ನೇಪಾಳದ ಶೋಧ ತಂಡಗಳು ಜನಕ್‌ಪುರದಲ್ಲಿ ಮಹಿಳೆಯನ್ನು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಪತ್ತೆಹಚ್ಚಿದವು. 
ದೇಶ

ಛತ್ತೀಸ್‌ಗಢ: ತಿಂಗಳ ಹಿಂದೆ ಪರಾರಿಯಾಗಿದ್ದ ಪತ್ನಿಯನ್ನು ಪತ್ತೆಹಚ್ಚಲು ನೇಪಾಳ ಪ್ರವಾಹ ಸಹಾಯವಾಣಿ ಕೋರಿದ ರಾಯ್ಪುರ ಯುವಕ

ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು. ಮೋನಿಕಾ ಏಕಾಏಕಿ ಮನೆ, ಪತಿಯನ್ನು ಬಿಟ್ಟು ಹೋಗಿ, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಳು.

ರಾಯ್ಪುರ: ನೇಪಾಳದ ಭೀಕರ ಹಠಾತ್ ಪ್ರವಾಹದ ನಡುವೆಯೇ ವಿಚಿತ್ರ ಘಟನೆಯೊಂದು ನಡೆದಿದೆ. ಒಂದು ತಿಂಗಳ ಹಿಂದೆ ನೆರೆಯ ದೇಶಕ್ಕೆ ಬಿಟ್ಟು ಹೋಗಿದ್ದ ತನ್ನ ಪತ್ನಿಯನ್ನು ಪತ್ತೆಹಚ್ಚಲು ರಾಯ್ಪುರದ 25 ವರ್ಷದ ಯುವಕನೊಬ್ಬ ತುರ್ತು ವಿಪತ್ತು ಸಹಾಯವಾಣಿಯ ಮೊರೆ ಹೋಗಿದ್ದಾನೆ.

ರಾಯ್ಪುರದ ಡಿ.ಡಿ. ನಗರದ ನಿವಾಸಿಯಾಗಿರುವ ಯುವಕನಿಗೆ ಛತ್ತೀಸ್‌ಗಢದ ಧಮ್ತರಿ ಜಿಲ್ಲೆಯ 24 ವರ್ಷದ ಮೋನಿಕಾ ಯಾದವ್ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆರಂಭವಾದ ಸ್ನೇಹ ಪ್ರೇಮಕ್ಕೆ ತಿರುಗಿ, 2025ರ ಡಿಸೆಂಬರ್‌ನಲ್ಲಿ ಅಂತರ್ಜಾತಿ ವಿವಾಹವಾಗಿದ್ದರು.

ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತ್ತು. ಮೋನಿಕಾ ಏಕಾಏಕಿ ಮನೆ, ಪತಿಯನ್ನು ಬಿಟ್ಟು ಹೋಗಿ, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಳು.

ಪತ್ನಿ ಮೋನಿಕಾ ಅನಿರೀಕ್ಷಿತವಾಗಿ ಮನೆ ಬಿಟ್ಟು ಹೋದ ನಂತರ ಪತಿ ಕಳೆದ ಜುಲೈ 25ರಂದು ರಾಯ್ಪುರದ ಡಿ.ಡಿ. ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದನು. ಸ್ಥಳೀಯ ಸಂಪರ್ಕಗಳಿಂದ ಬಂದ ದೃಢೀಕರಿಸದ ಮಾಹಿತಿಯ ಆಧಾರದ ಮೇಲೆ, ಆಕೆ ಮತ್ತೊಬ್ಬ ವ್ಯಕ್ತಿಯೊಂದಿಗೆ ನೇಪಾಳಕ್ಕೆ ತೆರಳಿರಬಹುದು ಎಂದು ಪತಿ ಶಂಕಿಸಿದ್ದಾನೆ. ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಕೊನೆಯ ಪ್ರಯತ್ನವಾಗಿ ವಿಪತ್ತು ಸಹಾಯವಾಣಿಯನ್ನು ಸಂಪರ್ಕಿಸಿ ಗಡಿ ದಾಟಿ ಹುಡುಕಾಟಕ್ಕೆ ಮನವಿ ಮಾಡಿದ್ದಾನೆ.

ನೇಪಾಳದಲ್ಲಿ ಭೀಕರ ಪ್ರವಾಹ ಸಂಭವಿಸಿದ ಬಳಿಕ, ಗಡಿಯಾಚೆ ಸಿಲುಕಿರುವ ನಾಗರಿಕರಿಗೆ ನೆರವಾಗಲು ಕೇಂದ್ರ ಹಾಗೂ ಛತ್ತೀಸ್‌ಗಢ ರಾಜ್ಯ ಸರ್ಕಾರಗಳು ರಾಜ್ಯ ನಿಯಂತ್ರಣ ಕೊಠಡಿ ಸೇರಿದಂತೆ 24 ಗಂಟೆಗಳ ತುರ್ತು ಉಚಿತ ಸಹಾಯವಾಣಿ ಸಂಖ್ಯೆಗಳನ್ನು ಸ್ಥಾಪಿಸಿದ್ದವು.

ಈ ವಿಪತ್ತು ನಿರ್ವಹಣಾ ವ್ಯವಸ್ಥೆಯ ನೆರವು ಪಡೆದುಕೊಂಡ ರಾಯ್ಪುರ ಯುವಕ, ಪ್ರವಾಹದ ಸಂದರ್ಭದಲ್ಲಿ ನೇಪಾಳದಲ್ಲಿ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಸಹಾಯವಾಣಿಗೆ ಮಾಹಿತಿ ನೀಡಿದ್ದಾನೆ.

ಮಾಹಿತಿ ಸ್ವೀಕರಿಸಿದ ಬಳಿಕ ಛತ್ತೀಸ್‌ಗಢದ ವಿಪತ್ತು ನಿರ್ವಹಣಾ ಅಧಿಕಾರಿಗಳು ಈ ವಿಷಯವನ್ನು ಆಡಳಿತಾತ್ಮಕ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ನೇಪಾಳದ ಅಧಿಕಾರಿಗಳ ಗಮನಕ್ಕೆ ತಂದರು. ಬಳಿಕ ನೇಪಾಳದಲ್ಲಿನ ಶೋಧ ತಂಡಗಳು ಜನಕ್‌ಪುರದಲ್ಲಿ ಮಹಿಳೆಯನ್ನು ಪತ್ತೆಹಚ್ಚಿದ್ದು, ಆಕೆ ಸಂಪೂರ್ಣ ಸುರಕ್ಷಿತವಾಗಿರುವುದು ದೃಢಪಟ್ಟಿತು.

ನಂತರ ಡಿ.ಡಿ. ನಗರ ಪೊಲೀಸರು ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿಡಿಯೋ ಕಾಲ್ ಮಾಡಿದರು. ಈ ವೇಳೆ, ಆಕೆ ಪ್ರವಾಹದಲ್ಲಿ ಸಿಲುಕಿಕೊಂಡಿರಲಿಲ್ಲ ಎಂಬುದು ತಿಳಿದುಬಂದಿದೆ. ಬದಲಾಗಿ, ಮತ್ತೊಬ್ಬ ವ್ಯಕ್ತಿಯೊಂದಿಗೆ ವಾಸಿಸಲು ಸ್ವಯಂಪ್ರೇರಿತವಾಗಿ ಜನಕ್‌ಪುರಕ್ಕೆ ತೆರಳಿದ್ದಳು ಎಂಬುದು ಅಧಿಕಾರಿಗಳಿಗೆ ತಿಳಿದುಬಂದಿದೆ.

ಮಹಿಳೆ ಸುರಕ್ಷಿತವಾಗಿದ್ದು, ಪತ್ತೆಯಾಗಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಇದರೊಂದಿಗೆ ನಾಪತ್ತೆ ಪ್ರಕರಣ ಹಾಗೂ ಗಡಿ ದಾಟಿದ ಎಸ್‌ಒಎಸ್ ಮನವಿ ಎರಡಕ್ಕೂ ಅನಿರೀಕ್ಷಿತ ರೀತಿಯಲ್ಲಿ ಅಂತ್ಯ ದೊರೆತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೆನೆಜುವೆಲಾ ಜತೆ ‘ವಿಶ್ವದ ಅತಿದೊಡ್ಡ ತೈಲ ಒಪ್ಪಂದ’ ; 65 ಬಿಲಿಯನ್ ಬ್ಯಾರೆಲ್ ತೈಲ ನಿಕ್ಷೇಪದ ಮೇಲೆ ಅಮೆರಿಕದ ನಿಯಂತ್ರಣ

ನೇಪಾಳ ಪ್ರವಾಹ: ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ CEO ನಾಪತ್ತೆ

ಬರಗಾಲ ಇದ್ದರೂ ಅದ್ದೂರಿ ದಸರಾ ಏಕೆ? ವಿಧಾನಸೌಧ ಕೂಡ ನಮ್ಮಪ್ಪನ ಆಸ್ತಿ ಎಂದು ಮಾರಿ ಬಿಡ್ತಾರೆ: ಎಚ್.ಡಿ ಕುಮಾರಸ್ವಾಮಿ

'ಮಹಾರಾಜರ ಕಾಲದಲ್ಲಿ ಹೊಗಳು ಭಟ್ಟರು ಇರ್ತಿದ್ರು: ನಮ್ಮ ಸರ್ಕಾರಕ್ಕಾಗಿ ಕುಮಾರಣ್ಣನನ್ನು ಇಟ್ಟುಕೊಂಡಿದ್ದೇವೆ; ಹಗರಣ ಸಾಬೀತಾದ್ರೆ ರಾಜಕೀಯ ನಿವೃತ್ತಿ'

ನನ್ನ ಮಗನಿಗೆ ವಾಚ್ ಮನ್ ಕೆಲಸ: ತಂದೆ ಕಳೆದುಕೊಂಡ ಕುಟುಂಬಕ್ಕೆ ಇದೇನಾ ಸಿಗಬೇಕಾದ ನ್ಯಾಯ?; ಮೃತ ಚಂದ್ರಶೇಖರ್ ಪತ್ನಿ