ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ online desk
ದೇಶ

18 ತಿಂಗಳ ಹಿಂದೆ ಹೆಲಿಕಾಪ್ಟರ್ ದುರಂತ ಅಪಾಯದಿಂದ ಪಾರಾಗಿದ್ದ ಅಜಿತ್ ಪವಾರ್; ಅಂದು ನೆನಪಿಸಿಕೊಂಡಿದ್ದೇನು, ಅವರ ಜೊತೆಗಿದ್ದದ್ದು ಯಾರು?

ಮಾರ್ಗ ಮಧ್ಯೆ ದಟ್ಟವಾದ ಮುಂಗಾರು ಮೋಡಗಳು ಆವರಿಸಿದ್ದರಿಂದ ಹೆಲಿಕಾಪ್ಟರ್ ಕಳಪೆ ಗೋಚರತೆಯಿಂದಾಗಿ ದಾರಿ ತಪ್ಪಿತ್ತು.

ಮುಂಬೈ: ಬಾರಾಮತಿಯಲ್ಲಿ ಬೆಳಿಗ್ಗೆ 8.45 ಕ್ಕೆ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವನ್ನಪ್ಪಿದರು. ಲ್ಯಾಂಡಿಂಗ್ ಮಾಡುವಾಗ ನಿಯಂತ್ರಣ ಕಳೆದುಕೊಂಡ ಕೆಲವೇ ನಿಮಿಷಗಳ ನಂತರ. ತುರ್ತು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪುತ್ತಿದ್ದಂತೆ ಅವಶೇಷಗಳಿಂದ ಬೆಂಕಿ ಮತ್ತು ಹೊಗೆಯ ದಟ್ಟಣೆ ಹೆಚ್ಚಾಯಿತು.

ಲಿಯರ್‌ಜೆಟ್ 45 ವಿಮಾನದಲ್ಲಿ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್‌ಒ), ಒಬ್ಬ ಸಹಾಯಕ ಮತ್ತು ಇಬ್ಬರು ಸಿಬ್ಬಂದಿ ಇದ್ದರು - ಒಬ್ಬ ಪೈಲಟ್-ಇನ್-ಕಮಾಂಡ್ (ಪಿಐಸಿ) ಮತ್ತು ಒಬ್ಬ ಸೆಕೆಂಡ್-ಇನ್-ಕಮಾಂಡ್ (ಎಸ್‌ಐಸಿ) ಇದ್ದರು.

ಈ ಘಟನೆ ನಡೆಯುವುದಕ್ಕೂ 18 ತಿಂಗಳ ಮುನ್ನ ಅಜಿತ್ ಪವಾರ್ ಹೆಲಿಕಾಪ್ಟರ್ ದುರಂತವೊಂದರಿಂದ ಪಾರಾಗಿದ್ದರು. 2024 ರ ಜುಲೈ ನಲ್ಲಿ ನಾಗ್ಪುರದಿಂದ ಗಡ್ಚಿರೋಲಿಗೆ ಉಕ್ಕಿನ ಯೋಜನೆಯ ಶಿಲಾನ್ಯಾಸ ಸಮಾರಂಭಕ್ಕಾಗಿ ಡಿಸಿಎಂ ಅಜಿತ್ ಪವಾರ್ ಅಂದಿನ ಡಿಸಿಎಂ ದೇವೇಂದ್ರ ಫಡ್ನವಿಸ್, ಕೈಗಾರಿಕೆ ಖಾತೆ ಸಚಿವ ಉದಯ್ ಸಾಮಂತ್ ಜೊತೆ ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದರು.

ಮಾರ್ಗ ಮಧ್ಯೆ ದಟ್ಟವಾದ ಮುಂಗಾರು ಮೋಡಗಳು ಆವರಿಸಿದ್ದರಿಂದ ಹೆಲಿಕಾಪ್ಟರ್ ಕಳಪೆ ಗೋಚರತೆಯಿಂದಾಗಿ ದಾರಿ ತಪ್ಪಿತ್ತು. ಸಂತಸದಲ್ಲಿದ್ದ ಅಜಿತ್ ಪವಾರ್ ಗೆ ಆತಂಕ ಎದುರಾಗಿತ್ತು. ಅವರ ಪಕ್ಕದಲ್ಲೇ ಕುಳಿತಿದ್ದ ದೇವೇಂದ್ರ ಫಡ್ನವಿಸ್ ಆರು ವಿಮಾನ ಅಪಘಾತಗಳಿಂದ ಪಾರಾಗಿದ್ದರು. ಗಾಬರಿಯಾಗಿದ್ದ ಅಜಿತ್ ಪವಾರ್ ಅವರನ್ನು ಗಮನಿಸಿದ ಫಡ್ನವಿಸ್ ಸಮಾಧಾನಪಡಿಸಿ, ಧೈರ್ಯ ತುಂಬಿದ್ದರು. ಅದೃಷ್ಟವಶಾತ್ ಹೆಲಿಕಾಪ್ಟರ್ ನ ಪೈಲಟ್ ನ ಕೌಶಲ್ಯದಿಂದಾಗಿ ಹೆಲಿಕಾಪ್ಟರ್ ಸುರಕ್ಷಿತವಾಗಿ ನಿಗದಿತ ಜಾಗದಲ್ಲಿ ಲ್ಯಾಂಡ್ ಆಗಿತ್ತು.

ಕಾರ್ಯಕ್ರಮದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳುತ್ತಾ, ಪವಾರ್ ನಂತರ ಕಾರ್ಯಕ್ರಮದಲ್ಲಿ, "ಉದಯ್ ಸಮಂತ್ ಅವರು ಲ್ಯಾಂಡಿಂಗ್ ಸೈಟ್ ನ್ನು ನೋಡುವಂತೆ ನನಗೆ ಹೇಳಿದರು. ಕಿಟಕಿಯಿಂದ ಅದನ್ನು ನೋಡಿದ ನಂತರ, ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟೆ" ಎಂದು ಹೇಳಿದ್ದರು. ಇದಾದ 18 ತಿಂಗಳಲ್ಲಿ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಆತ್ಮವಿಶ್ವಾಸದ ಭಾರತ ಇಂದು ಜಗತ್ತಿಗೆ ಭರವಸೆಯ ದಾರಿದೀಪವಾಗಿದೆ, ಸುಗಮ ಬಜೆಟ್ ಅಧಿವೇಶನಕ್ಕೆ ಎಲ್ಲರೂ ಸಹಕರಿಸಿ: ಪ್ರಧಾನಿ ಮೋದಿ ಮನವಿ-Video

Ajit Pawar: ಇಂದು ಬೆಳಗ್ಗೆ 11 ಗಂಟೆಗೆ ಸರ್ಕಾರಿ ಗೌರವಗಳೊಂದಿಗೆ ಬಾರಾಮತಿಯಲ್ಲಿ ಅಂತ್ಯಕ್ರಿಯೆ: ಪ್ರಧಾನಿ ಮೋದಿ, ಅಮಿತ್ ಶಾ ಭಾಗವಹಿಸುವ ನಿರೀಕ್ಷೆ

'ಅಂಬರೀಷ್ ನ ಕಾಂಗ್ರೆಸ್‌ಗೆ ಕರ್ಕೊಂಡು ಬಂದೆ, ಅವನು ತೊಳೆದುಬಿಟ್ಟು ಹೋದ: ಲೋಕಸಭೆ ಚುನಾವಣೆಯಲ್ಲಿ 36 ಕೋಟಿ ಖರ್ಚು ಮಾಡಿಸಿ HDK ಮೋಸ ಮಾಡಿದ'

ತಮಿಳು ನಾಡು ಚುನಾವಣೆ: ದೆಹಲಿಯಲ್ಲಿ ಕನಿಮೋಳಿ-ರಾಹುಲ್ ಗಾಂಧಿ ಭೇಟಿ, ಒಪ್ಪಂದಕ್ಕೆ ಬಾರದ ಮಾತುಕತೆ, ಕಾಂಗ್ರೆಸ್ ಗೆ ಸಿಗುತ್ತಾ ಹೆಚ್ಚಿನ ಸ್ಥಾನ?

ಅಜಿತ್ ಪವಾರ್ ದುರ್ಮರಣದಲ್ಲಿ 'ಪಿತೂರಿ' ನಡೆದಿದೆಯೇ? ಶರದ್ ಪವಾರ್ ಮೊದಲ ಪ್ರತಿಕ್ರಿಯೆ...

SCROLL FOR NEXT