ದೇಶ

‘ಪಿಯೂಷ್ ಗೋಯಲ್ ಅವರೇ, ಸುಳ್ಳು ಹೇಳಬೇಡಿ, ಈ ಒಪ್ಪಂದ ಸರೆಂಡರ್ ಅಷ್ಟೆ’: ರಾಹುಲ್–ವಾಣಿಜ್ಯ ಸಚಿವರ ನಡುವೆ ವಾಗ್ವಾದ-Video

ದೇಶದ ವಿವಿಧ ರೈತ ಸಂಘಟನೆಗಳ ನಾಯಕರೊಂದಿಗೆ ರಾಹುಲ್ ಗಾಂಧಿ ನಡೆಸಿದ ಸಭೆಯನ್ನು “ನಾಟಕೀಯ, ಕೃತಕ ಮತ್ತು ನಕಲಿ” ಎಂದು ಪಿಯೂಷ್ ಗೋಯಲ್ ಟೀಕಿಸಿದರು. ಕಾಂಗ್ರೆಸ್ ಪಕ್ಷದ ಕೆಲ ಕಾರ್ಯಕರ್ತರು ರೈತ ನಾಯಕರಂತೆ ನಟಿಸಿ, ತಪ್ಪು ಮಾಹಿತಿ ಹಬ್ಬಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಭಾರತ–ಅಮೆರಿಕಾ ವಾಣಿಜ್ಯ ಒಪ್ಪಂದದ ವಿಚಾರವಾಗಿ ತೀವ್ರ ವಾಗ್ವಾದ ನಡೆಸಿದ್ದಾರೆ. ರೈತರನ್ನು ತಪ್ಪು ದಾರಿಗೆಳೆಯಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಮೇಲೆ ಪಿಯೂಷ್ ಗೋಯಲ್ ಆರೋಪಿಸಿದ ನಂತರ ಈ ವಾಗ್ವಾದ ಉಂಟಾಯಿತು.

ದೇಶದ ವಿವಿಧ ರೈತ ಸಂಘಟನೆಗಳ ನಾಯಕರೊಂದಿಗೆ ರಾಹುಲ್ ಗಾಂಧಿ ನಡೆಸಿದ ಸಭೆಯನ್ನು “ನಾಟಕೀಯ, ಕೃತಕ ಮತ್ತು ನಕಲಿ” ಎಂದು ಪಿಯೂಷ್ ಗೋಯಲ್ ಟೀಕಿಸಿದರು. ಕಾಂಗ್ರೆಸ್ ಪಕ್ಷದ ಕೆಲ ಕಾರ್ಯಕರ್ತರು ರೈತ ನಾಯಕರಂತೆ ನಟಿಸಿ, ತಪ್ಪು ಮಾಹಿತಿ ಹಬ್ಬಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಎಕ್ಸ್‌ನಲ್ಲಿ ಹಂಚಿದ ವಿಡಿಯೋದಲ್ಲಿ ಮಾತನಾಡಿದ ಪಿಯೂಷ್ ಗೋಯಲ್, ಭಾರತ–ಅಮೆರಿಕಾ ಒಪ್ಪಂದದ ಕುರಿತು ರಾಹುಲ್ ಗಾಂಧಿ ಮಾಡಿರುವ ಆರೋಪಗಳು “ಸುಳ್ಳು ಮತ್ತು ಕೃತಕ” ಎಂದು ಹೇಳಿದರು. ಮೋದಿ ಸರ್ಕಾರ ರೈತರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಿದೆ. ಈ ಒಪ್ಪಂದದಿಂದ ರೈತರು, ಮೀನುಗಾರರು, ಯುವಕರು, ಎಂಎಸ್‌ಎಂಇಗಳು, ಕರಕುಶಲಕಾರರು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಪ್ರಯೋಜನವಾಗುತ್ತದೆ ಎಂದು ಹೇಳಿದರು.

ಸೋಯಾ ಮೀಲ್ಸ್ ಮತ್ತು ಜೋಳದಂತಹ ಉತ್ಪನ್ನಗಳಿಗೆ ಯಾವುದೇ ರಿಯಾಯಿತಿ ನೀಡಲಾಗಿಲ್ಲ, ಆದ್ದರಿಂದ ರೈತರಿಗೆ ಯಾವುದೇ ಹಾನಿಯಿಲ್ಲ ಎಂದು ಗೋಯಲ್ ಸ್ಪಷ್ಟಪಡಿಸಿದರು. ಸೇಬಿನ ಆಮದು ಕುರಿತು ಮಾತನಾಡಿದ ಅವರು, ಅಸೀಮಿತ ಆಮದಿಗೆ ಅನುಮತಿ ನೀಡಿಲ್ಲ; ಈಗಿರುವ ಮಟ್ಟಕ್ಕಿಂತ ಕಡಿಮೆ ಪ್ರಮಾಣದ ಕೋಟಾವನ್ನು ಮಾತ್ರ ನಿಗದಿಪಡಿಸಲಾಗಿದೆ ಎಂದರು. ಜೊತೆಗೆ, ಪ್ರತಿ ಕಿಲೋಗ್ರಾಂಗೆ 80 ರೂಪಾಯಿಗಳಿಂದ ಕನಿಷ್ಠ ಆಮದು ಬೆಲೆ 25 ರೂಪಾಯಿ ಸುಂಕ ವಿಧಿಸಲಾಗುತ್ತದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡು ಒಪ್ಪಂದದ ಬಗ್ಗೆ ತಮ್ಮ ಆತಂಕವನ್ನು ಪುನರುಚ್ಚರಿಸಿದರು. ಈ ಒಪ್ಪಂದವು ಹತ್ತಿ ರೈತರು ಮತ್ತು ವಸ್ತ್ರೋದ್ಯಮಕ್ಕೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.

ಪಿಯೂಷ್ ಗೋಯಲ್ ಅವರೇ, ಸುಳ್ಳು ಹೇಳಬೇಡಿ, ಎಂದು ಹೇಳಿದ ರಾಹುಲ್ ಗಾಂಧಿ, ಈ ಒಪ್ಪಂದವನ್ನು “ಸರೆಂಡರ್” ಎಂದು ಕರೆದರು, ಇದು ರೈತರು ಹಾಗೂ ವಸ್ತ್ರೋದ್ಯಮ ಕ್ಷೇತ್ರಕ್ಕೆ ದೊಡ್ಡ ಹೊಡೆತವಾಗಬಹುದು ಎಂದು ಆರೋಪಿಸಿದರು.

ನಿನ್ನೆ ರಾಹುಲ್ ಗಾಂಧಿ ದೇಶದ 17 ಪ್ರಮುಖ ರೈತ ಸಂಘಟನೆಗಳ ನಾಯಕರನ್ನು ಭೇಟಿ ಮಾಡಿ, ಭಾರತ–ಅಮೆರಿಕಾ ತಾತ್ಕಾಲಿಕ ವಾಣಿಜ್ಯ ಒಪ್ಪಂದಕ್ಕೆ ವಿರೋಧವಾಗಿ ದೇಶವ್ಯಾಪಿ ಚಳವಳಿಯ ಅಗತ್ಯತೆ ಕುರಿತು ಚರ್ಚಿಸಿದರು.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, “ಈ ಒಪ್ಪಂದವು ನಮ್ಮ ಅನ್ನದಾತರ ಜೀವನೋಪಾಯದ ಮೇಲೆ ನೇರ ದಾಳಿ. ಹೆಚ್ಚುತ್ತಿರುವ ವೆಚ್ಚ, ದುಬಾರಿ ಮತ್ತು ಕನಿಷ್ಠ ಬೆಂಬಲ ಬೆಲೆ (MSP) ಕುರಿತು ಅನಿಶ್ಚಿತತೆ ಎದುರಿಸುತ್ತಿರುವ ರೈತರು ಈಗ ಭಾರೀ ಸಹಾಯಧನ ಪಡೆದ ವಿದೇಶಿ ಉತ್ಪನ್ನಗಳ ಸ್ಪರ್ಧೆಯನ್ನು ಎದುರಿಸಬೇಕಾಗಿದೆ ಎಂದು ಹೇಳಿದರು.

ರೈತರ ಹಕ್ಕು, ಭದ್ರತೆ ಮತ್ತು ಗೌರವಕ್ಕಾಗಿ ಕಾಂಗ್ರೆಸ್ ಪಕ್ಷ ರೈತರೊಂದಿಗೆ ನಿಂತಿದೆ. ಇದು ಸಮಾನ ಸ್ಪರ್ಧೆಯಲ್ಲ. ರೈತರ ಭವಿಷ್ಯವನ್ನು ಅವರ ಅನುಮತಿಯಿಲ್ಲದೆ ತ್ಯಾಗ ಮಾಡುವ ಹಾಗಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪುಲ್ವಾಮಾ ದಾಳಿಗೆ 7 ವರ್ಷ: 40 ಯೋಧರ ಬಲಿದಾನ; ಆ 'ಕರಾಳ ದಿನ' ನಡೆದದ್ದೇನು? ಭಾರತ ಪ್ರತಿಕ್ರಿಯಿಸಿದ್ದು ಹೇಗೆ?

ಸಕಾರಾತ್ಮಕ ಟೀಕೆಗೆ ಮುಕ್ತ ಆದರೆ, ಸುಳ್ಳು ಸುದ್ದಿಗಳ ಅಪಪ್ರಚಾರ ಸಹಿಸಲ್ಲ: ಸಿಎಂ ಸಿದ್ದರಾಮಯ್ಯ

5 ಮಂದಿಗೆ ಅಂಗಾಂಗ ದಾನ ಮಾಡಿದ 10 ತಿಂಗಳ ಪುಟಾಣಿ: ಎಲ್ಲರ ಕಣ್ಣಂಚಲ್ಲಿ ನೀರು ತರಿಸಿ ಹೋದ ಕಂದಮ್ಮ!

ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಬಂಧನ: ಭೈರತಿ ಬಸವರಾಜ್ ಗೆ ಜಯದೇವ ಆಸ್ಪತ್ರೆಯಲ್ಲಿ ಹೃದ್ರೋಗ ಪರೀಕ್ಷೆ

113 ಸ್ಥಾನ ಗೆದ್ರೆ ಕುಮಾರಸ್ವಾಮಿ ಸಿಎಂ, ಇಲ್ಲದಿದ್ದರೇ ನಮ್ಮವರಿಗೆ ಮುಖ್ಯಮಂತ್ರಿ ಸ್ಥಾನ: ಬಿಜೆಪಿ

SCROLL FOR NEXT