ಜುವಾಲ್ ಓರಾಮ್ 
ದೇಶ

'ಮೋದಿ ಸಂಪುಟದಿಂದ ನನ್ನನ್ನು ಹೊರಹಾಕಲು ಪಿತೂರಿ': ಸ್ವಪಕ್ಷ BJP ನಾಯಕರ ವಿರುದ್ಧವೇ ಕೇಂದ್ರ ಸಚಿವ ಗಂಭೀರ ಆರೋಪ

ಸಂಘಟಿತ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ರೂರ್ಕೆಲಾದಲ್ಲಿ ಅವರ ಆಪ್ತರಲ್ಲಿ ಒಬ್ಬರಾದ ರಾಕೇಶ್ ಪಾಸ್ವಾನ್ ಅವರನ್ನು ಬಂಧಿಸಿದ ನಂತರ ಕೇಂದ್ರ ಸಚಿವರು ಈ ಹೇಳಿಕೆ ನೀಡಿದ್ದು, ಹೆಚ್ಚು ಮಹತ್ವ ಪಡೆದುಕೊಂಡಿದೆ.

ಭುವನೇಶ್ವರ: ತಮ್ಮ ಪಕ್ಷದ ಕೆಲವು ಸಹೋದ್ಯೋಗಿಗಳು ತಮ್ಮ ಹೆಸರಿಗೆ ಕಳಂಕ ತರುವ ಮೂಲಕ ಸಂಪುಟದಿಂದ ತಮ್ಮನ್ನು ಹೊರಹಾಕಲು ಪಿತೂರಿ ನಡೆಸುತ್ತಿದ್ದಾರೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಜುವಾಲ್ ಓರಾಮ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ಸಂಘಟಿತ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ರೂರ್ಕೆಲಾದಲ್ಲಿ ಅವರ ಆಪ್ತರಲ್ಲಿ ಒಬ್ಬರಾದ ರಾಕೇಶ್ ಪಾಸ್ವಾನ್ ಅವರನ್ನು ಬಂಧಿಸಿದ ನಂತರ ಕೇಂದ್ರ ಸಚಿವರು ಈ ಹೇಳಿಕೆ ನೀಡಿದ್ದು, ಹೆಚ್ಚು ಮಹತ್ವ ಪಡೆದುಕೊಂಡಿದೆ. ಆದರೆ ಪಾಸ್ವಾನ್ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಸುಂದರ್‌ಗಢ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಓರಾಮ್, ತಮ್ಮ ಖ್ಯಾತಿಗೆ ಹಾನಿ ಮಾಡಲು ಯಾರಾದರೂ ಪ್ರಯತ್ನಿಸಿದರೆ, ‘ಅವರ ಕೈಗಳನ್ನು ಕತ್ತರಿಸಿ ಎಸೆಯುವ’ ಶಕ್ತಿ ತನಗಿದೆ ಎಂದು ಓರಾಮ್ ಅವರು ಕಠಿಣ ಎಚ್ಚರಿಕೆ ನೀಡಿದರು.

‘ಇತರ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಯಾದ ನಾಯಕರು’ ಇಂತಹ ಪ್ರಯತ್ನಗಳ ಹಿಂದೆ ಇದ್ದಾರೆ ಎಂದು ಅವರು ಆರೋಪಿಸಿದರು.

ಸರ್ಕಾರದ ಅತಿಥಿ ಗೃಹದಲ್ಲಿ ಅಪರಾಧಿಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಪಾಸ್ವಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಮ್ಮ ಯಾವುದೇ ಆಕ್ಷೇಪಣೆ ಇಲ್ಲ ಎಂದು ಓರಾಮ್ ಈ ಹಿಂದೆ ಹೇಳಿದ್ದರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇತ್ತೀಚೆಗೆ ಪೊಲೀಸರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಏಳು ಮಂದಿಯನ್ನು ಬಂಧಿಸಿದ್ದರು. ಈ ಏಳು ಮಂದಿಗೆ ಸರ್ಕ್ಯೂಟ್ ಹೌಸ್‌ ನಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ್ದ ಆರೋಪದಡಿ ಪ್ರಕಾಶ್ ಪಾಸ್ವಾನ್ ಅವರನ್ನು ರೂರ್ಕೆಲಾ ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಡಿಕೆಶಿ ಬಾಲ್ಯ ಸ್ನೇಹಿತ, ನಟ ರವಿಚಂದ್ರನ್‌ಗೆ MLC ಸ್ಥಾನ? ರಾಜಕೀಯ ಅಖಾಡಕ್ಕೆ ‘ಕ್ರೇಜಿ ಸ್ಟಾರ್’ ಎಂಟ್ರಿ ಸಾಧ್ಯತೆ

'ಕುಮಾರಸ್ವಾಮಿ ತಮ್ಮ ಹೆಂಡ್ತಿ ಫೋನ್ ಟ್ಯಾಪಿಂಗ್ ಮಾಡಿದ್ದರು, ನಿನ್ನ ಪತ್ನಿ ಮೇಲೆಯೇ ನಂಬಿಕೆ ಇಲ್ಲ, ಇನ್ನೂ...?': ಸಚಿವ ಬಾಲಕೃಷ್ಣ

'ಅಪ್ಪಾ.. ಪ್ಲೀಸ್ ಕರ್ಕೊಂಡು ಹೋಗು, ನನ್ನ ಸಾಯಿಸಿಬಿಡ್ತಾರೆ': ಹೆರಿಗೆಗೂ ಮುನ್ನ ಗೋಗರೆದ ಮಗಳು, ಕೊನೆಗೂ ಸಾವು, ವೈದ್ಯರ ಅಮಾನತು!

ಹೃದಯ ವಿದ್ರಾವಕ ಘಟನೆ: ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ; ಅನಾಥವಾದ ಕಂದಮ್ಮ!

ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ ಶುದ್ಧೀಕರಣ: ಅಟ್ರಾಸಿಟಿ ಕಾಯ್ದೆಯಡಿ FIR ದಾಖಲಿಸಲು ರಾಹುಲ್ ಗಾಂಧಿ ಒತ್ತಾಯ!