ದೇಶ

ಅಮರಾವತಿ ಕಾಮಕಾಂಡ: 180 ಹುಡುಗಿಯರ ಜೊತೆ ಸೆಕ್ಸ್ ಪ್ರಕರಣ; ನಗರದ ರಸ್ತೆಗಳಲ್ಲಿ ಆರೋಪಿ ಅಯಾನ್ ಅಹ್ಮದ್ ಮೆರವಣಿಗೆ, Video!

ಮಹಾರಾಷ್ಟ್ರದ ಪರತ್ವಾಡದಲ್ಲಿ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯದ ಆಘಾತಕಾರಿ ವೀಡಿಯೊ ವೈರಲ್ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಅಯಾನ್ ಅಹ್ಮದ್ ನನ್ನು ಇಂದು ಅಚಲ್ಪುರದ ಸಮರಸ್ಪುರ ಪೊಲೀಸ್ ಠಾಣೆಗೆ ಕರೆತರಲಾಯಿತು.

ಮಹಾರಾಷ್ಟ್ರದ ಪರತ್ವಾಡದಲ್ಲಿ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯದ ಆಘಾತಕಾರಿ ವೀಡಿಯೊ ವೈರಲ್ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಅಯಾನ್ ಅಹ್ಮದ್ ನನ್ನು ಇಂದು ಅಚಲ್ಪುರದ ಸಮರಸ್ಪುರ ಪೊಲೀಸ್ ಠಾಣೆಗೆ ಕರೆತರಲಾಯಿತು. ನಂತರ ಅಯಾನ್ ಅಹ್ಮದ್ ತನ್ವೀರ್‌ನನ್ನು ನಗರದಾದ್ಯಂತ ರಸ್ತೆಗಳಲ್ಲಿ ಎಳೆದುಕೊಂಡು ಹೋಗಿ ಮೆರವಣಿಗೆ ಮಾಡಿದ್ದಾರೆ. ಜನರಿಗೆ ಆ ಆರೋಪಿ ಯಾರೆಂದು ಗೊತ್ತಾಗಬೇಕೆಂದು ಸಾರ್ವಜನಿಕರ ಮುಂದೆ ಪರೇಡ್ ಮಾಡಲಾಗಿದೆ.

ಅಚಲ್ಪುರದ ಸಮರಸ್ಪುರ ಪೊಲೀಸ್ ಠಾಣೆಯ ತಂಡವು ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದೆ. ಈ ಕೃತ್ಯದಲ್ಲಿ ಸಹಾಯ ಮಾಡಿದವರ ಕುರಿತು ಪತ್ತೆ ಮಾಡುತ್ತಿದೆ. ಏತನ್ಮಧ್ಯೆ, ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಯಾನ್ ಅಹ್ಮದ್ ಸೇರಿದಂತೆ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು ಏಪ್ರಿಲ್ 27, 2026 ರವರೆಗೆ ವಿಸ್ತರಿಸಿದೆ. ಆರೋಪಿಗಳ ಸಮ್ಮುಖದಲ್ಲಿ ಮೊಬೈಲ್‌ನಲ್ಲಿರುವ ಡೇಟಾವನ್ನು ಪರಿಶೀಲಿಸಲು ಮತ್ತು ಹಣಕಾಸಿನ ವಹಿವಾಟುಗಳನ್ನು ಪರಿಶೀಲಿಸಲು ಸರ್ಕಾರಿ ಪಕ್ಷವು ಪೊಲೀಸ್ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿತ್ತು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಎಂಟು ಜನರನ್ನು ಬಂಧಿಸಲಾಗಿದೆ. ಅವರಲ್ಲಿ, ಆರೋಪಿಗಳಾದ ಅಯಾನ್ ಅಹ್ಮದ್ ತನ್ವೀರ್ ಅಹ್ಮದ್, ಉಜೈರ್ ಖಾನ್ ಇಕ್ಬಾಲ್ ಖಾನ್, ಮೊಹಮ್ಮದ್ ಸಾದ್ ಮೊಹಮ್ಮದ್ ಸಬೀರ್, ತಬ್ರೇಜ್ ಖಾನ್ ತಸ್ಲೀಮ್ ಖಾನ್ ಅವರ ಪೊಲೀಸ್ ಕಸ್ಟಡಿಯನ್ನು ನ್ಯಾಯಾಲಯವು ವಿಸ್ತರಿಸಿದೆ.

ಮೊಬೈಲ್ ಫೋನ್‌ಗಳ ಪರಿಶೀಲನೆ

ಈ ಪ್ರಕರಣದಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ 5 ಮೊಬೈಲ್ ಫೋನ್‌ಗಳು ಹಾಗೂ 7 ಇತರ ಮೊಬೈಲ್ ಫೋನ್‌ಗಳು, 1 ಲ್ಯಾಪ್‌ಟಾಪ್, 1 ಟ್ಯಾಬ್ ಮತ್ತು 1 ಹಾರ್ಡ್ ಡಿಸ್ಕ್ ಅನ್ನು ತಕ್ಷಣದ ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ನಲ್ಲಿ 18 ವೀಡಿಯೊ ತುಣುಕುಗಳು ಮತ್ತು 8 ಬಲಿಪಶು ಹುಡುಗಿಯರ 39 ಫೋಟೋಗಳಿವೆ. ಈ ವೀಡಿಯೊ ತುಣುಕುಗಳನ್ನು ಇತರರಿಗೆ ಪ್ರಸಾರ ಮಾಡಿದ ಇತರ 7 ಆರೋಪಿಗಳನ್ನು ಸಹ ತನಿಖೆಯ ಸಮಯದಲ್ಲಿ ಬಂಧಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ 'ಟೆರರಿಸ್ಟ್': ಮಲ್ಲಿಕಾರ್ಜುನ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್; 24 ಗಂಟೆ ಗಡುವು!

ಹಲವು ಗೊಂದಲಗಳ ನಡುವೆ ನಾಳೆ SSLC ಫಲಿತಾಂಶ ಪ್ರಕಟ: ಕೋರ್ಟ್ ಆದೇಶದಂತೆ ಹಿಂದಿಗೆ ಅಂಕ

ತಲೆಗೆ ಬಡಿದ ಚೆಂಡು, ಕೆಳಗೆ ಬಿದ್ದ ಹೆಲ್ಮೆಟ್ ಒದ್ದು ಬ್ಯಾಟರ್ ಆಕ್ರೋಶ; ಪಂದ್ಯವೇ ರದ್ದು..; ಕಾರಣ ಅಪಾಯಕಾರಿ ಪಿಚ್! Video

ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಮೇಲೆ ಅತ್ಯಾಚಾರ; ಮಗುವಾಗಿರುವುದರಿಂದ ಮದ್ವೆಯಾಗುವುದೇ ಉತ್ತಮ: ಹೈಕೋರ್ಟ್

ರೆಟ್ರೋ ಲುಕ್, ಮಂಡ್ಯ ಸ್ಲ್ಯಾಂಗ್.. ಕೈಯಲ್ಲಿ ಲಾಂಗು, ಮೈ ತುಂಬ ನೆತ್ತರು..: ಕುತೂಹಲ ಕೆರಳಿಸಿದ KD ಚಿತ್ರದ ಟ್ರೈಲರ್!

SCROLL FOR NEXT