ಸಿಎಂ ಒಮರ್ ಅಬ್ದುಲ್ಲಾ 
ದೇಶ

'39 ದಿನಗಳ ಯುದ್ಧದಲ್ಲಿ ಅಮೆರಿಕ ಸಾಧಿಸಿದ್ದಾದರೂ ಏನು?' ಸಿಎಂ ಒಮರ್ ಅಬ್ದುಲ್ಲಾ ಪ್ರಶ್ನೆ

ಯುದ್ಧ ಪ್ರಾರಂಭವಾಗುವ ಮೊದಲೇ ಹಾರ್ಮುಜ್ ಮಾರ್ಗವು ಮುಕ್ತ ಮತ್ತು ಉಚಿತವಾಗಿ ಲಭ್ಯವಿತ್ತು. ಈಗ ಯುದ್ಧದಿಂದ ಉಂಟಾದ ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.

ಶ್ರೀನಗರ: ಅಮೆರಿಕ-ಇರಾನ್ ಯುದ್ದದಿಂದ ಡೊನಾಲ್ಟ್ ಟ್ರಂಪ್ ಸಾಧಿಸಿದ್ದು ಏನು ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕದನ ವಿರಾಮದ ಭಾಗವಾಗಿ ಮಹತ್ವದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲಾಗಿದೆ. ಯುದ್ಧ ಪ್ರಾರಂಭವಾಗುವ ಮೊದಲೇ ಹಾರ್ಮುಜ್ ಮಾರ್ಗವು ಮುಕ್ತ ಮತ್ತು ಉಚಿತವಾಗಿ ಲಭ್ಯವಿತ್ತು. ಈಗ ಯುದ್ಧದಿಂದ ಉಂಟಾದ ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.

ಕದನ ವಿರಾಮವು ಜಲಸಂಧಿಯನ್ನು ಮತ್ತೆ ತೆರೆಯಲು ಅನುವು ಮಾಡಿಕೊಟ್ಟಿದೆ, ಯುದ್ಧ ಪ್ರಾರಂಭವಾಗುವ ಮೊದಲು ಎಲ್ಲರಿಗೂ ಮುಕ್ತವಾಗಿ ಜಲಸಂಧಿ ತೆರೆದಿತ್ತು ಅಲ್ಲವೇ. ಈ 39 ದಿನಗಳ ಯುದ್ಧದಲ್ಲಿ ಅಮೆರಿಕಾ ನಿಖರವಾಗಿ ಏನು ಸಾಧಿಸಿತು? ಇದೊಂದು ಅನ್ಯಾಯದ ಯುದ್ಧ ಎಂದು ಒಮರ್ ಅಬ್ದುಲ್ಲಾ ಪೋಸ್ಟ್ ಮಾಡಿದ್ದಾರೆ.

ಪಶ್ಚಿಮ ಏಷ್ಯಾವನ್ನು ನಾಶ ಮಾಡಿ, ಜಾಗತಿಕ ಇಂಧನ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲಗೊಳಿಸಿದ ನಂತರ ಇರಾನ್, ಅಮೆರಿಕ ಮತ್ತು ಇಸ್ರೇಲ್ ಬುಧವಾರ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜಕೀಯ ಅಧಃಪತನ.. ನಿಮ್ಮ ಎಡವಟ್ಟು ಸರಿಪಡಿಸಲು ವರ್ಷಗಳೇ ಬೇಕು: Israeli ವಿಪಕ್ಷ ನಾಯಕ ಕಿಡಿ

ಕೊನೆಗೂ ಕದನ ವಿರಾಮ ಒಪ್ಪಿದ Iran; 'ವಿಶ್ವ ಶಾಂತಿಗೆ ದೊಡ್ಡ ದಿನ'ಎಂದು Donald Trump ಶ್ಲಾಘನೆ, ಅಮೆರಿಕ ನೆರವು ಘೋಷಣೆ!

Mediator In Ceasefire Talks: ಪಾಕಿಸ್ತಾನದ ಮೇಲೆ ಅಮೆರಿಕ, ಇರಾನ್ ಅಷ್ಟೊಂದು ನಂಬಿಕೆ ಇಡಲು ಕಾರಣವೇನು ಗೊತ್ತಾ?

'ಇರಾನ್‌ನಿಂದ ಆದಷ್ಟು ಬೇಗನೆ ನಿರ್ಗಮಿಸಿ': ಕದನ ವಿರಾಮದ ಬೆನ್ನಲ್ಲೇ ಭಾರತೀಯ ನಾಗರಿಕರಿಗೆ ಕೇಂದ್ರದಿಂದ ಹೊಸ ಸಲಹೆ!

ಕದನ ವಿರಾಮ ಘೋಷಣೆ ಬೆನ್ನಲ್ಲೆ ಜಾಗತಿಕ ಆರ್ಥಿಕತೆಗೆ ದೊಡ್ಡ ಬಲ: ಪುಟಿದೆದ್ದ ಷೇರು ಮಾರುಕಟ್ಟೆ- ಗಗನಕ್ಕೇರಿದ ಚಿನ್ನ, ಬೆಳ್ಳಿ ಬೆಲೆ!

SCROLL FOR NEXT