ತೃತೀಯಲಿಂಗಿಯಂತೆ ನಟಿಸಿ ಮನೆಗೆ ನುಗ್ಗಿದ ಪಾಪಿ 
ದೇಶ

ತೃತೀಯಲಿಂಗಿಯಂತೆ ನಟಿಸಿ ಮನೆಗೆ ನುಗ್ಗಿದ ಪಾಪಿ; ದೃಷ್ಟಿ ದೋಷ ನಿವಾರಣೆ ನೆಪದಲ್ಲಿ 25 ವರ್ಷದ ಏರ್ ಹೋಸ್ಟೆಸ್ ಮೇಲೆ ಅತ್ಯಾಚಾರ

ತೃತೀಯಲಿಂಗಿಯಂತೆ ನಟಿಸಿ ಮನೆಗೆ ನುಗ್ಗಿ ಏರ್‌ಲೈನ್ಸ್ ಗಗನಸಖಿ ಮೇಲೆ ಅತ್ಯಾಚಾರ ಎಸಗಿರುವ ಭೀಕರ ಘಟನೆ ಮುಂಬೈನ ಪವಾಯಿ ಪ್ರದೇಶದಲ್ಲಿ ನಡೆದಿದೆ. ಆ ಕುರಿತ ವರದಿ ಇಲ್ಲಿದೆ:

ಮುಂಬೈ (ಮಹಾರಾಷ್ಟ್ರ): ತೃತೀಯಲಿಂಗಿಯಂತೆ ನಟಿಸಿ ಮನೆಗೆ ನುಗ್ಗಿ ಏರ್‌ಲೈನ್ಸ್ ಗಗನಸಖಿ ಮೇಲೆ ಅತ್ಯಾಚಾರ ಎಸಗಿರುವ ಭೀಕರ ಘಟನೆ ಮುಂಬೈನ ಪವಾಯಿ ಪ್ರದೇಶದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಸೀರೆ ಧರಿಸಿ, ತಾನು ತೃತೀಯಲಿಂಗಿ ಎಂದು ನಟಿಸಿ ದೃಷ್ಟಿ ದೋಷ ನಿವಾರಿಸುವುದಾಗಿ ಹೇಳಿ 25 ವರ್ಷದ ವಿಮಾನ ಸಿಬ್ಬಂದಿ (ಏರ್ ಹೋಸ್ಟೆಸ್) ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ. ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಅನಿಲ್ ಶಿಂದೆ (28) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಆರೋಪಿ ಅನಿಲ್ ಶಿಂದೆ ಸೀರೆ ಧರಿಸಿ, ತೃತೀಯಲಿಂಗಿಯಂತೆ ವೇಷ ಬದಲಿಸಿಕೊಂಡು ಪವಾಯಿ ಪ್ರದೇಶದಲ್ಲಿದ್ದ ಏರ್ ಹೋಸ್ಟೆಸ್ ಯುವತಿಯ ಮನೆಗೆ ಬಂದಿದ್ದಾನೆ. ಈ ವೇಳೆ, ಯುವತಿಯ ಮುಖದಲ್ಲಿ ಮತ್ತು ಜೀವನದಲ್ಲಿ ದೊಡ್ಡ ದೃಷ್ಟಿ ದೋಷ ಇದೆ ಎಂದು ನಂಬಿಸಿದ್ದಾನೆ. ಜೊತೆಗೆ, ಆಸ್ಪತ್ರೆಯಲ್ಲಿದ್ದ ಸಂತ್ರಸ್ತೆಯ ಪತಿ ಮತ್ತು ಕುಟುಂಬದ ಮೇಲಿರುವ 'ದುಷ್ಟ ದೃಷ್ಟಿ' (ದೃಷ್ಟಿ ದೋಷ)ವನ್ನು ತಕ್ಷಣವೇ ನಿವಾರಿಸದಿದ್ದರೆ ಭವಿಷ್ಯದಲ್ಲಿ ಭಾರಿ ತೊಂದರೆಯಾಗುತ್ತದೆ ಎಂದು ಹೆದರಿಸಿದ್ದು, ದೃಷ್ಟಿ ತೆಗೆಯುವ ವಿಧಿವಿಧಾನಗಳನ್ನು ಮಾಡುವ ನೆಪದಲ್ಲಿ ಯುವತಿಯನ್ನು ನಂಬಿಸಿ ಮನೆಗೆ ನುಗ್ಗಿದ್ದಾನೆ. ತದನಂತರ ಯುವತಿಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಇದರೊಂದಿಗೆ, 2000 ರೂಪಯಿ ಪಡೆದು ಎಸ್ಕೇಪ್ ಆಗಿದ್ದಾನೆ.

ಆದರೆ, ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಸಂತ್ರಸ್ತೆ ತಕ್ಷಣವೇ ಪವಾಯಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ತಾಂತ್ರಿಕ ದಾಖಲೆಗಳು ಮತ್ತು ಸಿಕ್ಕ ಸುಳಿವುಗಳ ಆಧಾರದ ಮೇಲೆ ಆರೋಪಿ ಅನಿಲ್ ಶಿಂದೆಯನ್ನು ಪತ್ತೆಹಚ್ಚಿ ಕಂಬಿಹಿಂದೆ ತಳ್ಳಿದ್ದಾರೆ.

ಕುಟುಂಬದ ಕೆಲಸವೇ ಟ್ರಾನ್ಸ್ಜೆಂಡರ್ ನಟನೆ!

ತನಿಖೆಯ ವೇಳೆ, ಶಿಂಧೆ ಕುಟುಂಬವು ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಮತ್ತು ಭಿಕ್ಷುಕರಂತೆ ನಟಿಸುತ್ತಾ ಭಿಕ್ಷೆ ಬೇಡುವುದರಲ್ಲಿ ತೊಡಗಿತ್ತು ಎಂದು ಪೊಲೀಸರು ಕಂಡುಕೊಂಡರು. ಅಪರಾಧಗಳನ್ನು ಮಾಡುವಾಗ ಅವರು ಈ ಹಿಂದೆ ಇದೇ ರೀತಿಯ ವೇಷಗಳನ್ನು ಬಳಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Gen Z ಪ್ರತಿಭಟನೆಯಲ್ಲಿ ಪೆಲೆಟ್ ಗನ್‌ ಬಳಕೆ: ದೆಹಲಿ ಪೊಲೀಸ್ ಠಾಣೆ ಎದುರು ರಾಹುಲ್ ಗಾಂಧಿ ಧರಣಿ, FIR ದಾಖಲಿಸುವಂತೆ ಪಟ್ಟು..!

ಪದ್ಮಶ್ರೀ ಪ್ರಶಸ್ತಿ ವಿಜೇತ, ದಕ್ಷಿಣದ ಖ್ಯಾತ ಹಿರಿಯ ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ

"ನಾಗೇಂದ್ರ ಅಪರಾಧಿ": ವಿಧಾನಸೌಧದ ಎದುರು ಪ್ರತಿಭಟನೆ ವೇಳೆ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ಸಚಿವ ಶಿವಲಿಂಗೇಗೌಡ

Cockroach Janata Party ಕಾರ್ಯಕರ್ತರನ್ನು ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು; CJPಯ ಸ್ಕೂಲ್ ಟೀಕ್ ಕರೋ ಅಭಿಯಾನದ ವೇಳೆ ಆಗಿದ್ದಾದರೂ ಏನು?

ಶೀಘ್ರದಲ್ಲೇ ಕರ್ನಾಟಕದ 43 ಲಕ್ಷಕ್ಕೂ ಹೆಚ್ಚು ಮತದಾರರಿಗೆ ಚುನಾವಣಾ ಆಯೋಗದ ನೋಟಿಸ್! ಯಾರಿಗೆಲ್ಲ ಬರಲಿದೆ ನೋಟಿಸ್ ?