ಸಾಂದರ್ಭಿಕ ಚಿತ್ರ 
ದೇಶ

ರೈತರಿಗೆ ಸರಳ, ಸುಲಭ ಮಾಹಿತಿ: ಶೀಘ್ರದಲ್ಲೇ ಮೊಬೈಲ್ ನಲ್ಲಿ AI ಆಧಾರಿತ ಬಹುಭಾಷಾ ಸಾಧನ

ಈ AI ಆಧಾರಿತ ಬಹುಭಾಷಾ ಸಾಧನವನ್ನು ರೈತರಿಗೆ ಅವರ ಸ್ವಂತ ಅರ್ಥವಾಗುವ ಭಾಷೆಯಲ್ಲಿ ಮಾಹಿತಿ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸೃಜನಾತ್ಮಕ ಮತ್ತು ಸಹಕಾರಾತ್ಮಕ ನೆರವಿಗಾಗಿ ಕೃತಕ ಬುದ್ಧಿಮತ್ತೆ (AI) ಮೇಲೆ ಹೆಚ್ಚುತ್ತಿರುವ ಅವಲಂಬನೆಯ ನಡುವಲ್ಲಿ, ಕೇಂದ್ರ ಸರ್ಕಾರ ಭಾರತ್-ವಿಸ್ತಾರ್ (Bharat-VISTAAR – Virtually Integrated System to Access Agricultural Resources) ನ್ನು ಪ್ರಾರಂಭಿಸಲು ಸಿದ್ಧವಾಗಿದೆ.

ಈ AI ಆಧಾರಿತ ಬಹುಭಾಷಾ ಸಾಧನವನ್ನು ರೈತರಿಗೆ ಅವರ ಸ್ವಂತ ಅರ್ಥವಾಗುವ ಭಾಷೆಯಲ್ಲಿ ಮಾಹಿತಿ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಮೊಬೈಲ್ ಫೋನ್ ಮೂಲಕ ಅಥವಾ ಸರಳ ದೂರವಾಣಿ ಕರೆ ಮೂಲಕವೂ ಇದನ್ನು ಬಳಸಬಹುದು. ಸುಧಾರಿತ AI ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುವ ಈ ವೇದಿಕೆ, ರೈತರ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಒದಗಿಸುತ್ತದೆ.

ಅಧಿಕೃತ ಮೂಲಗಳ ಪ್ರಕಾರ, ಭಾರತ್-ವಿಸ್ತಾರ್ ಕೃಷಿಗೆ ಸಂಬಂಧಿಸಿದ ಮಾರ್ಗಸೂಚಿಗಳು, ಸಲಹೆಗಳು ಮತ್ತು ಪ್ರಮುಖ ಮಾಹಿತಿಗಳನ್ನು ಒದಗಿಸಲಿದೆ. ಇದರಲ್ಲಿ ಹವಾಮಾನ ಮುನ್ಸೂಚನೆಗಳು ಮತ್ತು ಕೃಷಿ ಉತ್ಪನ್ನಗಳ ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಯ ಮಾಹಿತಿಯೂ ಸೇರಿರುತ್ತದೆ.

ಈ ವ್ಯವಸ್ಥೆಯನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಉದ್ಘಾಟಿಸಲಿದ್ದಾರೆ. ವೇದಿಕೆಯನ್ನು 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ರೂಪಿಸಲಾಗಿದೆ. Bharati  ಎಂಬ AI ಸಹಾಯಕ ಭಾರತ್-ವಿಸ್ತಾರ್‌ಗೆ ಒಳಗೊಂಡಿದ್ದು, ಇದಕ್ಕಾಗಿ ವಿಶೇಷ ಸಹಾಯವಾಣಿ ಸಂಖ್ಯೆಯನ್ನೂ ಪ್ರಾರಂಭಿಸಲಾಗಿದೆ.

ಈ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಹತ್ತು ಪ್ರಮುಖ ಫ್ಲ್ಯಾಗ್‌ಶಿಪ್ ಯೋಜನೆಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ. ಇದರಲ್ಲಿ ಪಿಎಂ-ಕಿಸಾನ್, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಸೇರಿದಂತೆ ಪ್ರಮುಖ ಯೋಜನೆಗಳ ವಿವರಗಳು ಸೇರಿವೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026–27ರ ಬಜೆಟ್ ಭಾಷಣದಲ್ಲಿ ಈ ಉಪಕ್ರಮವನ್ನು ಘೋಷಿಸಿದ್ದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರು ಹೊಸ AI ಉಪಕ್ರಮಗಳನ್ನು ಆರಂಭಿಸಲು ಯುಕೆ ಸಿದ್ಧತೆ

ದೆಹಲಿಯಲ್ಲಿ ಈ ವಾರ ನಡೆಯಲಿರುವ ಇಂಡಿಯಾ AI ಇಂಪ್ಯಾಕ್ಟ್ ಸಮಿಟ್ 2026 ಸಂದರ್ಭದಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳು AI ಕ್ರಾಂತಿಯ ಪ್ರಯೋಜನ ಪಡೆಯುವಂತೆ ಮಾಡುವ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿ ತಾನು ಇರುವಂತೆ ಮಾಡಲು ಇಂಗ್ಲೆಂಡ್ ಮೂರು ಹೊಸ ಅಂತಾರಾಷ್ಟ್ರೀಯ AI ಉಪಕ್ರಮಗಳನ್ನು ಪ್ರಾರಂಭಿಸಲು ಯೋಜಿಸಿದೆ.

ಈ ಯೋಜನೆಗಳಿಗೆ AI for Development (AI4D) ಕಾರ್ಯಕ್ರಮದ ಮೂಲಕ £58 ಮಿಲಿಯನ್ ಹಣಕಾಸು ಬೆಂಬಲ ಒದಗಿಸಲಾಗಿದೆ. ಈ ಕಾರ್ಯಕ್ರಮವನ್ನು ಮೊದಲಾಗಿ 2023ರಲ್ಲಿ ಯುಕೆಯ ಬ್ಲೆಚ್‌ಲಿ ಪಾರ್ಕ್‌ನಲ್ಲಿ ನಡೆದ AI Safety Summit ನಲ್ಲಿ ಆರಂಭಿಸಲಾಗಿತ್ತು. ಈ ಯೋಜನೆಗಳನ್ನು ಕ್ಯಾನಡಾ ಸಹಭಾಗಿತ್ವದಲ್ಲಿ ಜಾರಿಗೆ ತರಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಬಜೆಟ್: SC-ST ಗಳಿಗೆ ಅನುದಾನ ಹಂಚಿಕೆಯೇ CM ಸಿದ್ದರಾಮಯ್ಯ ಮುಂದಿರುವ ಬಹು ದೊಡ್ಡ ಸವಾಲು!

'ಮಹಿಳಾ ಮೀಸಲಾತಿ ಬಂದರೆ ನನ್ನ ಮಗಳನ್ನೇ ಚುನಾವಣೆಗೆ ನಿಲ್ಲಿಸುತ್ತೇನೆ, ಶಾಸಕರು ಫಾರಿನ್ ಟ್ರಿಪ್ ಹೋದ್ರೆ ಏನು ತಪ್ಪು'? : ಕೆ ಎನ್ ರಾಜಣ್ಣ

ಉಚಿತ ಪರ್ವತಾರೋಹಣ ತರಬೇತಿ; ಗ್ರಾಮೀಣ ಯುವಕರಿಗೆ ಗದಗದ ಹನುಮಂತರಾವ್ ಸ್ಫೂರ್ತಿ!

'ಭಾರತ ಬದಲಾಗಿಲ್ಲ: ಪುರುಷರಿಗೆ ಇನ್ನೂ 'Virgin Wife' ಬೇಕು; ಕನ್ಯತ್ವವು ಮಹತ್ವದ ಅಂಶವಾಗಿದೆಯೇ? ಮಹಿಳೆ ತನ್ನ ಮಾವನ ಪಾದ ಮುಟ್ಟಿ ನಮಸ್ಕರಿಸ್ತಾಳೆ!

ಓಪನ್ ಆಗಿ ಮಾಂಸ ಮಾರಾಟ ನಿಷೇಧಕ್ಕೆ ಮುಂದಾದ ಬಿಹಾರ!

SCROLL FOR NEXT