ಸಾಂದರ್ಭಿಕ ಚಿತ್ರ 
ದೇಶ

ಭಾರತದತ್ತ ಹೊರಟಿದ್ದ ಇರಾನ್ ತೈಲ ಹೊತ್ತ ಹಡಗು ಏಕಾಏಕಿ ಚೀನಾಗೆ ರೀ-ರೂಟ್; ಕೇಂದ್ರ ಹೇಳಿದ್ದೇನು?

ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಇರಾನಿನ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ತೈಲ ಟ್ಯಾಂಕರ್, ಭಾರತಕ್ಕೆ ಬರುವಾ ಮಾರ್ಗ ಮಧ್ಯದಲ್ಲಿಯೇ ಚೀನಾಗೆ ಮಾರ್ಗ ಬದಲಾಯಿಸಿದೆ ಎಂಬ ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.

ನವದೆಹಲಿ: ಕಚ್ಚಾ ತೈಲ ಆಮದುಗೆ ಸಂಬಂಧಿಸಿದಂತೆ ಇರಾನ್‌ನೊಂದಿಗೆ ಯಾವುದೇ ಪಾವತಿ ಸಮಸ್ಯೆಗಳಿಲ್ಲ ಮತ್ತು ಸಂಸ್ಕರಣಾಗಾರರು ಆ ದೇಶದಿಂದ ಮತ್ತು ಇತರ ಜಾಗತಿಕ ಪೂರೈಕೆದಾರರಿಂದ ತೈಲ ಪಡೆಯುವುದನ್ನು ಮುಂದುವರಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ.

ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಇರಾನಿನ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ತೈಲ ಟ್ಯಾಂಕರ್, ಭಾರತಕ್ಕೆ ಬರುವಾ ಮಾರ್ಗ ಮಧ್ಯದಲ್ಲಿಯೇ ಚೀನಾಗೆ ಮಾರ್ಗ ಬದಲಾಯಿಸಿದೆ ಎಂಬ ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.

ಪಾವತಿ ಅಡಚಣೆಗಳಿಂದಾಗಿ ಈ ಹಿಂದೆ ಗೊತ್ತುಪಡಿಸಲಾದ ಗಮ್ಯಸ್ಥಾನ ಗುಜರಾತ್‌ನ ವಾಡಿನಾರ್‌ ಬದಲು ಚೀನಾಗೆ ತಿರುಗಿಸಲಾಗಿದೆ ಎಂಬ ವರದಿ "ಅವಾಸ್ತವಿಕ" ಮತ್ತು "ವಾಸ್ತವಿಕವಾಗಿ ತಪ್ಪು" ಎಂದು ಹೇಳಿರುವ ಸಚಿವಾಲಯ, "ಇರಾನಿನ ಕಚ್ಚಾ ತೈಲ ಆಮದುಗಳಿಗೆ ಯಾವುದೇ ಪಾವತಿ ಅಡಚಣೆಗಳಿಲ್ಲ" ಎಂದು ಸ್ಪಷ್ಟಪಡಿಸಿದೆ.

"ಭಾರತವು 40ಕ್ಕಿಂತ ಹೆಚ್ಚು ದೇಶಗಳಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಕಂಪನಿಗಳು ವಾಣಿಜ್ಯ ಪರಿಗಣನೆಗಳ ಆಧಾರದ ಮೇಲೆ ವಿಭಿನ್ನ ಮೂಲಗಳು ಮತ್ತು ಭೌಗೋಳಿಕ ಪ್ರದೇಶಗಳಿಂದ ತೈಲವನ್ನು ಪಡೆಯಬಹುದು" ಎಂದು ಸಚಿವಾಲಯ ತಿಳಿಸಿದೆ.

2002 ರಲ್ಲಿ ನಿರ್ಮಿಸಲಾದ ಮತ್ತು 2025 ರಲ್ಲಿ ಅಮೆರಿಕ ಅನುಮೋದಿಸಿದ ಅಫ್ರಾಮ್ಯಾಕ್ಸ್ ಟ್ಯಾಂಕರ್ ಪಿಂಗ್ ಶುನ್, ಭಾರತದಿಂದ ಮಾರ್ಗ ಬದಲಾಯಿಸಿ ಚೀನಾದ ಕಡೆಗೆ ಹೊರಟಿದೆ ಎಂದು ಕೆಪ್ಲರ್‌ ಹಡಗು ಟ್ರ್ಯಾಕಿಂಗ್‌ ಸಂಸ್ಥೆ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ಸತತ 4ನೇ ಬಾರಿ CNG ದರ ಏರಿಕೆ: ಕೆಜಿಗೆ 2 ರೂ. ಹೆಚ್ಚಳ, ವಾಹನ ಸವಾರರಿಗೆ ಶಾಕ್‌

ಗೃಹಲಕ್ಷ್ಮಿ ಯೋಜನೆಯಲ್ಲಿ 100 ಕೋಟಿ ರೂ.ದುರ್ಬಳಕೆ: ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಚಿಂತನೆ..!

Main Tera Hero: ರಿರಿಲೀಸ್; ಗರ್ಲ್ ಫ್ರೆಂಡ್ ಗಾಗಿ ಅಭಿಮಾನಿಯ ಡ್ಯಾನ್ಸ್ , ವಿಡಿಯೋ ವೈರಲ್, ವರುಣ್ ಧವನ್ ಹೇಳಿದ್ದೇನು?

ವಿಜಯ್ ಸಿಎಂ ಆಗುತ್ತಿದ್ದಂತೆಯೇ ಆಂಧ್ರದಲ್ಲಿ ಗಂಭೀರವಾದ DCM ಪವನ್ ಕಲ್ಯಾಣ್ ! JSP ಕಾರ್ಯಕರ್ತರಿಗೆ ಖಡಕ್ ಸೂಚನೆ

SCROLL FOR NEXT