೂ ಹೆಚ್ಚು ಫೋನ್ ಕರೆ!

ಮತ ಕಳ್ಳತನದ ಬಗ್ಗೆ ಕೇಳಿಕೊಂಡು 300 ಕ್ಕೂ ಹೆಚ್ಚು ಕರೆಗಳು ನನಗೆ ಬಂದಿವೆ. ನನಗಂತೂ ಬೇಜಾರಾಗಿಹೋಗಿದೆ. ನಾನು ಹೋಗಿ ರಾಹುಲ್ ಗಾಂಧಿ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದರು.

ಪ್ರಯಾಗ್‌ರಾಜ್‌ನ ಮೇಜಾ ನಿವಾಸಿ ಅಂಜನಿ ಮಿಶ್ರಾ ಅವರಿಗೆ ನಿನ್ನೆ ಸಂಜೆಯಿಂದ ನೂರಾರು ಫೋನ್ ಕರೆಗಳು ಬಿಡುವಿಲ್ಲದೆ ಬರುತ್ತಿದೆಯಂತೆ. ಅದಕ್ಕೆ ಕಾರಣ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಿನ್ನೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತ ಕಳ್ಳತನ ಆರೋಪಗಳಿಗೆ ಸಂಬಂಧಿಸಿದಂತೆ ಅಂಜನಿ ಮಿಶ್ರಾ ಅವರ ಫೋನ್ ನಂಬರ್ ಹಂಚಿಕೊಂಡಿದ್ದು.

ಮೇಜಾ ತಹಸಿಲ್‌ನ ಮೇಜಾ ರಸ್ತೆಯಲ್ಲಿ ಸಾಮಾನ್ಯ ಸೇವಾ ಕೇಂದ್ರವನ್ನು ನಡೆಸುತ್ತಿರುವ ಮಿಶ್ರಾ , ನಿನ್ನೆ ಸಂಜೆಯಿಂದ, ಮತ ಕಳ್ಳತನದ ಬಗ್ಗೆ ಕೇಳಿಕೊಂಡು 300 ಕ್ಕೂ ಹೆಚ್ಚು ಕರೆಗಳು ನನಗೆ ಬಂದಿವೆ. ನನಗಂತೂ ಬೇಜಾರಾಗಿಹೋಗಿದೆ. ನಾನು ಹೋಗಿ ರಾಹುಲ್ ಗಾಂಧಿ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದರು.

ನಾನು ಕಳೆದ 15 ವರ್ಷಗಳಿಂದ ಈ ಮೊಬೈಲ್ ಸಂಖ್ಯೆಯನ್ನು ಬಳಸುತ್ತಿದ್ದೇನೆ. ರಾಹುಲ್ ಗಾಂಧಿ ತಮ್ಮ ಪತ್ರಿಕಾಗೋಷ್ಠಿಯಲ್ಲಿ ನನ್ನ ಸಂಖ್ಯೆಯನ್ನು ಹೇಗೆ ಹಂಚಿಕೊಂಡಿದ್ದಾರೆಂದು ನನಗೆ ಗೊತ್ತಿಲ್ಲ, ಈಗ ಕೆಲಸದ ಮಧ್ಯೆ ಫೋನ್ ಕರೆಗಳು ಬರುತ್ತಿರುವುದರಿಂದ ನನಗೆ ಕಿರಿಕಿರಿಯಾಗುತ್ತಿದೆ, ಸಮಸ್ಯೆಯಾಗುತ್ತಿದೆ ಎಂದು ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡುತ್ತಾ ಹೇಳಿದರು.

ಚುನಾವಣಾ ಆಯೋಗದಿಂದ ಮತ ಕಳ್ಳತನ ಬಗ್ಗೆ ತಮ್ಮ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ "ಪ್ರಜಾಪ್ರಭುತ್ವವನ್ನು ನಾಶಪಡಿಸಿದ"ವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಕರ್ನಾಟಕ ವಿಧಾನಸಭಾ ಆಳಂದ ಕ್ಷೇತ್ರದ ಡೇಟಾವನ್ನು ಉಲ್ಲೇಖಿಸಿ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಲಾಗುತ್ತಿದೆ ಎಂದು ಹೇಳಿದ್ದರು.

ಚುನಾವಣಾ ಆಯೋಗವು ಈ ಆರೋಪಗಳನ್ನು ಆಧಾರರಹಿತ ಎಂದಿದೆ. ಸಾರ್ವಜನಿಕರಲ್ಲಿ ಯಾರೊಬ್ಬರೂ ಆನ್‌ಲೈನ್‌ನಲ್ಲಿ ಯಾವುದೇ ಮತವನ್ನು ಅಳಿಸಲು ಸಾಧ್ಯವಿಲ್ಲ, ಇದನ್ನು ರಾಹುಲ್ ಗಾಂಧಿಯವರು ತಪ್ಪಾಗಿ ಭಾವಿಸಿದ್ದಾರೆ ಎಂದು ಹೇಳಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಬ್ಬಿಗೆ ದರ ನಿಗದಿಗೆ ಆಗ್ರಹ: ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ, ಸರ್ಕಾರದ ವಿರುದ್ಧ ಆಕ್ರೋಶ

INDIA bloc ಅಧಿಕಾರಕ್ಕೆ ಬಂದರೆ ಬಿಹಾರ ರೈತರಿಗೆ ಬಂಪರ್ ಕೊಡುಗೆ: ತೇಜಸ್ವಿ ಯಾದವ್

HY Meti: ಮಾಜಿ ಸಚಿವ, ಕಾಂಗ್ರೆಸ್ ನ ಹಾಲಿ ಶಾಸಕ ಹೆಚ್.ವೈ.ಮೇಟಿ ನಿಧನ

ಬಿಹಾರ ಮತದಾರರಿಗೆ ವೇತನ ಸಹಿತ ರಜೆ ನೀಡಿ: ರಾಜ್ಯದ ಎಲ್ಲ ಸಂಸ್ಥೆಗಳಿಗೆ ಡಿಕೆ ಶಿವಕುಮಾರ್ ಮನವಿ; JDS ಆಕ್ರೋಶ

ನಿನಗೋಸ್ಕರ ನನ್ನ ಹೆಂಡತಿಯನ್ನು ಕೊಂದೆ: ಹತ್ಯೆಯ ಬಳಿಕ 4-5 ಮಹಿಳೆಯರಿಗೆ ಬೆಂಗಳೂರು ವೈದ್ಯನ ಪ್ರತ್ಯೇಕ ಸಂದೇಶ!

SCROLL FOR NEXT