ರೋಹನ್ ಜಾಧವ್  
ದೇಶ

5,435 ಬ್ಯಾಂಕ್ ಖಾತೆಗಳು, ಹಾಂಗ್ ಕಾಂಗ್ ನಂಟು: ವಂಚನೆ ಕೇಸ್ ನಲ್ಲಿ 'Reel Star'ಬಂಧನ!

ಕಾನೂನು ಕ್ರಮವನ್ನು ತಪ್ಪಿಸುವ ನೆಪದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ 10.74 ಕೋಟಿ ರೂ.ಗಳನ್ನು ವರ್ಗಾಯಿಸುವಂತೆ ವಂಚಕರು ಹೇಳಿದ್ದರು. ತಾನು ವಂಚನೆಗೊಳಗಾಗಿರುವುದನ್ನು ಅರಿತ ಸಂತ್ರಸ್ತೆ ನಂತರ ಪೊಲೀಸರನ್ನು ಸಂಪರ್ಕಿಸಿದರು.

ನವದೆಹಲಿ: ಕೆಲ ತಿಂಗಳ ಹಿಂದೆ ವೃದ್ಧರೊಬ್ಬರಿಗೆ 10 ಕೋಟಿ ರೂ.ಗೂ ಹೆಚ್ಚು ವಂಚಿಸಿ 'ಡಿಜಿಟಲ್ ಅರೆಸ್ಟ್' ಹೆಸರಿನಲ್ಲಿ ನಡೆದ ವಂಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪವಿರುವ ಸಾಮಾಜಿಕ ಜಾಲತಾಣದ ಪ್ರಭಾವಿ ವ್ಯಕ್ತಿಯೊಬ್ಬರನ್ನು (ಇನ್ಫ್ಲುಯೆನ್ಸರ್) ಪುಣೆಯಲ್ಲಿ ಬಂಧಿಸಲಾಗಿದೆ. ರೋಹನ್ ಜಾಧವ್ ಎಂದು ಗುರುತಿಸಲಾದ ಈ ವ್ಯಕ್ತಿಯ ತಮ್ಮ ಎಲ್ಲಾ ಬ್ಯಾಂಕ್ ಖಾತೆಗಳು ಮತ್ತು ಆರ್ಥಿಕ ಮೂಲಗಳನ್ನು ಪೊಲೀಸರು ನಿರ್ಬಂಧಿಸಿದ ನಂತರ ಇವರು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಈ ವರ್ಷದ ಜನವರಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವಂಚಕರ ಗುಂಪೊಂದು ಕೇಂದ್ರೀಯ ತನಿಖಾ ದಳದ (CBI) ಅಧಿಕಾರಿಗಳಂತೆ ನಟಿಸಿ ಆ ವೃದ್ಧರನ್ನು ಸಂಪರ್ಕಿಸಿತ್ತು. ಅವರು ಆ ವ್ಯಕ್ತಿಯ ವಿರುದ್ಧ ಪ್ರಕರಣವೊಂದಿದೆ ಎಂದು ಹೇಳಿ 'ಡಿಜಿಟಲ್ ಅರೆಸ್ಟ್' ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಕಾನೂನು ಕ್ರಮವನ್ನು ತಪ್ಪಿಸುವ ನೆಪದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ 10.74 ಕೋಟಿ ರೂ.ಗಳನ್ನು ವರ್ಗಾಯಿಸುವಂತೆ ವಂಚಕರು ಹೇಳಿದ್ದರು. ತಾನು ವಂಚನೆಗೊಳಗಾಗಿರುವುದನ್ನು ಅರಿತ ಸಂತ್ರಸ್ತೆ ನಂತರ ಪೊಲೀಸರನ್ನು ಸಂಪರ್ಕಿಸಿದರು.

ಆರೋಪಿಗಳಲ್ಲಿ ಒಬ್ಬರು ಎಟಿಎಂನಿಂದ ಹಣವನ್ನು ಹಿಂಪಡೆದ ನಂತರ ಪುಣೆ ಪೊಲೀಸರು ಅವರನ್ನು ಪತ್ತೆಹಚ್ಚಿದ್ದಾರೆ. ತರುವಾಯ, ಹರ್ಷದ್ ಸುಭಾಷ್ ಧಂತೋಲೆ, ಸಮರ್ಥ್ ಸುರೇಶ್ ದೇಶಮುಖ್ ಮತ್ತು ಅಮರ್ ಶಿವಾಜಿ ಅತ್ತಾರ್ಗಿ ಎಂಬ ಮೂವರನ್ನು ಬಂಧಿಸಲಾಯಿತು.

ತನಿಖೆ ವೇಳೆ ಧಂತೋಲೆ ತಾನು ಹಿಂಪಡೆದ ಹಣವನ್ನು ಜಾಧವ್‌ಗೆ (ಆಗ ತಲೆಮರೆಸಿಕೊಂಡಿದ್ದ) ನೀಡಿದ್ದಾಗಿ ಬಹಿರಂಗಪಡಿಸಿದ್ದಾನೆ. ಮೂಲತಃ ಛತ್ರಪತಿ ಸಂಭಾಜಿನಗರದವರಾದ ಜಾಧವ್, ವಂಚನೆಯ ಮೂಲಕ ಪಡೆದ 10.74 ಕೋಟಿ ರೂ. ಮೊತ್ತವನ್ನು ಒಟ್ಟು 5,436 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು. ಅವರು ಟೆಲಿಗ್ರಾಮ್ ಆ್ಯಪ್ ಮೂಲಕ ಹಾಂಗ್ ಕಾಂಗ್‌ನಲ್ಲಿರುವ ವ್ಯಕ್ತಿಗಳ ಸಂಪರ್ಕದಲ್ಲಿದ್ದರು ಮತ್ತು ಅವರೊಂದಿಗೆ ಆಗಾಗ್ಗೆ ವಿಡಿಯೋ ಕರೆಗಳಲ್ಲಿ ಮಾತನಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಜಾಧವ್ ಡಿಜಿಟಲ್ ಕ್ರಿಪ್ಟೋಕರೆನ್ಸಿಯನ್ನು ಬಳಸಿಕೊಂಡು ಹಾಂಗ್ ಕಾಂಗ್‌ನಲ್ಲಿರುವ ತಮ್ಮ ಮೇಲ್ವಿಚಾರಕರೊಂದಿಗೆ ಆರ್ಥಿಕ ವಹಿವಾಟು ನಡೆಸುತ್ತಿದ್ದರು ಮತ್ತು ಭಾರತದಿಂದ ವಿದೇಶಿ ಕರೆನ್ಸಿಗೆ ಹಣವನ್ನು ವರ್ಗಾಯಿಸಿದ್ದಕ್ಕಾಗಿ ಭಾರಿ ಕಮಿಷನ್ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ಫ್ಲುಯೆನ್ಸರ್ ಆಗಿದ್ದ ಜಾಧವ್, ಸೆಲೆಬ್ರಿಟಿ ನಿರ್ವಹಣಾ (ಸೆಲೆಬ್ರಿಟಿ ಮ್ಯಾನೇಜ್‌ಮೆಂಟ್) ಕೆಲಸವನ್ನೂ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾಧವ್ ವಿರುದ್ಧ ಒಂದು ಪುಣೆಯಲ್ಲಿ, ಇನ್ನೊಂದು ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಹಾರಾಷ್ಟ್ರ: ಶಿರೋಮಣಿ ಅಕಾಲಿದಳ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಮೇಲೆ ದಾಳಿ, ಕೈಗೆ ಗಾಯ; ಆರೋಪಿ ಬಂಧನ!

'ತಮ್ಮ ಮುಂದೆ ಸಂಸತ್ತು ಏನೇನೂ ಅಲ್ಲ, ತಾವೇ ಎಲ್ಲ ಎಂದು ಭಾವಿಸಿದ್ದಾರೆ, ಆದರೆ...': ಮೋದಿ, ಅಮಿತ್ ಶಾ ವಿರುದ್ಧ ಖರ್ಗೆ ವಾಗ್ದಾಳಿ

'ನಾನು ಹಫೀಜ್ ಸಯೀದ್‌ನ ಗುಲಾಮ'; ಪಾಕಿಸ್ತಾನದ ಕಡೆಗೆ ನೋಡಿದರೆ ಸಾಕು ನಿಮ್ಮ ದೇಶ ನಾಶ: ಭಾರತಕ್ಕೆ ಬೆದರಿಕೆಯೊಡ್ಡಿದ ಪಾಕ್ ಮಾಜಿ ಸಚಿವ!

ಆನ್‌ಲೈನ್ ಗೇಮಿಂಗ್‌ನಲ್ಲಿ ಭಾರೀ ನಷ್ಟ: ಮನನೊಂದು ವಿಷ ಸೇವಸಿದ ಮೂವರು ಸ್ನೇಹಿತರು; ಇಬ್ಬರು ಸಾವು!

ವಿಪಕ್ಷಗಳ ಗದ್ದಲದಲ್ಲೇ ಅಧಿವೇಶನಕ್ಕೆ ತೆರೆ: ಲೋಕಸಭೆ ಶೇ 19, ರಾಜ್ಯಸಭೆ ಶೇ 39ರಷ್ಟು ಕಲಾಪ ಫಲಪ್ರದ: ಕಿರಣ್ ರಿಜಿಜು ಮಾಹಿತಿ