ಅಸಾದುದ್ದೀನ್ ಓವೈಸಿ  
ದೇಶ

TMC, ಇತರ ಪಕ್ಷಗಳು ಮುಸ್ಲಿಮರನ್ನು ಮತಕ್ಕಾಗಿ ಬಳಸಿಕೊಂಡಿವೆ; ಅವರಿಗೆ ಏನನ್ನೂ ಮಾಡಿಲ್ಲ: ಓವೈಸಿ

"ನಿಮ್ಮ ಆರ್ಥಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬಲ್ಲ ಮುಸ್ಲಿಂ ಸಮುದಾಯದ ನಾಯಕರನ್ನೇ ಆಯ್ಕೆ ಮಾಡುವ ಸಮಯ ಬಂದಿದೆ" ಎಂದು ಓವೈಸಿ ಹೇಳಿದರು.

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಇತರ ಪಕ್ಷಗಳು ಮುಸ್ಲಿಮರನ್ನು ಕೇವಲ ಮತಗಳಿಗಾಗಿ ಬಳಸಿಕೊಂಡಿವೆ. ಆದರೆ ಸಮುದಾಯದ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬುಧವಾರ ಆರೋಪಿಸಿದ್ದಾರೆ.

ಹುಮಾಯೂನ್ ಕಬೀರ್ ನೇತೃತ್ವದ ಎಜೆಯುಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ನೌಡಾದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಕಳೆದ 50 ವರ್ಷಗಳಲ್ಲಿ ಮುಸ್ಲಿಂ ಸಮುದಾಯದ ಸದಸ್ಯರು ಕಾಂಗ್ರೆಸ್, ಎಡರಂಗ ಮತ್ತು ಟಿಎಂಸಿಗೆ ಮತ ಹಾಕಿದ್ದಾರೆ. ಆದರೆ ಅವರ ಸ್ಥಿತಿ ಇನ್ನೂ ಸುಧಾರಿಸಿಲ್ಲ ಎಂದರು.

"ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು, ವಿಧಾನಸಭೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ಪಡೆಯುವುದಕ್ಕಾಗಿ ಮತ್ತು ಅವರ ನಿಜವಾದ ಅಭಿವೃದ್ಧಿಗಾಗಿ, ನಾವು ಕಬೀರ್ ಅವರೊಂದಿಗೆ ಕೈಜೋಡಿಸಿದ್ದೇವೆ. ಒಟ್ಟಾಗಿ, ನಾವು ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷಕ್ಕೆ ಆಘಾತ ನೀಡುತ್ತೇವೆ" ಎಂದು ಓವೈಸಿ ಪ್ರತಿಪಾದಿಸಿದರು.

"ನಿಮ್ಮ ಆರ್ಥಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬಲ್ಲ ಮುಸ್ಲಿಂ ಸಮುದಾಯದ ನಾಯಕರನ್ನೇ ಆಯ್ಕೆ ಮಾಡುವ ಸಮಯ ಬಂದಿದೆ" ಎಂದು ಓವೈಸಿ ಹೇಳಿದರು.

294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೊನೆಗೂ ಪುಟಿದೆದ್ದ ಷೇರುಮಾರುಕಟ್ಟೆ: Sensex 1,186 ಅಂಕ ಏರಿಕೆ, 10 ಲಕ್ಷ ಕೋಟಿ ರೂ ಲಾಭ, ಚೇತರಿಕೆಗೆ ಇದೇನಾ ಕಾರಣ?

ಹಾರ್ಮುಜ್ ಜಲಸಂಧಿ ತೆರೆಯಲಾಗುವುದು, ಆದರೆ...: ಟ್ರಂಪ್‌ಗೆ ಇರಾನ್ ಕೊಟ್ಟ ಸಂದೇಶವೇನು?

ಜಾಗತಿಕ ಅನಿಶ್ಚಿತತೆ ನಡುವೆ ಸಾಮೂಹಿಕ layoff ಶಾಕ್: Oracle ಕಂಪೆನಿಯಿಂದ ಸಾವಿರಾರು ಮಂದಿ ವಜಾ, ಭಾರತಕ್ಕೂ ತಟ್ಟಿದ ಬಿಸಿ

Census 2027: ದೇಶದಲ್ಲಿ ರಾಷ್ಟ್ರೀಯ ಜನಗಣತಿ ಆರಂಭ: ಇದು ಯಾಕೆ ಮುಖ್ಯ ಗೊತ್ತಾ?

Hormuz ಜಲಸಂಧಿಗಾಗಿ ಯುದ್ಧಕ್ಕೆ ಸೌದಿ, ಯುಎಇ ಸಜ್ಜು; ಅಮೆರಿಕ ಜೊತೆ ಇರಾನ್ ವಿರುದ್ಧ ಗಲ್ಫ್ ರಾಷ್ಟ್ರಗಳ ಸಮರ; ಇಸ್ರೇಲ್ ಯೋಜನೆ ಏನು?

SCROLL FOR NEXT