ಅವಿಮುಕ್ತೇಶ್ವರಾನಂದ-ಯೋಗಿ ಆದಿತ್ಯನಾಥ 
ದೇಶ

ನನ್ನ ಹೃದಯ ಭಾರವಾಗಿದೆ: ಪ್ರಯಾಗರಾಜ್ ಮಾಘ ಮೇಳದಿಂದ ಪುಣ್ಯ ಸ್ನಾನ ಮಾಡದೆ ಹಿಂತಿರುಗಿದ ಅವಿಮುಕ್ತೇಶ್ವರಾನಂದ!

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರು ಪ್ರಯಾಗರಾಜ್‌ನಲ್ಲಿ ನಡೆದ ಮಾಘ ಮೇಳದಿಂದ ಹಿಂದಿರುಗುವುದಾಗಿ ಘೋಷಿಸಿದರು.

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರು ಪ್ರಯಾಗರಾಜ್‌ನಲ್ಲಿ ನಡೆದ ಮಾಘ ಮೇಳದಿಂದ ಹಿಂದಿರುಗುವುದಾಗಿ ಘೋಷಿಸಿದರು. ಸ್ನಾನ ಮಾಡದೆ ಭಾರವಾದ ಹೃದಯದಿಂದ ಈ ಪವಿತ್ರ ಭೂಮಿಯನ್ನು ಬಿಡುತ್ತಿದ್ದೇನೆ ಎಂದು ಹೇಳಿದರು. ಇಂತಹ ಪರಿಸ್ಥಿತಿಯನ್ನು ನಾನು ಎಂದಿಗೂ ಊಹಿಸಿರಲಿಲ್ಲ. ಈ ಘಟನೆ ಆತ್ಮವನ್ನು ಕದಡುವಂತಿದೆ ಮಾತ್ರವಲ್ಲದೆ ನ್ಯಾಯ ಮತ್ತು ಮಾನವೀಯತೆಯ ಮೇಲಿನ ನಮ್ಮ ಸಾಮೂಹಿಕ ನಂಬಿಕೆಯನ್ನು ಪ್ರಶ್ನಿಸುತ್ತದೆ ಎಂದು ಅವಿಮುಕ್ತೇಶ್ವರನಂದರು ಹೇಳಿದ್ದಾರೆ.

ಪ್ರಯಾಗರಾಜ್ ಭೂಮಿ ಯಾವಾಗಲೂ ನಂಬಿಕೆ, ಶಾಂತಿ ಮತ್ತು ಆಧ್ಯಾತ್ಮಿಕ ಪರಿಶುದ್ಧತೆಯ ಕೇಂದ್ರವಾಗಿದೆ. ಅವರೂ ಸಹ ಭಕ್ತಿ ಮತ್ತು ಧಾರ್ಮಿಕ ಶಾಂತಿಯ ಮನೋಭಾವದಿಂದ ಇಲ್ಲಿಗೆ ಬಂದಿದ್ದರು. ಆದರೆ ಈಗ ನಾವು ಇಂತಹ ನಿರಾಶಾದಾಯಕ ಪರಿಸ್ಥಿತಿಯಲ್ಲಿ ಹಿಂತಿರುಗಬೇಕಾಗಿದೆ. ಈ ಘಟನೆ ನಮ್ಮ ಕಲ್ಪನೆಗೂ ಮೀರಿದ್ದು ಮತ್ತು ಆತ್ಮವನ್ನು ಕಲಕುವಂತಿದೆ. ಇದು ನ್ಯಾಯ ಮತ್ತು ಮಾನವೀಯತೆಯ ಮೇಲಿನ ನಮ್ಮ ನಂಬಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದರು.

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರ ಸುತ್ತಲಿನ ವಿವಾದವು ಜನವರಿ 18ರಂದು ಪ್ರಯಾಗರಾಜ್‌ನ ಮಾಘ ಮೇಳದಲ್ಲಿ ಸಂಗಮ ಸ್ನಾನಕ್ಕೆ ಅವರನ್ನು ಕರೆದೊಯ್ಯುತ್ತಿದ್ದ ಪಲ್ಲಕ್ಕಿಯನ್ನು ಪೊಲೀಸರು ನಿಲ್ಲಿಸಿದಾಗ ಪ್ರಾರಂಭವಾಯಿತು. ಶಿಷ್ಯರು ಈ ಕ್ರಮವನ್ನು ಪ್ರತಿಭಟಿಸಿದರು. ಆಗ ಅವರನ್ನು ತಳ್ಳಿ ಎಳೆದಾಡಲಾಯಿತು ಎಂಬ ಆರೋಪಗಳು ಕೇಳಿಬಂದವು. ಘಟನೆಯ ನಂತರ, ಅವಿಮುಕ್ತೇಶ್ವರಾನಂದ ಶಿಬಿರದ ಹೊರಗೆ ಪ್ರತಿಭಟನೆ ನಡೆಸಿದರು ಮತ್ತು ಹಲವಾರು ದಿನಗಳವರೆಗೆ ಒಳಗೆ ಪ್ರವೇಶಿಸಲಿಲ್ಲ.

ಆಡಳಿತವು ಎರಡು ದಿನಗಳಲ್ಲಿ ಎರಡು ನೋಟಿಸ್‌ಗಳನ್ನು ನೀಡಿ, ಅವಿಮುಕ್ತೇಶ್ವರಾನಂದರ ಸ್ಥಾನಮಾನದ ಪುರಾವೆಯನ್ನು ಕೋರಿದಾಗ ವಿವಾದ ಉಲ್ಬಣಗೊಂಡಿತು. ಅವಿಮುಕ್ತೇಶ್ವರಾನಂದರು ಲಿಖಿತ ಪ್ರತಿಕ್ರಿಯೆಯನ್ನು ಕಳುಹಿಸಿದರು. ಆದರೆ ಈ ಮಧ್ಯೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಅವಿಮುಕ್ತೇಶ್ವರಾನಂದರ ಹೆಸರೇಳದೆ 'ಕಾಲನೇಮಿ' (ಕೆಟ್ಟ ಜನ) ಎಂಬ ಪದವನ್ನು ಬಳಸಿದರು. ಇದು ವಿವಾದವನ್ನು ಧಾರ್ಮಿಕ-ಸಾಂಸ್ಕೃತಿಕ ದೃಷ್ಟಿಕೋನದಿಂದ ರಾಜಕೀಯ ದೃಷ್ಟಿಕೋನಕ್ಕೆ ಹೆಚ್ಚಿಸಿತು.

ಇದಕ್ಕೆ ಪ್ರತಿಕ್ರಿಯೆಯಾಗಿ, ಅವಿಮುಕ್ತೇಶ್ವರಾನಂದರು ಯೋಗಿಯನ್ನು ಔರಂಗಜೇಬನಿಗೆ ಹೋಲಿಸಿ, ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಪರಿಣಾಮವಾಗಿ, ಸಂತ ಸಮುದಾಯವು ಎರಡು ಬಣಗಳಾಗಿ ವಿಭಜನೆಯಾದಂತೆ ಕಂಡುಬಂದಿತು. ಆದರೂ ಮೂವರು ಶಂಕರಾಚಾರ್ಯರು ಅವರ ಬೆಂಬಲಕ್ಕೆ ನಿಂತರು. ಅವಿಮುಕ್ತೇಶ್ವರಾನಂದರ ಪ್ರಮುಖ ಬೇಡಿಕೆ ಆಡಳಿತಾತ್ಮಕ ಕ್ಷಮೆಯಾಗಿತ್ತು. ಕ್ಷಮೆ ಕೇಳದಿದ್ದರೇ ತಾವು ಸಂಗಮ ಸ್ನಾನ ಮಾಡದಿರಲು ದೃಢನಿಶ್ಚಯ ವ್ಯಕ್ತಪಡಿಸಿದರು. ಈ ಬೆಳವಣಿಗೆಯು ಸರ್ಕಾರಿ ರಚನೆಯ ಮೇಲೂ ಪರಿಣಾಮ ಬೀರಿತು. ಜನವರಿ 26ರಂದು ಬರೇಲಿಯ ನಗರ ಮ್ಯಾಜಿಸ್ಟ್ರೇಟ್ ಅವಿಮುಕ್ತೇಶ್ವರಾನಂದರಿಗೆ ಬೆಂಬಲ ವ್ಯಕ್ತಪಡಿಸಿ ರಾಜೀನಾಮೆ ನೀಡಿದರು. ಅದರ ಮರುದಿನ, ಅಯೋಧ್ಯೆಯ ಉಪಆಯುಕ್ತ ಪ್ರಶಾಂತ್ ಕುಮಾರ್ ಮುಖ್ಯಮಂತ್ರಿಗೆ ಬೆಂಬಲವಾಗಿ ರಾಜೀನಾಮೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಭಾರೀ ಅಗ್ನಿ ಅವಘಡ: ಕನಿಷ್ಠ 10 ಮಂದಿ ಸಾವು, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ

West Asia conflict: ದುಬೈ ಏರ್‌ಪೋರ್ಟ್‌ ಬಳಿ ಡ್ರೋನ್‌ ದಾಳಿ; ಭಾರೀ ಬೆಂಕಿ, ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ

ಒಡಿಶಾ ರಾಜ್ಯಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ 'ಕೈ'ಶಾಸಕರು, ಬಿಡದಿ ರೆಸಾರ್ಟ್‌ನಿಂದ ಬೆಂಗಳೂರಿಗೆ ಶಿಫ್ಟ್..!

ಬಿಜೆಪಿಯಿಂದ ಆಪರೇಷನ್ ಕಮಲ ಯತ್ನ: ಒಡಿಸ್ಸಾ ಕಾಂಗ್ರೆಸ್ ಶಾಸಕರಿಗೆ ತಲಾ 5 ಕೋಟಿ ಆಮಿಷ: ಡಿ.ಕೆ ಶಿವಕುಮಾರ್

ಇರಾನ್ ಯುದ್ಧ ವಿರಾಮ ಬಗ್ಗೆ ಮಾತುಕತೆ ನಡೆಸಲು ಸಿದ್ಧವಾಗಿದೆ, ಆದರೆ ಈ ಹಂತದಲ್ಲಿ ನಾವು ತಯಾರಿಲ್ಲ: Donald Trump

SCROLL FOR NEXT