ಶಶಿತರೂರ್ ಮತ್ತು ರಾಹುಲ್ ಗಾಂಧಿ 
ದೇಶ

'ದೊಡ್ಡ ಕಾರ್ಯಕ್ರಮ, ಸಣ್ಣಪುಟ್ಟ ಲೋಪಗಳು ಸಹಜ..': Congress ಟೀಕಿಸಿದ್ದ AI Summit ಶ್ಲಾಘಿಸಿದ ಸಂಸದ ಶಶಿತರೂರ್!

ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಶ್ಲಾಘಿಸಿದ್ದಾರೆ.

ನವದೆಹಲಿ: AI ಇಂಪ್ಯಾಕ್ಟ್ ಶೃಂಗಸಭೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರವನ್ನು ವ್ಯಾಪಕ ಟೀಕಿಸುತ್ತಿರುವಂತೆಯೇ ಅದೇ ಪಕ್ಷದ ಸಂಸದ ಶಶಿತರೂರ್, ಶೃಂಗಸಭೆಯನ್ನು ಬೆಂಬಲಿಸಿ ಮಾತನಾಡಿದ್ದಾರೆ.

ಹೌದು.. ಕಾಂಗ್ರೆಸ್ ನಾಯಕ ಶಶಿ ತರೂರ್ ಗುರುವಾರ AI ಇಂಪ್ಯಾಕ್ಟ್ ಶೃಂಗಸಭೆಯನ್ನು ಶ್ಲಾಘಿಸಿದ್ದು, ಮೊದಲ ಎರಡು ದಿನಗಳು "ಅತ್ಯಂತ ಚೆನ್ನಾಗಿ" ನಡೆದವು ಮತ್ತು "ಕೆಲವು ದೋಷಗಳು" ಯಾವುದೇ "ದೊಡ್ಡ ಕಾರ್ಯಕ್ರಮ"ದಲ್ಲಿ ಸಂಭವಿಸಬಹುದು ಎಂದು ಹೇಳಿದ್ದಾರೆ.

ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಶ್ಲಾಘಿಸಿದ್ದಾರೆ. ನಾರಾಯಣ ಗುರುಗಳ ಕುರಿತಾದ ತಮ್ಮ ಹೊಸ ಪುಸ್ತಕ ಬಿಡುಗಡೆ ಕಾರ್ಯಕ್ರಮದ ನಂತರ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ತರೂರ್, 'ಈ ಕಾರ್ಯಕ್ರಮ ಅತ್ಯಂತ ಚೆನ್ನಾಗಿ ನಡೆದಿದೆ. ಯಾವುದೇ ದೊಡ್ಡ ಕಾರ್ಯಕ್ರಮದಲ್ಲಿ ಕೆಲವು ಲೋಪಗಳು ಸಂಭವಿಸುತ್ತದೆ' ಎಂದು ಹೇಳಿದ್ದಾರೆ.

AI ಅಭಿವೃದ್ಧಿಯಲ್ಲಿ ಹೊಸದಾಗಿ ಏಕೀಕೃತವಾದ ವಿಶ್ವವನ್ನು ಕಾಣಬೇಕೆಂಬ ಬಲವಾದ ಸಂದೇಶದೊಂದಿಗೆ ಅಧ್ಯಕ್ಷರು, ಪ್ರಧಾನಮಂತ್ರಿಗಳು ಹಾಗೂ ವಿಶ್ವದ ನಾಯಕರು ಒಟ್ಟುಗೂಡಿರುವುದು ಅತ್ಯಂತ ಗಮನಾರ್ಹವಾಗಿದೆ.

ದೊಡ್ಡ ಕಾರ್ಯಕ್ರಮ, ಸಣ್ಣಪುಟ್ಟ ಲೋಪಗಳು ಸಹಜ

ಅವ್ಯವಸ್ಥೆಗಳ ಬಗ್ಗೆ ಪ್ರತಿಕ್ರಿಯಿಸಿದ ಶಶಿ ತರೂರ್, ದೊಡ್ಡ ಕಾರ್ಯಕ್ರಮಗಳಲ್ಲಿ ಇಂತಹ ಸಮಸ್ಯೆಗಳು ಸಂಭವಿಸುವುದು ಸಹಜ ಎಂದು ಹೇಳಿದ ಶಶಿತರೂರ್, 'ಶೃಂಗಸಭೆಯಲ್ಲಿ ಮೊದಲ ಎರಡು ದಿನಗಳು "ಅತ್ಯಂತ ಚೆನ್ನಾಗಿ" ನಡೆದವು. "ಕೆಲವು ದೋಷಗಳು" ಇದ್ದವು ಆದರೆ ದೊಡ್ಡ ಕಾರ್ಯಕ್ರಮಗಳಲ್ಲಿ ಅಂತಹ ಸಮಸ್ಯೆಗಳು ಸಂಭವಿಸಬಹುದು. ಭಾರತದಲ್ಲಿನ ಕಾಳಜಿಯು ಈ ಕ್ಷೇತ್ರದಲ್ಲಿ ಚಾಲನೆಗೆ ಸ್ಪಷ್ಟವಾಗಿ ಕಾರಣವಾಗಿದೆ ಎಂದು ಹೇಳಿದರು.

"ನನಗೆ ಶೃಂಗಸಭೆಗೆ ಹೋಗಲು ಅವಕಾಶ ಸಿಗದಿದ್ದರೂ, ನಾಳೆ ಅಲ್ಲಿ ಮಾತನಾಡುತ್ತಿದ್ದೇನೆ. ನನಗೆ ಅರ್ಥವಾದಂತೆ, ಈ ಮೊದಲ ಎರಡು ದಿನಗಳು ತುಂಬಾ ಚೆನ್ನಾಗಿ ಕಳೆದಿವೆ. ಕೆಲವು ದೋಷಗಳು, ಕೆಲವು ಸಾಂಸ್ಥಿಕ ವಿಷಯಗಳು ನಡೆದಿವೆ, ಇವುಗಳು ದೊಡ್ಡ ಕಾರ್ಯಕ್ರಮದಲ್ಲಿ ನಡೆಯುತ್ತವೆ.

ಆದರೆ ಸಾಮಾನ್ಯವಾಗಿ ಪ್ರಭಾವಶಾಲಿಯಾಗಿ ಕಂಡುಬಂದಿರುವುದು ಹಾಜರಾತಿ... ಹಲವಾರು ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಮತ್ತು ವಿಶ್ವ ನಾಯಕರು ಇಲ್ಲಿದ್ದಾರೆ, ಮತ್ತು ಅವರು AI ಅಭಿವೃದ್ಧಿಯಲ್ಲಿ ಹೊಸದಾಗಿ ಸಂಯೋಜಿತ ಜಗತ್ತನ್ನು ನೋಡಲು ಬಯಸುವ ಬಲವಾದ ಸಂದೇಶದೊಂದಿಗೆ ಬಂದಿದ್ದಾರೆ, ಅಲ್ಲಿ ಸಮಾಜದ ಮೇಲೆ ಪರಿಣಾಮ ಬೀರುತ್ತದೆ" ಎಂದು ತರೂರ್ ಹೇಳಿದರು.

ಶೃಂಗಸಭೆ ಟೀಕಿಸುತ್ತಿರುವ ಕಾಂಗ್ರೆಸ್

AI ಇಂಪ್ಯಾಕ್ಟ್ ಶೃಂಗಸಭೆಯ ಕುರಿತು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ವಾಗ್ದಾಳಿ ನಡೆಸಿ ಅದನ್ನು ಅಬ್ಬರದ ಪ್ರಚಾರ ಪ್ರದರ್ಶನ ಮತ್ತು ಚೀನಾದ ಉತ್ಪನ್ನಗಳನ್ನು ಅಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಇತರ ಹಿರಿಯ ನಾಯಕರು ಕೂಡ ಈ ಕಾರ್ಯಕ್ರಮವನ್ನು ಟೀಕಿಸಿದ್ದರು. ಕಾರ್ಯಕ್ರಮದ ಅಸಮರ್ಥ ನಿರ್ವಹಣೆ ದೇಶಕ್ಕೆ ಮುಜುಗರ ತಂದಿದೆ ಎಂದು ಹೇಳಿದ್ದರು.

ಯುದ್ಧಕ್ಕೆ ಮುಂದಾಗುತ್ತಿಲ್ಲ ಎಂದರೆ ದುರ್ಬಲರು ಎಂದಲ್ಲ

ಇದೇ ವೇಳೆ ಭಾರತದ ರಕ್ಷಣಾ ತಂತ್ರಗಾರಿಕೆ ಕುರಿತು ಮಾತನಾಡಿದ ಶಶಿತರೂರ್, 'ಯುದ್ಧಕ್ಕೆ ಮುಂದಾಗುತ್ತಿಲ್ಲ ಎಂದರೆ ದುರ್ಬಲರು ಎಂದಲ್ಲ. ಭಾರತಕ್ಕೆ ರಕ್ಷಣೆ ಮುಖ್ಯವಾದುದು ನಾವು ಯುದ್ಧಕ್ಕೆ ಹೋಗಲು ಬಯಸುವುದರಿಂದಲ್ಲ, ಆದರೆ ಇತರರು ನಾವು ತುಂಬಾ ದುರ್ಬಲರು ಎಂದು ಭಾವಿಸಬಾರದು ಎಂಬ ಕಾರಣದಿಂದಾಗಿ ಅವರು ಯುದ್ಧಕ್ಕೆ ಹೋಗಲು ಪ್ರಚೋದಿಸಲ್ಪಡಬಹುದು. ಇದು ಅಕ್ಷರಶಃ ರಕ್ಷಣಾತ್ಮಕ ನಡೆಯಾಗಿದೆ. ನಾವು ಅದಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ನಾನು ಸರ್ಕಾರವನ್ನು ಬೆಂಬಲಿಸುತ್ತೇನೆ" ಎಂದು ಶಶಿತರೂರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ನೇತೃತ್ವದ 'Pax Silica' ಕೂಟಕ್ಕೆ ಭಾರತ ಸೇರ್ಪಡೆ: ಚೀನಾದ ಆರ್ಥಿಕತೆಗೆ ಭಾರೀ ಹೊಡೆತ!

ಕಾಂಗ್ರೆಸ್ಸಿಗರಿಂದ ನಾಚಿಕೆಗೇಡಿನ ಕೃತ್ಯ: AI ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಅರೆಬೆತ್ತಲೆ ಪ್ರತಿಭಟನೆ, Video!

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಘಟನೆಗೆ ಸಿಎಂ ತೀವ್ರ ಖಂಡನೆ, ಶಾಂತಿ-ಸೌಹರ್ದ ಕಾಪಾಡುವಂತೆ ಜನತೆಗೆ ಮನವಿ

ಬಾಲ್ ಎಂದುಕೊಂಡು ಬಾಂಬ್ ನೊಂದಿಗೆ ಕ್ರಿಕೆಟ್, ಬ್ಯಾಟ್ ಗೆ ತಾಗುತ್ತಲೇ ಸ್ಫೋಟ: ಬಾಲಕನಿಗೆ ಗಾಯ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಮುಖ್ಯ ಆರೋಪಿ ಸೇರಿ 8 ಮಂದಿ ಬಂಧನ-Video

SCROLL FOR NEXT