ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿ ಸಾಂದರ್ಭಿಕ ಚಿತ್ರ 
ದೇಶ

'Mogambo Khush Hai': ಭಾರತ-ಯುಎಸ್ ವ್ಯಾಪಾರ ಒಪ್ಪಂದ ಕುರಿತು ಕಾಂಗ್ರೆಸ್ ವಾಗ್ದಾಳಿ!

ಇದು 1983ರ ಬಾಲಿವುಡ್ ಚಲನಚಿತ್ರ Mr. India ದಲ್ಲಿನ ಒಂದು ಪ್ರಸಿದ್ಧ ಡೈಲಾಗ್ ಆಗಿದ್ದು, ನಟ ಅಮರೀಶ್ ಪುರಿ ಅವರು ಖಳನಾಯಕ 'ಮೊಗಾಂಬೋ' ಪಾತ್ರದಲ್ಲಿ ಹೇಳುತ್ತಾರೆ.

ನವದೆಹಲಿ: ವ್ಯಾಪಾರ ಒಪ್ಪಂದಕ್ಕೆ ಅಮೆರಿಕ ಮತ್ತು ಭಾರತ ಒಪ್ಪಿಕೊಂಡಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಪ್ರಧಾನಿ ಮೋದಿ ಅಂತಿಮವಾಗಿ ಶರಣಾಗಿದ್ದಾರೆ. ಇದು ಎಲ್ಲಾ ಒಪ್ಪಂದಗಳಿಂತ ಪ್ರಮುಖವಾಗಿರುವುದಿಲ್ಲ ಎಂದಿದೆ.

ಡೊನಾಲ್ಡ್ ಟ್ರಂಪ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದನಂತರ ಭಾರತದ ಸರಕುಗಳ ಮೇಲಿನ ಸುಂಕವನ್ನು ಶೇ. 25 ರಿಂದ 18ಕ್ಕೆ ಇಳಿಸಲಿದೆ ಎಂದು ಹೇಳಿದ್ದರೆ "ಭಾರತದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಈಗ ಶೇ. 18 ರಷ್ಟು ಸುಂಕ ಕಡಿಮೆ ಮಾಡಲಾಗುವುದು ಎಂದು ಮೋದಿ ಹೇಳಿದ್ದಾರೆ. ಯುರೋಪಿಯನ್ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಂಡ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ವಾಷಿಂಗ್ಟನ್‌ನಲ್ಲಿ, ಮೊಗಾಂಬೋ ಖುಷ್ ಹೈ (Mogambo Khush Hua) ಎಂದಿದ್ದಾರೆ. ಇದು 1983ರ ಬಾಲಿವುಡ್ ಚಲನಚಿತ್ರ Mr. India ದಲ್ಲಿನ ಒಂದು ಪ್ರಸಿದ್ಧ ಡೈಲಾಗ್ ಆಗಿದ್ದು, ನಟ ಅಮರೀಶ್ ಪುರಿ ಅವರು ಖಳನಾಯಕ 'ಮೊಗಾಂಬೋ' ಪಾತ್ರದಲ್ಲಿ ಹೇಳುತ್ತಾರೆ. ಇದು ಭಾರತೀಯ ಸಿನಿಮಾದಲ್ಲಿನ ಅತ್ಯಂತ ಜನಪ್ರಿಯ ಮತ್ತು ಐಕಾನಿಕ್ ಡೈಲಾಗ್‌ಗಳಲ್ಲಿ ಒಂದಾಗಿದೆ.

'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಸ್ಥಗಿತವನ್ನು ವಾಷಿಂಗ್ಟನ್ ಡಿಸಿಯಿಂದ ಘೋಷಿಸಿದ್ದ ಟ್ರಂಪ್, ವಾಷಿಂಗ್ಟನ್‌ನಿಂದ ರಷ್ಯಾ ಮತ್ತು ವೆನೆಜುವೆಲಾದಿಂದ ಭಾರತದ ತೈಲ ಖರೀದಿ ಕುರಿತು ಪ್ರಕಟಣೆ ನೀಡಿದ್ದರು. ಈಗ ಅವರು ವಾಷಿಂಗ್ಟನ್‌ನಿಂದ ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ. ಅದರ ಸಂಪೂರ್ಣ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಟ್ರಂಪ್ ಅವರು ಪ್ರಧಾನಿ ಮೋದಿ ಮೇಲೆ ಸ್ವಲ್ಪ ಹತೋಟಿ ಹೊಂದಿರುವಂತೆ ತೋರುತ್ತಿದೆ. ಈಗ ಅವರೊಂದಿಗೆ ಕಾಣಿಸಿಕೊಂಡರೂ ಸಹ ಭ್ರಷ್ಟರಾಗಿದ್ದಾರೆ. ಸಾಮಾನ್ಯವಾದ ಅಪ್ಪುಗೆಯಲ್ಲಿ ತೊಡಗುವುದನ್ನು ಬಿಟ್ಟು ಅಂತಿಮವಾಗಿ ಶರಣಾಗಿದ್ದಾರೆ ಎಂದು ತೋರುತ್ತದೆ. ಖಂಡಿತವಾಗಿಯೂ ಇದು ಎಲ್ಲಾ ವ್ಯವಹಾರಗಳ ಪಿತಾಮಹನಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನಾ ಅಧ್ಯಕ್ಷ ಟ್ರಂಪ್ ಅವರು ಪ್ರಧಾನಿ ಮೋದಿಯೊಂದಿಗೆ ಮಾತನಾಡಿದ್ದಾರೆ ಎಂದು ನವದೆಹಲಿಯಲ್ಲಿನ ಯುಎಸ್ ರಾಯಭಾರಿ ಖಚಿತಪಡಿಸಿದ ನಂತರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತು.ಈಗ ಭಾರತವು ತನ್ನ ಸರ್ಕಾರದ ಕ್ರಮಗಳನ್ನು ಟ್ರಂಪ್ ಅಥವಾ ಅವರನ್ನು ನೇಮಿಸಿದವರಿಂದ ಮಾತ್ರ ತಿಳಿದುಕೊಳ್ಳುವುದು ವಾಡಿಕೆಯಂತೆ ತೋರುತ್ತಿದೆ ಎಂದು ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ತಗ್ಗಿದ ಅಪರಾಧ ಪ್ರಮಾಣ: ಗಡಿಗಳ ಮೂಲಕ ಅಕ್ರಮ ಬಾಂಗ್ಲಾದೇಶಿಗಳ ಪ್ರವೇಶ; ಗಡಿ ಕಾಪಾಡುವ ಜವಾಬ್ದಾರಿ ಯಾರದ್ದು?

ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ- ಪ್ರಿಯಾಂಕ್ ಖರ್ಗೆ

ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಂದ ಅಪ್ಪ!

ನಕಲಿ ಗಾಂಧಿಗಳಿಂದ 'ಗಾಂಧಿ' ಹೈಜಾಕ್ : ಮಹಾತ್ಮಾ ಗಾಂಧಿ ಹೆಸರಿನ 454 ಯೋಜನೆಗಳ ಪಟ್ಟಿ ಓದಿ ಅಶೋಕ್ ಕೌಂಟರ್ !

ಅನುದಾನ ಲಭ್ಯತೆ ಅನುಸಾರ ಯಗಚಿ ಎಡದಂಡೆ ನಾಲೆಗಳ ಭೂಸ್ವಾಧೀನ: ಡಿ.ಕೆ. ಶಿವಕುಮಾರ್

SCROLL FOR NEXT