ಇರಾನ್ ಗೆ ನೆರವು ನೀಡಲು ಮುಂದಾಗಿರುವ ಭಾರತೀಯರು online desk
ದೇಶ

ಭಾರತ ಎಂದಿಗೂ ನ್ಯಾಯದ ಪರ ನಿಂತಿದೆ; ಭಾರತೀಯರ ಕಾಳಜಿ ವಹಿಸುವುದು ನನ್ನ ಜವಾಬ್ದಾರಿ- ಇರಾನ್ ಪ್ರತಿನಿಧಿ ಇಲಾಹಿ

ಇಲಾಹಿ ಮುಂದುವರಿದು ಭಾರತೀಯರ ಸೌಜನ್ಯವನ್ನು ಹೊಗಳಿ, ಭಾರತ ಯಾವಾಗಲೂ ನ್ಯಾಯದ ಪರ ನಿಂತಿದೆ ಎಂದು ಹೇಳಿದರು. “ಅವರಿಗೆ ಅಪಾರ ನಿಷ್ಠೆ, ದಯೆ ಮತ್ತು ಮಾನವೀಯತೆ ಇದೆ.

ನವದೆಹಲಿ: ಭಾರತೀಯರ ಕಾಳಜಿ ವಹಿಸುವುದು ನನ್ನ ಜವಾಬ್ದಾರಿ ಎಂದು ಭಾರತದಲ್ಲಿರುವ ಇರಾನ್ ಪ್ರತಿನಿಧಿ ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಹೇಳಿದ್ದಾರೆ.

ಇಲಾಹಿ ಇರಾನ್ ಸರ್ವೋಚ್ಛ ನಾಯಕನ ಭಾರತದ ಪ್ರತಿನಿಧಿಯಾಗಿದ್ದು, ಸಂಘರ್ಷ ತೀವ್ರಗೊಂಡಾಗ ಇರಾನ್ ಕೂಡ ತಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟವಾಗಿ ಸಹಕರಿಸಿ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ. ANI ಜೊತೆಗಿನ ಸಂಭಾಷಣೆಯಲ್ಲಿ ಇಲಾಹಿ, ಭಾರತೀಯ ಸಹೋದರರು ಮತ್ತು ಸಹೋದರಿಯರ ಕಾಳಜಿ ವಹಿಸುವುದು ನನ್ನ ಜವಾಬ್ದಾರಿ ಎಂದು ತಿಳಿಸಿದ್ದಾರೆ.

“ಈ ಸಂಘರ್ಷ ತೀವ್ರವಾದಾಗ, ತಹ್ರಾನ್ ಹಾಗೂ ಇತರ ನಗರಗಳಲ್ಲಿ, ಮುಖ್ಯವಾಗಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದ ಸುಮಾರು 3,000 ವಿದ್ಯಾರ್ಥಿಗಳನ್ನು ಸುರಕ್ಷಿತ ವಸತಿಗಳಿಗೆ ಸ್ಥಳಾಂತರಿಸುವ ಕೆಲಸವನ್ನು ನಾನು ನೋಡಿಕೊಂಡೆ. ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ನೆರವು ನೀಡಲು ನಾವು ಟೆಹ್ರಾನ್‌ನ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಹ ಸಮನ್ವಯವಾಗಿ ಕೆಲಸ ಮಾಡಿದ್ದೇವೆ. ಸುಮಾರು 400 ಮಂದಿಯ ಪ್ರವಾಸಿಗರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು; ನಂತರ ಅವರನ್ನು ಅರ್ಮೇನಿಯಾಗೆ, ಅಲ್ಲಿಿಂದ ಭಾರತಕ್ಕೆ ಮರಳುವ ಪ್ರಯಾಣಕ್ಕೆ ನಾನು ಸಹಾಯ ಮಾಡಿದೆ ಎಂದು ಇಲಾಹಿ ತಿಳಿಸಿದ್ದಾರೆ.

ನಮ್ಮ ಭಾರತೀಯ ಸಹೋದರರು ಮತ್ತು ಸಹೋದರಿಯರ ಬಗ್ಗೆ ಕಾಳಜಿ ವಹಿಸುವುದು ನನ್ನ ಕರ್ತವ್ಯ,” ಎಂದು ಅವರು ಹೇಳಿದರು. ಇಲಾಹಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇರಾನ್ ನಾಯಕತ್ವದ ನಡುವಿನ ಮಾತುಕತೆಗಳನ್ನು ಸ್ಮರಿಸಿದರು. “ಭಾರತದ ಪ್ರಧಾನಮಂತ್ರಿಗಳು ನಮ್ಮ ರಾಷ್ಟ್ರಪತಿಗಳೊಂದಿಗೆ ಫಲಪ್ರದ ಮಾತುಕತೆ ನಡೆಸಿದ್ದಾರೆ, ಹಾಗೆಯೇ ಭಾರತದ ವಿದೇಶಾಂಗ ಸಚಿವರು ನಮ್ಮ ವಿದೇಶಾಂಗ ಸಚಿವರೊಂದಿಗೆ ಹಲವಾರು ಬಾರಿ ಸಂಭಾಷಣೆ ನಡೆಸಿದ್ದಾರೆ. ಭಾರತೀಯ ಜನರ ಮೌಲ್ಯವನ್ನು ವಿವರಿಸಲು ಶಬ್ದಗಳು ಸಾಲವಿಲ್ಲ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಲಾಹಿ ಮುಂದುವರಿದು ಭಾರತೀಯರ ಸೌಜನ್ಯವನ್ನು ಹೊಗಳಿ, ಭಾರತ ಯಾವಾಗಲೂ ನ್ಯಾಯದ ಪರ ನಿಂತಿದೆ ಎಂದು ಹೇಳಿದರು. “ಅವರಿಗೆ ಅಪಾರ ನಿಷ್ಠೆ, ದಯೆ ಮತ್ತು ಮಾನವೀಯತೆ ಇದೆ.

ಇತ್ತೀಚೆಗೆ ನಾನು ಒಬ್ಬ ಹಿಂದೂ ಪ್ರಾಧ್ಯಾಪಕರೊಂದಿಗೆ ಮಾತನಾಡಿದ್ದೆ; ಅವರು, ‘ನಾವು ನೆರೆ ರಾಷ್ಟ್ರಗಳಲ್ಲ, ಒಂದೇ ಧರ್ಮದವರೂ ಅಲ್ಲ, ಆದರೂ ನೀವು ಸತ್ಯದ ಪರ ನಿಂತಿದ್ದೀರಿ ಎಂದು ಅರಿತು ನಿಮ್ಮನ್ನು ಬೆಂಬಲಿಸುತ್ತೇವೆ’ ಎಂದು ಹೇಳಿದರು.

ಇತಿಹಾಸದ ಪೂರಾ ಅವಧಿಯಲ್ಲಿ ಭಾರತ ನ್ಯಾಯ ಮತ್ತು ಮಾನವೀಯತೆಯ ಜೊತೆಯಲ್ಲೇ ನಿಂತಿದೆ. ಇಂತಹ ಅದ್ಭುತ ಗುಣಗಳನ್ನು ಹೊಂದಿರುವ ನಮ್ಮ ಭಾರತದಲ್ಲಿನ ಸಹೋದರರು ಮತ್ತು ಸಹೋದರಿಯರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ; ಅವರನ್ನು ವರ್ಣಿಸಲು ಪದಗಳು ಸಾಕಾಗುವುದಿಲ್ಲ,” ಎಂದು ಇಲಾಹಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

EC-TMC ಸಭೆಯಲ್ಲಿ ಕೋಲಾಹಲ: ಟಿಎಂಸಿ ನಾಯಕರಿಗೆ ‘ಇಲ್ಲಿಂದ ತೊಲಗಿ’ ಎಂದ CEC, ಡೆರೆಕ್ ಒಬ್ರಿಯಾನ್ ಆಕ್ರೋಶ..!

Video ವೈರಲ್: ಬಾಬಾ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ: ನಡು ರಸ್ತೆಯಲ್ಲೇ ಅಳುತ್ತಾ ಸಹಾಯಕ್ಕಾಗಿ ಅಂಗಲಾಚಿದ 17 ವರ್ಷದ ಬಾಲಕಿ!

ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಶಾಕ್: ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ ಪ್ರಕರಣಗಳ POCSO ಅಡಿ ವರದಿ ಕಡ್ಡಾಯ: Dinesh Gundu rao

ರಾಜಕೀಯ ಅಧಃಪತನ.. ನಿಮ್ಮ ಎಡವಟ್ಟು ಸರಿಪಡಿಸಲು ವರ್ಷಗಳೇ ಬೇಕು: Israeli ವಿಪಕ್ಷ ನಾಯಕ ಕಿಡಿ

ರೋಗಿಗಳು ಅಂದ್ರೆ ಹಣ ಮಾಡೋ ಯಂತ್ರಗಳು, ಅವಶ್ಯಕತೆ ಇಲ್ಲದಿದ್ರೂ ICU; ಮೊದಲ ದಿನವೇ ರಾಜಿನಾಮೆ ನೀಡಿ ಖಾಸಗಿ ಆಸ್ಪತ್ರೆ ಮಾಫಿಯಾ ಬಿಚ್ಚಿಟ್ಟ ವೈದ್ಯೆ!

SCROLL FOR NEXT