Azam Khan ಎನ್‌ಕೌಂಟರ್‌ 
ದೇಶ

Azam Khan ಎನ್‌ಕೌಂಟರ್‌: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಮುಖ ಆರೋಪಿ Uttar Pradesh ಪೊಲೀಸರ ಗುಂಡೇಟಿಗೆ ಬಲಿ!

ತಾಲಿಬ್ ಅಲಿಯಾಸ್ ಅಜಂ ಖಾನ್ ಲಖಿಂಪುರ ಜಿಲ್ಲೆಯ ಫರ್ಧಾನ್ ಪೊಲೀಸ್ ಠಾಣೆ ಪ್ರದೇಶದ ಗೌರಿಯಾ ಗ್ರಾಮದ ನಿವಾಸಿ.

ಲಖಿಂಪುರ ಖೇರಿಯಲ್ಲಿ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣಗಳು ಸೇರಿದಂತೆ 17 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಲಖಿಂಪುರ ಖೇರಿ ಜಿಲ್ಲೆಯ ತಲೆಗೆ 1 ಲಕ್ಷ ಬಹುಮಾನ ಹೊಂದಿದ್ದ 26 ವರ್ಷದ ತಾಲಿಬ್ ಅಲಿಯಾಸ್ ಅಜಂ ಖಾನ್ ನನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ.

ಲಖಿಂಪುರ ಮತ್ತು ಸುಲ್ತಾನ್‌ಪುರ ಪೊಲೀಸರ ಜಂಟಿ ತಂಡ ಇಂದು ಎನ್‌ಕೌಂಟರ್ ನಡೆಸಿತು. ತಾಲಿಬ್ ಅಲಿಯಾಸ್ ಅಜಂ ಖಾನ್ ಲಖಿಂಪುರ ಜಿಲ್ಲೆಯ ಫರ್ಧಾನ್ ಪೊಲೀಸ್ ಠಾಣೆ ಪ್ರದೇಶದ ಗೌರಿಯಾ ಗ್ರಾಮದ ನಿವಾಸಿ. ಆತನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಪೊಲೀಸರು ಬಹಳ ದಿನಗಳಿಂದ ಆತನನ್ನು ಹುಡುಕುತ್ತಿದ್ದರು. ತಾಲಿಬ್‌ಗೆ ₹1 ಲಕ್ಷ ಬಹುಮಾನವನ್ನೂ ಘೋಷಿಸಲಾಗಿತ್ತು.

ತಾಲಿಬ್ ಸುಲ್ತಾನ್‌ಪುರದಲ್ಲಿದ್ದಾನೆ ಎಂಬ ಮಾಹಿತಿ ಲಖಿಂಪುರ ಪೊಲೀಸರಿಗೆ ಸಿಕ್ಕಿತು. ಅವರು ಆಗಮಿಸಿ ಸ್ಥಳೀಯ ಪೊಲೀಸರೊಂದಿಗೆ ಆತನನ್ನು ಹುಡುಕಲು ಪ್ರಾರಂಭಿಸಿದರು. ಆರೋಪಿ ಲಂಬುವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದಾನೆ ಎಂಬ ಮಾಹಿತಿ ಪಡೆದ ಲಖಿಂಪುರ ಮತ್ತು ಸುಲ್ತಾನಪುರ ಪೊಲೀಸರು ಲಂಬುವಾ ಪೊಲೀಸ್ ಠಾಣೆ ಪ್ರದೇಶದ ದಿಯಾರಾ ಸೇತುವೆ ಬಳಿ ಅವರನ್ನು ಬಂಧಿಸಲು ಮುಂದಾದರು.

ಪೊಲೀಸರನ್ನು ನೋಡಿ ಆತಂಕಗೊಂಡ ಅಪರಾಧಿ ತಾಲಿಬ್ ಅಲಿಯಾಸ್ ಅಜಮ್ ಖಾನ್ ಗುಂಡು ಹಾರಿಸಿದನು. ಇದಕ್ಕೆ ಪ್ರತೀಕಾರವಾಗಿ, ಪೊಲೀಸರು ಸಹ ಗುಂಡು ಹಾರಿಸಿದ್ದು ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ತಾಲಿಬ್ ನನ್ನು ಕೂಡಲೇ ಕೇಂದ್ರ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತು ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ