ಅಪೂರ್ವ ಮುಖಿಜಾ 
ದೇಶ

ಧರ್ಮದ ವಿಚಾರವಾಗಿ ಆನ್ ಲೈನ್ ನಲ್ಲಿ ವಿವಾದಕ್ಕೆ ಗುರಿಯಾದ 'The Rebel Kid' ಅಪೂರ್ವ ಮುಖಿಜಾ! Video ನೋಡಿ...

ವೈರಲ್ ವಿಡಿಯೋದಲ್ಲಿ ಏನಿದೆ? ಅಂದಹಾಗೆ, ಮುಖಿಜಾ ಸಾಮಾಜಿಕ ಮಾಧ್ಯಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ Get Ready with me ಮತ್ತು Outfit of my dreams ಎಂಬ ವಿಡಿಯೋಗಳು ವಿವಾದಕ್ಕೆ ಕಾರಣವಾಗಿವೆ.

'The Rebel Kid'ಎಂದೇ ಜನಪ್ರಿಯರಾಗಿರುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ((Influencer)ಅಪೂರ್ವ ಮುಖಿಜಾ ಮತ್ತೆ ಆನ್‌ಲೈನ್ ನಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕೋಚೆಲ್ಲಾ ವ್ಯಾಲಿ ಸಂಗೀತ ಮತ್ತು ಕಲಾ ಉತ್ಸವಕ್ಕೆ ಸಿದ್ಧತೆ ಕುರಿತು ಹಂಚಿಕೊಳ್ಳಲಾದ ಇತ್ತೀಚಿನ ವೀಡಿಯೊವೊಂದು ಧರ್ಮದ ಚಿಹ್ನೆ ಮತ್ತು ಡಿಜಿಟಲ್ ವಿಷಯದ ಗಡಿಗಳ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ.

ವೈರಲ್ ವಿಡಿಯೋದಲ್ಲಿ ಏನಿದೆ? ಅಂದಹಾಗೆ, ಮುಖಿಜಾ ಸಾಮಾಜಿಕ ಮಾಧ್ಯಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ Get Ready with me ಮತ್ತು Outfit of my dreams ಎಂಬ ವಿಡಿಯೋಗಳು ವಿವಾದಕ್ಕೆ ಕಾರಣವಾಗಿವೆ.

ಈ ವಿಡಿಯೋಗಳಲ್ಲಿ ಕೋಚೆಲ್ಲಾ ಕಾರ್ಯಕ್ರಮಕ್ಕೆ ಮುಖಿಜಾ ಅವರ ಉಡುಗೆ ಮತ್ತಿತರ ಶೃಂಗಾರ ಸಾಧನಗಳು ಮತ್ತು ಪರಿವರ್ತನೆ ವಿಧಾನವನ್ನು ತೋರಿಸಿದ್ದಾರೆ. ಸ್ಟೈಲಿಂಗ್ ಪರಿವರ್ತನೆ ಅಂತಾ ಹೇಳುವಾಗ ಮುಂಗೈಯಲ್ಲಿ ಕಟ್ಟಲಾದ ಕೆಂಪು ದಾರ (ಕಲಾವ) ಕತ್ತರಿಸುವುದು ಕಂಡುಬಂದಿದೆ. ಹಿಂದೂ ಆಚರಣೆಗಳಲ್ಲಿ ಇದಕ್ಕೆ ಪವಿತ್ರ ಸ್ಥಾನವಿದ್ದು, ವಿವಾದ ಹುಟ್ಟುಹಾಕಿದೆ.

ನನ್ನ ಆರ್ಚಕರು ಈ ದಾರವನ್ನು ಕತ್ತರಿಸಬೇಡಿ ಎಂದು ಹೇಳಿದ್ದಾರೆ. ಆದರೆ ನನ್ನ ಸೌಂದರ್ಯದ ಕೋಚೆಲ್ಲಾ ಚಿತ್ರಗಳ ನಡುವೆ ಏನಾದರೂ ಬರಲು ಸಾಧ್ಯವಾದರೆ, ಅದು ನಾನು ಮಾತ್ರ ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತ್ವರಿತಗತಿಯಲ್ಲಿ ಹರಡಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ವಿವಾದ ಹುಟ್ಟುಹಾಕಲು ಉದ್ದೇಶಪೂರ್ವಕವಾಗಿಯೇ ಇದನ್ನು ಮಾಡಲಾಗಿದೆ ಎಂದು ಕೆಲವರು ಹೇಳುತ್ತಿದ್ದರೆ ಮತ್ತೆ ಕೆಲವರು ಸೌಂದರ್ಯದ ವಿಷಯಕ್ಕಾಗಿ ಧಾರ್ಮಿಕ ಚಿಹ್ನೆಗಳನ್ನು ಸಾಂದರ್ಭಿಕವಾಗಿ ಪರಿಗಣಿಸಬಾರದು ಎಂದು ವಾದಿಸಿದ್ದಾರೆ.

ಸಂಗೀತ ಉತ್ಸವಕ್ಕಾಗಿ "ರೆಬೆಲ್ ಕಿಡ್ ಅಪೂರ್ವ ತನ್ನ ಕಲಾವ (ಕೆಂಪು ದಾರ) ಕತ್ತರಿಸುತ್ತಾರೆ. ಅವಳಂತಹ ಹುಡುಗಿಯರು ತಮಾಷೆಗಾಗಿ ಎಲ್ಲವನ್ನೂ ಮಾಡುತ್ತಾರೆ. ಆಕೆಯನ್ನು ತನ್ನ ತಾಯಿ ಎಂದು ಪರಿಗಣಿಸುವ ಅನೇಕ ನಿರುದ್ಯೋಗಿ ಹುಡುಗಿಯರು ಆಕೆ ಮಾಡುವ ಎಲ್ಲವನ್ನೂ copy ಮಾಡ್ತಾರೆ ಎಂದು ಮತ್ತೋರ್ವ ಬಳಕೆದಾರರೊಬ್ಬರು ಟೀಕಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆ: SSLC ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕಗಳನ್ನೇ ನೀಡಿ; ಹೈಕೋರ್ಟ್ ಆದೇಶ

ಬಗೆಹರಿಯದ ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಜೊತೆಗಿನ ಶಾಂತಿ ಮಾತುಕತೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಪ್ರಯಾಣ?

ದೆಹಲಿಯಲ್ಲಿ ಗ್ರೆನೇಡ್ ದಾಳಿಗೆ ಸಂಚು: ಇಬ್ಬರು ISI ಕಾರ್ಯಕರ್ತರ ಬಂಧನ

ಎಂಜಿಆರ್, ಶಿವಾಜಿ ಗಣೇಶನ್ ತೊಡೆ ಮೇಲೆ ಕೂತು ಬೆಳೆದವನು ನಾನು, ಆದರೂ....: ನಟ ವಿಜಯ್‌ಗೆ ತಿರುಗೇಟು ನೀಡಿದ ಕಮಲ್ ಹಾಸನ್!

ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವವರೆಗೂ ದಿಗ್ಬಂಧನ ತೆರವುಗೊಳಿಸಲ್ಲ: ಡೊನಾಲ್ಡ್ ಟ್ರಂಪ್

SCROLL FOR NEXT