ವಿಡಿಯೋ ಪೋಸ್ಟ್ ಮಾಡಿದ ರಷ್ಯಾ ಮಹಿಳೆ 
ದೇಶ

Attari-Wagah Border: ಇದೇನಾ 'ಸ್ವಚ್ಛ ಭಾರತ'? ತೀವ್ರ ಚರ್ಚೆ ಹುಟ್ಟುಹಾಕಿದ ರಷ್ಯಾ ಮಹಿಳೆಯ ವೈರಲ್ Video!

ಹೌದು. ಅಟ್ಟಾರಿ- ವಾಘಾ ಗಡಿಯಲ್ಲಿನ ಮಿಲಿಟರಿ ಕಾರ್ಯಕ್ರಮದ ವಿಡಿಯೋವನ್ನು ರಷ್ಯಾದ ಪ್ರವಾಸಿ ಅಮಿಯಾನಾ ಫೈಂಡ್ಸ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ದೇಶದಲ್ಲಿನ ನಾಗರಿಕ ಪ್ರಜ್ಞೆಯ ಬಗ್ಗೆ ಚರ್ಚೆ ನಡೆಯುತ್ತಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಆಡಳಿತ 11 ವರ್ಷಗಳ ಹಿಂದೆಯೇ 'ಸ್ವಚ್ಛ ಭಾರತ' ಅಭಿಯಾನ ಆರಂಭಿಸಿದ್ದರೂ ರಷ್ಯಾದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ತೀವ್ರ ಚರ್ಚೆ ಹುಟ್ಟುಹಾಕಿದೆ. ಇದೇನಾ ಸ್ವಚ್ಛ ಭಾರತ? ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಹೌದು. ಅಟ್ಟಾರಿ- ವಾಘಾ ಗಡಿಯಲ್ಲಿನ ಮಿಲಿಟರಿ ಕಾರ್ಯಕ್ರಮದ ವಿಡಿಯೋವನ್ನು ರಷ್ಯಾದ ಪ್ರವಾಸಿ ಅಮಿಯಾನಾ ಫೈಂಡ್ಸ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ದೇಶದಲ್ಲಿನ ನಾಗರಿಕ ಪ್ರಜ್ಞೆಯ ಬಗ್ಗೆ ಚರ್ಚೆ ನಡೆಯುತ್ತಿದೆ.

ವಿಡಿಯೋದಲ್ಲಿ ಏನಿದೆ?

ಅಂದಹಾಗೆ, ಸಮಾರಂಭದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ಐಸ್ ಕ್ರೀಮ್ ತಿಂದು, ಅದರ ಸುತ್ತಲಿನ ಪೇಪರ್ ನ್ನು ಕಸದ ಡಬ್ಬಿಗೆ ಹಾಕುವ ಬದಲು ಮುಂದಿನ ಸೀಟಿಗೆ ತಳ್ಳುವುದು ವಿಡಿಯೋದಲ್ಲಿದೆ.

ಸುಮಾರು ಎರಡು ಮಿಲಿಯನ್ ಗೂ ಹೆಚ್ಚು ವೀಕ್ಷಣೆ

ಅಮಿಯಾನಾ ಫೈಂಡ್ಸ್‌ಗೆ "ಕೆಲವರು ಯಾಕೆ ಹೀಗೆ?" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ತ್ವರಿತಗತಿಯಲ್ಲಿ ವೈರಲ್ ಆಗಿದ್ದು, ವ್ಯಾಪಕವಾದ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ. ಫೈಂಡ್ಸ್ ಅದನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದಂತೆ ಆ ವ್ಯಕ್ತಿ ಪದೇ ಪದೇ ಅದೇ ರೀತಿ ಮಾಡಿದ್ದಾನೆ. ಈ ವಿಡಿಯೋ ಸುಮಾರು ಎರಡು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದ್ದು, ನೂರಾರು ಜನರು ಕಾಮೆಂಟ್ ಮಾಡುತ್ತಿದ್ದಾರೆ.

ಸಾರ್ವಜನಿಕರಲ್ಲಿ ನಾಗರಿಕ ಪ್ರಜ್ಞೆಯ ಕೊರತೆಗಾಗಿ ಕೆಲವರು ಕ್ಷಮೆಯಾಚಿಸಿದರೆ, ಮತ್ತೆ ಕೆಲವರು ಇದನ್ನು ಸಂಪೂರ್ಣವಾಗಿ ಜಾಗೃತಿ ಸಮಸ್ಯೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಟ ವಿಜಯ್‌ TVK ಪಕ್ಷದ ರ‍್ಯಾಲಿ ವೇಳೆ ಕಾಲ್ತುಳಿತ: 3 ಮಕ್ಕಳು ಸೇರಿ ಸುಮಾರು 31ಕ್ಕೂ ಹೆಚ್ಚು ಮಂದಿ ಸಾವು; 40 ಮಂದಿ ಸ್ಥಿತಿ ಚಿಂತಾಜನಕ!

Bengaluru Potholes: ರಸ್ತೆಗುಂಡಿ ಮುಚ್ಚಲು 1 ತಿಂಗಳು ಗಡುವು; ಇಂಜಿನಿಯರ್ ಅಮಾನತ್ತಿಗೆ ಸಿದ್ದರಾಮಯ್ಯ ಆದೇಶ; Video

ಭಾರತಕ್ಕೆ ಪ್ರಮುಖ ರಾಜತಾಂತ್ರಿಕ ಗೆಲುವು: ಅಬುಧಾಬಿಯಿಂದ ಮೋಸ್ಟ್ ವಾಂಟೆಡ್ ಖಾಲ್ಸಾ ಭಯೋತ್ಪಾದಕನ ಹಸ್ತಾಂತರ!

"ನಾವು ಹಾಗೆ ಮಾಡದೇ ಇದ್ದಲ್ಲಿ ಸಂಪೂರ್ಣ ಲೇಹ್ ಹೊತ್ತಿ ಉರಿಯುತ್ತಿತ್ತು": ಪೊಲೀಸರ ಕ್ರಮಕ್ಕೆ ಡಿಜಿಪಿ ಜಮ್ವಾಲ್ ಸಮರ್ಥನೆ

ಪಂಚ ಗ್ಯಾರಂಟಿ ಯೋಜನೆಗಳು ಭವಿಷ್ಯದ ಕಾಂಗ್ರೆಸ್ ಸರ್ಕಾರವನ್ನು ಕಾಪಾಡಲಿವೆ: ಡಿಸಿಎಂ ಡಿ.ಕೆ ಶಿವಕುಮಾರ್ ಅಭಿಮತ

SCROLL FOR NEXT