ರಾಜಾ ರವಿ ವರ್ಮಾ ಕಲಾಕೃತಿ 
ದೇಶ

ಎಂ. ಎಫ್ ಹುಸೇನ್ 'ಗ್ರಾಮಯಾತ್ರ' ಹಿಂದಿಕ್ಕಿದ ರಾಜಾ ರವಿ ವರ್ಮ ಕಲಾಕೃತಿ: ಬರೋಬ್ಬರೀ 167 ಕೋಟಿಗೆ ಹರಾಜು!

ಚಿತ್ರ ಕಲೆಯಿಂದಲೇ ಪ್ರಸಿದ್ಧಿ ಪಡೆದ ರಾಜಾ ರವಿ ವರ್ಮ ರಚಿಸಿದ್ದ ಯಶೋಧಾ ಮತ್ತು ಕೃಷ್ಣನ ತೈಲವರ್ಣ ಕಲಾಕೃತಿ 167 ಕೋಟಿ ರುಪಾಯಿಗೆ ಹರಾಜಾಗಿದೆ. ಈ ಮೂಲಕ ಹರಾಜಿನಲ್ಲಿ ಮಾರಾಟವಾದ ದುಬಾರಿ ಕಲಾಕೃತಿ ಎನಿಸಿದೆ.

1890 ರಲ್ಲಿ ರಾಜಾ ರವಿವರ್ಮ ಅವರು ರಚಿಸಿದ್ದ 'ಯಶೋದಾ ಮತ್ತು ಕೃಷ್ಣ'ಕಲಾಕೃತಿಯೂ ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಭಾರತೀಯ ಕಲಾಕೃತಿಯಾಗಿದೆ. MF ಹುಸೇನ್ ಅವರ 'ಅನ್‌ಟೈಟಲ್ಡ್' (ಗ್ರಾಮ್ ಯಾತ್ರಾ) ಗಿಂತ ಮುಂದಿದೆ.

ಚಿತ್ರ ಕಲೆಯಿಂದಲೇ ಪ್ರಸಿದ್ಧಿ ಪಡೆದ ರಾಜಾ ರವಿ ವರ್ಮ ರಚಿಸಿದ್ದ ಯಶೋಧಾ ಮತ್ತು ಕೃಷ್ಣನ ತೈಲವರ್ಣ ಕಲಾಕೃತಿ 167 ಕೋಟಿ ರುಪಾಯಿಗೆ ಹರಾಜಾಗಿದೆ. ಈ ಮೂಲಕ ಹರಾಜಿನಲ್ಲಿ ಮಾರಾಟವಾದ ದುಬಾರಿ ಕಲಾಕೃತಿ ಎನಿಸಿದೆ.

ಬುಧವಾರ ಮುಂಬೈನಲ್ಲಿ ನಡೆದ ಸ್ಯಾಫ್ರನ್ ಆರ್ಟ್ ಹರಾಜು ಪ್ರಕ್ರಿಯೆಯಲ್ಲಿ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಸಂಸ್ಥಾಪಕ ಬಿಲಿಯನೆರ್ ಸೈರಸ್‌ ಪೂನವಾಲಾ ಈ ಚಿತ್ರವನ್ನು ಖರೀದಿಸಿದ್ದಾರೆ.

ಕಳೆದ ವರ್ಷ ಎಂಎಫ್‌ ಹುಸೇನ್‌ ಅವರ ಅನ್‌ಟೈಟಲ್ಡ್ (ಗ್ರಾಮ ಯಾತ್ರಾ) ಚಿತ್ರ ಹರಾಜಿನಲ್ಲಿ ₹118 ಕೋಟಿಗೆ ಮಾರಾಟವಾಗಿತ್ತು. ಅದನ್ನು ದೆಹಲಿ ಮೂಲದ ಕಿರಣ್ ನಾಡರ್ ಅವರು ಖರೀದಿಸಿದ್ದರು. ಇದು ದಾಖಲೆ ಸೃಷ್ಟಿಸಿತ್ತು. ಆದರೆ ಈಗ ರವಿವರ್ಮ ಕಲಾಕೃತಿ ₹167 ಕೋಟಿಗೆ ಮಾರಾಟವಾಗಿ ಹೊಸ ದಾಖಲೆ ನಿರ್ಮಿಸಿದೆ.

ತಾಯಿ ಮತ್ತು ಮಗನ ಮಮತೆಯ ಕ್ಷಣಗಳನ್ನು ಒಳಗೊಂಡಿರುವ ಈ ಚಿತ್ರವನ್ನು ರಾಜಾ ರವಿವರ್ಮ 1890ರಲ್ಲಿ ರಚಿಸಿದ್ದರು. ಯಶೋಧಾ ಹಸುವಿನ ಬಳಿ ಕುಳಿತು ಹಾಲನ್ನು ಕರೆಯುತ್ತಿರುವಾಗ ಬಾಲ ಕೃಷ್ಣ ಹಿಂದಿನಿಂದ ಲೋಟವೊಂದನ್ನು ಹಿಡಿದು ನಿಲ್ಲುವ ದೃಶ್ಯವನ್ನು ಈ ಚಿತ್ರದಲ್ಲಿ ವಿವರಿಸಲಾಗಿದೆ.

ರಾಜಾ ರವಿವರ್ಮ ಅವರ ಕಲಾಕೃತಿಗಳನ್ನು ರಾಷ್ಟ್ರೀಯ ಸಂಪತ್ತು ಎಂದು ವರ್ಗೀಕರಿಸಲಾಗಿದೆ. ಆದ್ದರಿಂದ ಈ ಚಿತ್ರವನ್ನು ಭಾರತದಿಂದ ಹೊರಗೆ ಕೊಂಡೊಯ್ಯಲು ಅವಕಾಶವಿಲ್ಲ. ಇಂತಹ ಐತಿಹಾಸಿಕ ಕಲಾಕೃತಿಯನ್ನು ಸಂರಕ್ಷಿಸುವುದು ಗೌರವ ಮತ್ತು ಜವಾಬ್ದಾರಿಯಾಗಿದೆ. ಈ ರಾಷ್ಟ್ರೀಯ ಸಂಪತ್ತನ್ನು ಕಾಲಕಾಲಕ್ಕೆ ಸಾರ್ವಜನಿಕರ ವೀಕ್ಷಣೆಗೂ ಲಭ್ಯವಾಗುವಂತೆ ಮಾಡುವುದು ನನ್ನ ಗುರಿ ಎಂದು ಪೂನಾವಾಲ ಹೇಳಿದ್ದಾರೆ.

ಇದು ಭಾರತೀಯ ಕಲಾ ಮಾರುಕಟ್ಟೆಗೆ ನಿರ್ಣಾಯಕ ಕ್ಷಣವಾಗಿದೆ. ₹167.2 ಕೋಟಿಯಲ್ಲಿ, ರಾಜಾ ರವಿವರ್ಮ ಅವರ ಯಶೋದ ಮತ್ತು ಕೃಷ್ಣ - ಮಡೋನಾ ಮತ್ತು ಕ್ರಿಸ್ತನನ್ನು ಅಥವಾ ಯಾವುದೇ ತಾಯಿ ಮತ್ತು ಮಗುವನ್ನು ನೆನಪಿಸುವ ಸಾರ್ವತ್ರಿಕ ವಿಷಯವಾಗಿದೆ. ಭಾರತೀಯ ಕಲೆಯ ಮೋನಾಲಿಸಾ - ಹೊಸ ವಿಶ್ವ ದಾಖಲೆಯನ್ನು ಸಾಧಿಸಿತ್ತು ಎಂದು ದೆಹಲಿ ಆರ್ಟ್ ಗ್ಯಾಲರಿ ಸಿಇಒ ಮತ್ತು ಎಂಡಿ ಆಹಿಶ್ ಆನಂದ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾನೂನು ಸುವ್ಯವಸ್ಥೆಗೂ GDPಗೂ ನೇರ ಸಂಬಂಧವಿದೆ: ಸಿಎಂ ಸಿದ್ದರಾಮಯ್ಯ

ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ, ಚಿಂತಿಸಬೇಡಿ: ಪಶ್ಚಿಮ-ಏಷ್ಯಾ ಯುದ್ಧದ ನಡುವೆ ಇರಾನ್ ಅಭಯ

ಮಾಲ್ಡಾದಲ್ಲಿ ಭಾರೀ ಅಶಾಂತಿ: 7 ನ್ಯಾಯಾಂಗ ಅಧಿಕಾರಿಗಳನ್ನು 9 ಗಂಟೆ ಒತ್ತೆಯಾಳಾಗಿಸಿದ ಉದ್ರಿಕ್ತರು; ದೀದಿ ವಿರುದ್ಧ CJI ಗರಂ

ಪಶ್ಚಿಮ ಏಷ್ಯಾ ಉದ್ವಿಗ್ನತೆ: ಕಚ್ಚಾ ತೈಲ ಬೆಲೆ ಏರಿಕೆ ಎಫೆಕ್ಟ್; ಆರಂಭಿಕ ವಹಿವಾಟಿನಲ್ಲಿ ಶೇ.2ರಷ್ಟು ಕುಸಿತ

‘ಇರಾನ್‌ಗೆ ಯಾವುದೇ ಶತ್ರುಭಾವನೆ ಇಲ್ಲ; ಈ ಯುದ್ಧ ಯಾರ ಹಿತಕ್ಕೆ'?: ಅಮೆರಿಕನ್ನರನ್ನುದ್ದೇಶಿಸಿ ಪತ್ರ ಬರೆದ ಅಧ್ಯಕ್ಷ ಮಸೂದ್ ಪೆಜೆಷ್ಕಿಯನ್

SCROLL FOR NEXT