ಕದಿರಿಯಲ್ಲಿ ವೈಮಾನಿಕ ಸಮೀಕ್ಷೆ 
ದೇಶ

ಬರೊಬ್ಬರಿ 16 ಟನ್ ಚಿನ್ನ, ಮತ್ತೊಂದು KGF ಪತ್ತೆ?: ಈ ಬೃಹತ್ ನಿಕ್ಷೇಪ ಇರೋದೆಲ್ಲಿ? Video

ಕೆಜಿಎಫ್ ಮಾದರಿಯಲ್ಲಿ ಗಣಿಗಾರಿಕೆ ಇಲ್ಲಿ ಸಾಧ್ಯ ಎಂದು ಸಮೀಕ್ಷೆಗಳು ಸೂಚಿಸಿದ ಬೆನ್ನಲ್ಲೇ ಕದಿರಿಯಲ್ಲಿ ಸರ್ಕಾರ ವಾಯು ಸಮೀಕ್ಷೆಯಲ್ಲಿ ತೊಡಗಿದೆ.

ಅಮರಾವತಿ: ಕರ್ನಾಟಕದ ಕೋಲಾರ ಗೋಲ್ಡ್ ಫೀಲ್ಡ್ (KGF) ಪುನಾರಂಭಕ್ಕೆ ಕೇಂದ್ರ ಸರ್ಕಾರ ಮರು ಚಿಂತನೆ ನಡೆಸುತ್ತಿರುವ ಹೊತ್ತಿನಲ್ಲೇ ಇದೀಗ ದೇಶದಲ್ಲಿ ಮತ್ತೊಂದು ಕೆಜಿಎಫ್ ಪತ್ತೆಯಾಗಿದೆ.

ಹೌದು.. ಕರ್ನಾಟಕದ ಕೆಜಿಎಫ್ ಮಾದರಿಯಲ್ಲೇ ನೆರೆಯ ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಕೆಜಿಎಫ್ ಮಾದರಿಯಲ್ಲಿ ಗಣಿಗಾರಿಕೆ ಇಲ್ಲಿ ಸಾಧ್ಯ ಎಂದು ಸಮೀಕ್ಷೆಗಳು ಸೂಚಿಸಿದ ಬೆನ್ನಲ್ಲೇ ಕದಿರಿಯಲ್ಲಿ ಸರ್ಕಾರ ವಾಯು ಸಮೀಕ್ಷೆಯಲ್ಲಿ ತೊಡಗಿದೆ.

ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಬೃಹತ್ ಚಿನ್ನದ ನಿಕ್ಷೇಪಗಳು ಬಹಿರಂಗಗೊಂಡಿರುವುದರಿಂದ, ಹಿಂದಿನ ಅನಂತಪುರ ಜಿಲ್ಲೆಯ ಕದಿರಿ ಪ್ರದೇಶವು ಈಗ ದೇಶಾದ್ಯಂತ ಗಮನ ಸೆಳೆಯುತ್ತಿದೆ.

ಪ್ರಾಥಮಿಕ ಅಂದಾಜಿನ ಪ್ರಕಾರ, ಈ ಪ್ರದೇಶವು ಭಾರತೀಯ ಗಣಿಗಾರಿಕೆಯ ಇತಿಹಾಸದಲ್ಲಿ ಪ್ರಸಿದ್ಧ 'ಕೋಲಾರ ಗೋಲ್ಡ್ ಫೀಲ್ಡ್' (ಕೆಜಿಎಫ್) ಮಾದರಿಯಲ್ಲಿ ನಿಲ್ಲಲಿದೆ ಎಂಬ ಮಾತುಗಳು ಹರಿದಾಡುತ್ತಿದ್ದು, ಇದು ಸ್ಥಳೀಯರಲ್ಲಿ ಆಸಕ್ತಿ ಹೆಚ್ಚಾಗಿದೆ.

ಸುಧಾರಿತ ತಂತ್ರಜ್ಞಾನದೊಂದಿಗೆ ವೈಮಾನಿಕ ಸಮೀಕ್ಷೆ

ಕದಿರಿ ಪಟ್ಟಿಯ ಭೂಗತದಲ್ಲಿ ಅಡಗಿರುವ ಖನಿಜ ಸಂಪತ್ತನ್ನು ಗುರುತಿಸಲು ಅಂತಿಮ 'ವೈಮಾನಿಕ ವರ್ಣಪಟಲ' ದತ್ತಾಂಶ ಮತ್ತು ವಿವರವಾದ ಮ್ಯಾಪಿಂಗ್ ಪ್ರಕ್ರಿಯೆಯನ್ನು ಬಳಸಲಾಯಿತು. ಖನಿಜಗಳ ಆಳ, ಗಾತ್ರ ಮತ್ತು ವ್ಯಾಪ್ತಿಯನ್ನು ಅಂದಾಜು ಮಾಡಲು ಈ ಸಮೀಕ್ಷೆಯನ್ನು ನಡೆಸಲಾಯಿತು.

ಎಲ್ಲಿದೆ ಈ ನಿಕ್ಷೇಪ?

ಈ ಸಮೀಕ್ಷೆಯ ಫಲಿತಾಂಶಗಳು ಕದಿರಿ ಸುತ್ತಮುತ್ತಲಿನ ಹತ್ತು ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪಗಳು ಇವೆ ಎಂದು ಹೇಳಲಾಗಿದೆ. ಮೂಲಗಶ ಪ್ರಕಾರ ಕದಿರಿ ಬಳಿಯ ಜೌಕಲಾ ಪ್ರದೇಶದ ಸುತ್ತಮುತ್ತಲಿನ ಆರು ಪ್ರದೇಶಗಳಲ್ಲಿ ಸುಮಾರು 10 ರಿಂದ 16 ಟನ್ ಚಿನ್ನದ ನಿಕ್ಷೇಪಗಳಿವೆ ಎಂದು ಸಮೀಕ್ಷಾ ಸಂಸ್ಥೆ ಕಂಡುಹಿಡಿದಿದೆ ಎನ್ನಲಾಗಿದೆ.

4 ಟನ್ ಮಣ್ಣಿಗೆ 4 ಗ್ರಾಂ ಚಿನ್ನ

ಅದೇ ರೀತಿ, ರಾಮಗಿರಿ ಪ್ರದೇಶದಲ್ಲಿ ಸುಮಾರು ನಾಲ್ಕು ಟನ್ ಮತ್ತು ಬೊಕ್ಸಂಪಲ್ಲಿ ಪ್ರದೇಶದಲ್ಲಿ ಎರಡು ಟನ್ ಚಿನ್ನದ ನಿಕ್ಷೇಪಗಳಿವೆ ಎಂದು ಅಂದಾಜಿಸಲಾಗಿದೆ. ಈ ಪ್ರದೇಶದಲ್ಲಿ ಒಟ್ಟು ಸುಮಾರು 16 ಟನ್ ಚಿನ್ನದ ನಿಕ್ಷೇಪಗಳಿವೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತವೆ. ಈ ಚಿನ್ನದ ನಿಕ್ಷೇಪಗಳು ಸರಿಸುಮಾರು 97.4 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿಕೊಂಡಿವೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.

ಪ್ರತಿ 50 ಮೀಟರ್ ಆಳದಲ್ಲಿ ಚಿನ್ನದ ನಿಕ್ಷೇಪಗಳನ್ನು ಗುರುತಿಸಲಾಗಿದೆ. ಮಾತ್ರವಲ್ಲದೆ, ಒಂದು ಟನ್ ಮಣ್ಣಿನಲ್ಲಿ ಸರಾಸರಿ ನಾಲ್ಕು ಗ್ರಾಂ ಚಿನ್ನವಿದೆ ಎಂದು ನಿರ್ಧರಿಸಲಾಗಿದೆ. ಇದು ಗಣಿಗಾರಿಕೆಗೆ ಅನುಕೂಲಕರವಾಗಿದೆ ಮತ್ತು ಆರ್ಥಿಕವಾಗಿ ಲಾಭದಾಯಕ ಯೋಜನೆಯಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಜ್ಞರು ನಂಬಿದ್ದಾರೆ.

ರಸ್ತೆಗಳು, ವಿದ್ಯುತ್ ಮತ್ತು ನೀರಿನ ಸೌಲಭ್ಯಗಳ ಸುಧಾರಣೆಯ ಜೊತೆಗೆ, ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಿಸುವ ಸಾಧ್ಯತೆಯಿದೆ. ಸ್ಥಳೀಯ ಯುವಕರಿಗೆ ಗಣಿಗಾರಿಕೆ ಕ್ಷೇತ್ರದಲ್ಲಿ ತರಬೇತಿ ಮತ್ತು ಉದ್ಯೋಗಾವಕಾಶಗಳಿಗೆ ಅವಕಾಶಗಳಿವೆ ಎಂದು ಹೇಳಲಾಗುತ್ತಿದೆ.

ಪರಿಸರವಾದಿಗಳ ವಿರೋಧ

ಇನ್ನು ಹಲವು ಸಕಾರಾತ್ಮಕ ಅಂಶಗಳ ಹೊರತಾಗಿಯೂ ಕದಿರಿಯಲ್ಲಿ ಚಿನ್ನದ ಗಣಿಗಾರಿಕೆಗೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಗಣಿಗಾರಿಕೆಯು ಪರಿಸರದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಸರಿಯಾದ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಂತರ್ಜಲ ಮತ್ತು ಕೃಷಿ ಭೂಮಿಗೆ ಹಾನಿಯಾಗದಂತೆ ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಗಣಿಗಾರಿಕೆಯನ್ನು ನಡೆಸಬೇಕಾಗಿದೆ ಎಂದು ಅವರು ನಂಬುತ್ತಾರೆ. ಸರ್ಕಾರವು ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತದೆ ಎಂದು ವರದಿಯಾಗಿದೆ.

ಒಟ್ಟಾರೆಯಾಗಿ, ಕದಿರಿ ಪ್ರದೇಶದಲ್ಲಿ ಪತ್ತೆಯಾದ ಚಿನ್ನದ ನಿಕ್ಷೇಪಗಳು ಶ್ರೀ ಸತ್ಯ ಸಾಯಿ ಜಿಲ್ಲೆಯಷ್ಟೇ ಅಲ್ಲ, ಆಂಧ್ರಪ್ರದೇಶ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ನಿರ್ಣಾಯಕವಾಗುವ ಸಾಧ್ಯತೆಯಿದೆ. ಶೀಘ್ರದಲ್ಲೇ ಅಧಿಕೃತ ಘೋಷಣೆ ಬಂದರೆ, ರಾಷ್ಟ್ರೀಯ ನಕ್ಷೆಯಲ್ಲಿ ಕದಿರಿ ಪ್ರದೇಶಕ್ಕೆ ಹೊಸ ಗುರುತನ್ನು ಪಡೆಯುವತ್ತ ಸ್ಥಳೀಯರು ಹೆಜ್ಜೆ ಇಡುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'Op Sindoor: ಭಾರತೀಯ ವಾಯುಪಡೆಯ ಸಾಮರ್ಥ್ಯ ನೋಡಿಯೇ ಬೆಚ್ಚಿಬಿದ್ದ ಪಾಕಿಸ್ತಾನ ಕದನ ವಿರಾಮಕ್ಕೆ ಒತ್ತಾಯಿಸಿತ್ತು': ಸ್ವಿಸ್ ವರದಿ

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ಸಿದ್ದರಾಮಯ್ಯ ಆಕ್ರೋಶ ಬೆನ್ನಲ್ಲೇ​ ರಾಜೀವ್ ಗೌಡ ಬಂಧಿಸಿದ ಪೊಲೀಸರು!

ಭಾರತದಲ್ಲಿ ಹಿಂದೂಗಳಿಂದಾಗಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ: ಅಸ್ಸಾಂ ಚುನಾವಣೆಗೂ ಮುನ್ನ ಮೌಲಾನಾ ಬದ್ರುದ್ದೀನ್ ಹೇಳಿಕೆ!

CCL 2026: ಅವಮಾನ ಮಾಡಿದ ತಮಿಳುನಾಡಿನಲ್ಲೇ ಕನ್ನಡದ ಧ್ವಜ ಹಾರಿಸಿದ ಕಿಚ್ಚ ಸುದೀಪ್, Video!

ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್: ಕಾರು ಹಿಂಬಾಲಿಸಿ ಅವಾಚ್ಯ ಶಬ್ದಗಳ ನಿಂದನೆ, ಯುವಕನ ಪುಂಡಾಟ.. Video

SCROLL FOR NEXT