ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಭಾರತಕ್ಕಾಗಿ ಗುಂಡುಗಳಿಗೆ ಎದೆಯೊಡ್ಡಿ ನಿಂತಿತ್ತು. ಅಗತ್ಯಬಿದ್ದರೆ ಮತ್ತೆ ಅದನ್ನು ಮಾಡಲು ಸಿದ್ಧವಾಗಿದೆ ಎಂದು NC ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದರು. NC ಪಕ್ಷವೂ ಈ ಪ್ರದೇಶದಲ್ಲಿ ಕಲ್ಲು ತೂರಾಟ ಮತ್ತು ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ಬಯಸುತ್ತದೆ ಎಂಬ ಬಿಜೆಪಿಯ ಹೇಳಿಕೆಯನ್ನು ಫಾರೂಕ್ ಅಬ್ದುಲ್ಲಾ ತಿರಸ್ಕರಿಸಿದರು. ಜಮ್ಮು ಮತ್ತು ಕಾಶ್ಮೀರದ ಹೊಸ ವಿಭಜನೆಯ ಬೇಡಿಕೆಗಳನ್ನು ಮಾಜಿ ಮುಖ್ಯಮಂತ್ರಿ ತಳ್ಳಿಹಾಕಿದರು. ಅವುಗಳನ್ನು 'ಮೂರ್ಖ ಮತ್ತು ಅಜ್ಞಾನ' ಎಂದು ಕರೆದರು. 2019ರಲ್ಲಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಮಾಡಲಾದ ಲಡಾಖ್ ಅನ್ನು ಅಂತಿಮವಾಗಿ ಹಿಂದಿನ ರಾಜ್ಯಕ್ಕೆ ಮರುಸೇರ್ಪಡೆಗೊಳಿಸಲಾಗುವುದು ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುವರಿ ಜಿಲ್ಲೆಗಳನ್ನು ರಚಿಸುವ ಸಾಧ್ಯತೆಯನ್ನು ಸಹ ಅಬ್ದುಲ್ಲಾ ತಳ್ಳಿಹಾಕಿದರು. ಪಿರ್ ಪಂಜಾಲ್ ಮತ್ತು ಚೆನಾಬ್ ಕಣಿವೆಗಳಿಗೆ ಪ್ರತ್ಯೇಕ ವಿಭಾಗಗಳ ಬೇಡಿಕೆಯನ್ನು ಅವರು ಟೀಕಿಸಿದರು. ಇದನ್ನು ಡಿಕ್ಸನ್ ಯೋಜನೆಯ ಭಾಗವೆಂದು ಕರೆದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ಪರಿಹರಿಸುವ ಗುರಿಯೊಂದಿಗೆ ಈ ನಿರ್ಣಯವನ್ನು ಸೆಪ್ಟೆಂಬರ್ 1950ರಲ್ಲಿ ವಿಶ್ವಸಂಸ್ಥೆಯ ಪ್ರತಿನಿಧಿ ಮತ್ತು ಆಸ್ಟ್ರೇಲಿಯಾದ ಮಾಜಿ ಮುಖ್ಯ ನ್ಯಾಯಾಧೀಶ ಸರ್ ಓವನ್ ಡಿಕ್ಸನ್ ಪರಿಚಯಿಸಿದ್ದರು. ನಾವು ಅಶಾಂತಿಯನ್ನು ಪ್ರಚೋದಿಸುವವರಲ್ಲ ಎಂದು ಅವರಿಗೆ ಹೇಳಿ. ಭಾರತದೊಂದಿಗೆ ಇರಲು ನಾವು ಗುಂಡುಗಳನ್ನು ಎದುರಿಸಿದ್ದೇವೆ ಮತ್ತು ಅಗತ್ಯವಿದ್ದರೆ ನಾವು ಮತ್ತೆ ಗುಂಡುಗಳನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.
ನಾವು ಎಂದಿಗೂ ಲಡಾಖ್ ಅನ್ನು ಪ್ರತ್ಯೇಕಿಸಲು ಬಯಸಲಿಲ್ಲ. ಇದರಿಂದ ಲಡಾಖ್ಗೆ ಏನು ಪ್ರಯೋಜನವಾಯಿತು? ಲಡಾಖ್ನ ಜನರು ಸಹ ರಾಜ್ಯದೊಂದಿಗೆ ಮರುಸಂಘಟನೆ ಬಯಸುತ್ತಾರೆ ಎಂದು ಹೇಳುತ್ತಾರೆ. ಲಡಾಖಿಗೂ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಬೇಡ. ಇದೇನಿದು? ಈ ಜನರು ಮೂರ್ಖರು ಮತ್ತು ಅಜ್ಞಾನಿಗಳು. ಇದು ಜಮ್ಮು, ಕಾಶ್ಮೀರ ಮತ್ತು ಲಡಾಖ್ ರಾಜ್ಯ, ಮತ್ತು ಒಂದು ದಿನ ಲಡಾಖ್ ಮರಳುತ್ತದೆ. ಪಿರ್ ಪಂಜಾಲ್ ಮತ್ತು ಚೆನಾಬ್ ಕಣಿವೆಗಳಿಗೆ ವಿಭಾಗೀಯ ಸ್ಥಾನಮಾನ ಮತ್ತು ಹೆಚ್ಚಿನ ಜಿಲ್ಲೆಗಳ ರಚನೆಗಾಗಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಬೇಡಿಕೆಗೆ ಸಂಬಂಧಿಸಿದಂತೆ, ಇದು ಡಿಕ್ಸನ್ ಯೋಜನೆಯ ಭಾಗವಾಗಿದೆ ಎಂದು ಅಬ್ದುಲ್ಲಾ ಪುನರುಚ್ಚರಿಸಿದರು.
ಡಿಕ್ಸನ್ ಯೋಜನೆ ತುಂಬಾ ಹಳೆಯದಾಗಿದ್ದು, ಚೆನಾಬ್ ನದಿಯ ಉದ್ದಕ್ಕೂ ರಾಜ್ಯವನ್ನು ವಿಭಜಿಸುವ ಮೂಲಕ 'ಗ್ರೇಟರ್ ಕಾಶ್ಮೀರ'ವನ್ನು ರಚಿಸಲು ಪ್ರಸ್ತಾಪಿಸಿದೆ. ಆದರೆ ಪರ್ಮಾರ್ ಸಾಹಿಬ್ (ಹಿಮಾಚಲ ಪ್ರದೇಶದ ಮೊದಲ ಮುಖ್ಯಮಂತ್ರಿ ವೈ.ಎಸ್. ಪರ್ಮಾರ್) ಯಾವುದೇ ವಿಭಜನೆಯನ್ನು ವಿರೋಧಿಸಿದರು. ಅನೇಕ ಜನರು ರಾಜ್ಯವನ್ನು ಮುರಿಯಲು ಬಯಸುತ್ತಾರೆ. ಆದರೆ ಅವರು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದರು.