ಮಮತಾ ಬ್ಯಾನರ್ಜಿ- ಮುಖ್ಯ ಚುನಾವಣಾ ಆಯುಕ್ತ online desk
ದೇಶ

ಚುನಾವಣಾ ಆಯೋಗ ಬಾಂಗ್ಲಾದೇಶವನ್ನು ನೋಡಿ ಕಲಿಯಬೇಕು: ಮಮತಾ ಬ್ಯಾನರ್ಜಿ

"ಬಾಂಗ್ಲಾದೇಶ ಚುನಾವಣೆಗಳನ್ನು ಹೇಗೆ ಶಾಂತಿಯುತವಾಗಿ ನಡೆಸಿತು ಎಂಬುದನ್ನು ನೋಡಿ" ಎಂದು ಅವರು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ಚುನಾವಣೆ ನಡೆದ ಬಾಂಗ್ಲಾದೇಶದ ಉದಾಹರಣೆಯನ್ನು ಎತ್ತಿ ಹಿಡಿದು ಭಾರತದ ಚುನಾವಣಾ ಆಯೋಗವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಾರೆ.

"ಬಾಂಗ್ಲಾದೇಶ ಚುನಾವಣೆಗಳನ್ನು ಹೇಗೆ ಶಾಂತಿಯುತವಾಗಿ ನಡೆಸಿತು ಎಂಬುದನ್ನು ನೋಡಿ" ಎಂದು ಅವರು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.

ನಬನ್ನಾದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, "ಬಾಂಗ್ಲಾದೇಶದಲ್ಲಿ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಹಿಂಸಾಚಾರ ನಡೆಯುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅದು ಶಾಂತಿಯುತವಾಗಿ ನಡೆಯಿತು" ಎಂದು ಹೇಳಿದರು.

ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ, "ಬೆದರಿಕೆ ಸಂಸ್ಕೃತಿಯೊಂದಿಗೆ, ಚುನಾವಣಾ ಆಯೋಗ ಪ್ರಜಾಪ್ರಭುತ್ವವನ್ನು ಬುಲ್ಡೋಜರ್ ಮಾಡುತ್ತದೆ" ಎಂದು ಅವರು ಆರೋಪಿಸಿದ್ದಾರೆ.

ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ವಿರುದ್ಧ ಧ್ವನಿ ಎತ್ತಿದ್ದು, ಅಮಾನತುಗೊಂಡ ಏಳು ಅಧಿಕಾರಿಗಳ ಬಗ್ಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುತ್ತಾ, "ಅವರು ಕೆಲಸ ಮಾಡುತ್ತಾರೆ. ಅವರು ಚುನಾವಣಾ ಕೆಲಸದ ಜೊತೆಗೆ ಇತರ ಕೆಲಸಗಳನ್ನು ಮಾಡುತ್ತಾರೆ. ಅವರು ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಾರೆ. ಅವರನ್ನು ವಜಾ ಮಾಡಲಾಗುತ್ತಿಲ್ಲ" ಎಂದು ಹೇಳಿದ್ದಾರೆ. "ಇಆರ್‌ಒಗಳನ್ನು ಅಮಾನತುಗೊಳಿಸಲು ಕಾರಣವೇನು? ಅವರ ಅಪರಾಧವೇನು?" ಎಂದು ಚುನಾವಣಾ ಆಯೋಗಕ್ಕೆ ಬ್ಯಾನರ್ಜಿ ಪ್ರಶ್ನೆ ಹಾಕಿದ್ದಾರೆ.

"ಯಾರಾದರೂ ಏನಾದರೂ ತಪ್ಪು ಮಾಡಿದ್ದರೆ, ಅದನ್ನು ರಾಜ್ಯಕ್ಕೆ ವರದಿ ಮಾಡಬಹುದಿತ್ತು" ಎಂದು ಮುಖ್ಯಮಂತ್ರಿ ಹೇಳಿದರು. "ನಾವು ಆಯೋಗದ ಸೂಚನೆಗಳನ್ನು ನಯವಾಗಿ ಪಾಲಿಸಿದ್ದೇವೆ. ಆದರೆ ಶಿಕ್ಷೆ ವಿಧಿಸುವ ಮೊದಲು ಅವರಿಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಅವಕಾಶ ನೀಡಲಾಗಿಲ್ಲ" ಎಂದು ಅವರು ಹೇಳಿದರು.

ಭಾಗಿಯಾಗಿರುವ ಕೆಲವು ಅಧಿಕಾರಿಗಳನ್ನು ವೈಯಕ್ತಿಕವಾಗಿ ತಿಳಿದಿದ್ದೇನೆ ಅವರು ಹಗಲಿರುಳು ಶ್ರಮಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಅಸನ್ಸೋಲ್‌ನ ಬಿಜೆಪಿ ಶಾಸಕಿ ಅಗ್ನಿಮಿತ್ರ ಪಾಲ್, ಮಮತಾ ಬ್ಯಾನರ್ಜಿ ಅವರ ಹೇಳಿಕೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಬಂಗಾಳದ ಗಡಿಯಲ್ಲಿನ ಸ್ಥಾನಗಳಲ್ಲಿ ಜಮಾತ್ ಗೆಲುವು ಕಂಡಿರುವುದನ್ನು ನೋಡಿ ಮಮತಾ ಬ್ಯಾನರ್ಜಿ ಸಂತೋಷಪಟ್ಟಿದ್ದಾರೆ. ಜಮಾತ್‌ನ ಬಿ ತಂಡವನ್ನು ನಡೆಸುತ್ತಿರುವುದರಿಂದ ಅವರು ಬಾಂಗ್ಲಾದೇಶ ಚುನಾವಣಾ ಫಲಿತಾಂಶಗಳಿಂದ ಉತ್ಸುಕರಾಗಿದ್ದಾರೆ" ಎಂದು ಪಾಲ್ ಹೇಳಿದರು.

ಬಂಗಾಳ ಮುಖ್ಯಮಂತ್ರಿಯ "ತುಘಲಕಿ ಆಯೋಗ"ದ ಟೀಕೆಗೆ ಸಂಬಂಧಿಸಿದಂತೆ ಪಾಲ್ ಟೀಕಾ ಪ್ರಹಾರ ನಡೆಸಿದ್ದು. "ಅವರು ಚುನಾವಣಾ ಸಂಸ್ಥೆಯ ಬಗ್ಗೆ ಅತೃಪ್ತರಾಗಿದ್ದರೆ ನ್ಯಾಯಾಲಯಕ್ಕೆ ಹೋಗಬಹುದು. ಆದರೆ ಭಾರತ ಚುನಾವಣಾ ಆಯೋಗದ ವಿರುದ್ಧ ಅವರ 'ತುಘಲಕಿ' ಟೀಕೆಯನ್ನು ನಾವು ಬೆಂಬಲಿಸಲು ಸಾಧ್ಯವಿಲ್ಲ" ಎಂದು ಶಾಸಕರು ಹೇಳಿದರು.

"SIR ಎಂಬುದು ನಿಯಮಿತ ಮಧ್ಯಂತರಗಳಲ್ಲಿ ಸಂಪೂರ್ಣ ಪಾರದರ್ಶಕತೆಯೊಂದಿಗೆ ನಡೆಸಲಾಗುತ್ತಿರುವ ಪ್ರಕ್ರಿಯೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ತೃಣಮೂಲ ಪಕ್ಷವು ತನ್ನ ಸೋಲನ್ನು ಉಳಿಸಿಕೊಳ್ಳಲು ಒಳನುಸುಳುವಿಕೆಯ ಪ್ರತಿಪಾದಕವಾಗಿದೆ." ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾರಿಗೆ ನೌಕರರ ಒತ್ತಡಕ್ಕೆ ಮಣಿದ ಸರ್ಕಾರ; 26 ತಿಂಗಳ ಅರಿಯರ್ಸ್; ವೇತನ ಪರಿಷ್ಕರಣೆಗೆ ಒಪ್ಪಿಗೆ; ರದ್ದಾಗುತ್ತಾ ಮುಷ್ಕರ?

T20 World Cup 2026: ನೆದರ್ಲೆಂಡ್ ವಿರುದ್ಧ 17 ರನ್ ಗಳಿಂದ ಗೆದ್ದು, ಟಿ-20 ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಭಾರತ!

ಬಾಂಗ್ಲಾ ಪ್ರಧಾನಿಯಾದ ಬೆನ್ನಲ್ಲೇ ದೇಶಾದ್ಯಂತ ಅಪಹಾಸ್ಯಕ್ಕೆ ಗುರಿಯಾದ Tarique Rahman; ಆಯ್ಕೆ ಮಾಡಿದ ಜನರಿಂದಲೇ ಅವಮಾನ, ಆರೋಪ?

ಪಂಜಾಬ್: ಬಟಿಂಡಾದಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ, ಅಶ್ರುವಾಯು ಪ್ರಯೋಗ!

ಭಾರತದ AI ಸಾಮರ್ಥ್ಯವನ್ನು ಹೈಲೈಟ್ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚ್ಚೈ: ಯುಎಸ್-ಭಾರತ ಸಹಯೋಗದ ಪ್ರಾಜೆಕ್ಟ್ ಘೋಷಣೆ! Video

SCROLL FOR NEXT