ಮಲ್ಲಿಕಾರ್ಜುನ ಖರ್ಗೆ 
ದೇಶ

'ತಮ್ಮ ಮುಂದೆ ಸಂಸತ್ತು ಏನೇನೂ ಅಲ್ಲ, ತಾವೇ ಎಲ್ಲ ಎಂದು ಭಾವಿಸಿದ್ದಾರೆ, ಆದರೆ...': ಮೋದಿ, ಅಮಿತ್ ಶಾ ವಿರುದ್ಧ ಖರ್ಗೆ ವಾಗ್ದಾಳಿ

"ಅವರು ಸಂಸತ್ತಿಗೆ ಬಂದರೂ ಸದನಕ್ಕೆ ಬರಲು ಸಿದ್ಧರಿಲ್ಲ. ನೀವು ನಿಮ್ಮ ಕೋಣೆಯಲ್ಲಿ ಕುಳಿತುಕೊಳ್ಳಲು ಇಲ್ಲಿಗೆ ಬರುತ್ತೀರಾ? ಸದನಕ್ಕೆ ಬಂದು ನಮ್ಮ ಮಾತು ಕೇಳು" ಎಂದು ಖರ್ಗೆ ಆಗ್ರಹಿಸಿದರು.

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಗುರುವಾರ ತೆರೆ ಬಿದ್ದಿದ್ದು, ಯಾವುದೇ ಚರ್ಚೆಯಾಗದಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನಕ್ಕೆ ಬಂದು ಪ್ರತಿಪಕ್ಷಗಳ ಮಾತನ್ನು ಕೇಳಲು ಸಿದ್ಧರಿಲ್ಲ ಎಂದು ಆರೋಪಿಸಿದರು.

ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿಗೆ ಬಂದರೂ ಕಲಾಪಗಳಿಂದ ದೂರ ಉಳಿಯುತ್ತಾರೆ. ಅದರ ಬದಲು ಸಂಸತ್ ಸದಸ್ಯರ ಕಳವಳವನ್ನು ಆಲಿಸಬೇಕು ಎಂದು ಹೇಳಿದರು.

"ಅವರು ಸಂಸತ್ತಿಗೆ ಬಂದರೂ ಸದನಕ್ಕೆ ಬರಲು ಸಿದ್ಧರಿಲ್ಲ. ನೀವು ನಿಮ್ಮ ಕೋಣೆಯಲ್ಲಿ ಕುಳಿತುಕೊಳ್ಳಲು ಇಲ್ಲಿಗೆ ಬರುತ್ತೀರಾ? ಸದನಕ್ಕೆ ಬಂದು ನಮ್ಮ ಮಾತು ಕೇಳು" ಎಂದು ಖರ್ಗೆ ಆಗ್ರಹಿಸಿದರು.

ಸರ್ಕಾರವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಮತ್ತು ಸಂಸತ್ ಸದಸ್ಯರನ್ನು ನೈತಿಕವಾಗಿ ಕುಗ್ಗಿಸಲು ಪ್ರಯತ್ನಿಸುತ್ತಿದೆ ಎಂದು ಖರ್ಗೆ ಆರೋಪಿಸಿದರು.

"ಈ ಜನರು ಪ್ರಜಾಪ್ರಭುತ್ವವನ್ನು ನಾಶಮಾಡಲು ಬಯಸುತ್ತಾರೆ ಮತ್ತು ಅವರು ಸಂಸತ್ತಿನ ಸದಸ್ಯರನ್ನು ನೈತಿಕವಾಗಿ ಕುಗ್ಗಿಸಲು ಬಯಸುತ್ತಾರೆ. ಸಂಸತ್ತು ತಮ್ಮ ಮುಂದೆ ಏನೂ ಅಲ್ಲ, ಅವರೇ ಎಲ್ಲವೂ ಎಂದು ಭಾವಿಸಿದ್ದಾರೆ. ಆದರೆ ಜನ ನಿಮ್ಮ ಅಹಂಕಾರವನ್ನು ಮುರಿಯುತ್ತಾರೆ" ಎಂದು ಅವರು ಹೇಳಿದರು.

ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ 'ಶುದ್ಧೀಕರಣ' ಬಗ್ಗೆ ಮಾತನಾಡಿದ ಖರ್ಗೆ, ಘಟನೆಯನ್ನು ಖಂಡಿಸಿ, ಇಂತಹ ಕೃತ್ಯಗಳು ದೇಶವನ್ನು ವಿಭಜಿಸುತ್ತವೆ ಎಂದು ಹೇಳಿದರು.

"ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ದೇಶವನ್ನು ವಿಭಜಿಸುತ್ತದೆ. ಬಿಜೆಪಿಯ ತತ್ವಗಳಲ್ಲಿ ನಂಬಿಕೆ ಇಡುವ ಜನರು ಧರ್ಮದ ಹೆಸರಿನಲ್ಲಿ 'ಶುದ್ಧೀಕರಣ' ಮಾಡಿದರೆ, ಇವರು ದೇಶವನ್ನು ಹಾಳು ಮಾಡುವ ಜನ. ಆದ್ದರಿಂದ, ನಾನು ಈ ಮನೋಭಾವವನ್ನು ಖಂಡಿಸುತ್ತೇನೆ. ಅಲ್ಲಿ 'ಶುದ್ಧೀಕರಣ' ಮಾಡಿದ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಬೇಕು. ಅವರನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಖರ್ಗೆ ಆಗ್ರಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಹಾರಾಷ್ಟ್ರ: ಶಿರೋಮಣಿ ಅಕಾಲಿದಳ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಮೇಲೆ ದಾಳಿ; ಕೈಗೆ ಗಾಯ, ಆಸ್ಪತ್ರೆ ದಾಖಲು!

ವಿಪಕ್ಷಗಳ ಗದ್ದಲದಲ್ಲೇ ಅಧಿವೇಶನಕ್ಕೆ ತೆರೆ: ಲೋಕಸಭೆ ಶೇ 19, ರಾಜ್ಯಸಭೆ ಶೇ 39ರಷ್ಟು ಕಲಾಪ ಫಲಪ್ರದ: ಕಿರಣ್ ರಿಜಿಜು ಮಾಹಿತಿ

ಮುಂಗಾರು ಅಧಿವೇಶನ ಆರಂಭ: ವಿಧಾನಸಭೆ ಹೊಸ್ತಿಲಿಗೆ, CM ಪೀಠಕ್ಕೆ ಶಿರಬಾಗಿ ನಮಸ್ಕರಿಸಿದ ಡಿಕೆ ಶಿವಕುಮಾರ್

‘ನನ್ನನ್ನು ಅಸ್ಪೃಶ್ಯನಂತೆ ಕಂಡು ಶುದ್ಧೀಕರಣ ಮಾಡಿದರು’: ಬಿಜೆಪಿ ವಿರುದ್ಧ Mallikarjun Kharge ಕಿಡಿ, ನಡ್ಡಾ ಪ್ರತಿಕ್ರಿಯೆ

ರಾಯಚೂರು ಪೊಲೀಸರ ಭರ್ಜರಿ ಬೇಟೆ; ಉಗ್ರರೊಂದಿಗೆ ಸಂಪರ್ಕ, ಟೀಂ ಅಂಗಡಿ ಮಾಲೀಕ Sahil ಬಂಧನ, ಶಸ್ತ್ರಾಸ್ತ್ರ ಪೂರೈಕೆ ಚರ್ಚೆ ಮಾಡಿದ್ದ ಭೂಪ!