ಹಾರ್ಮುಜ್ ಜಲಸಂಧಿ 
ದೇಶ

ರಸಗೊಬ್ಬರ ಹೊತ್ತ 15 ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿ ದಾಟಿವೆ: ಕೇಂದ್ರ ಸರ್ಕಾರ ಮಾಹಿತಿ

ಎಂಟು ಹಡಗುಗಳು 3.32 ಲಕ್ಷ ಟನ್ ಯೂರಿಯಾವನ್ನು ಸಾಗಿಸುತ್ತಿವೆ. ನಾಲ್ಕು ಹಡಗುಗಳು 2.57 ಲಕ್ಷ ಟನ್ ಡಿಎಪಿಯನ್ನು ಸಾಗಿಸುತ್ತಿವೆ ಮತ್ತು ಮೂರು ಹಡಗುಗಳು 1.11 ಲಕ್ಷ ಟನ್ ಸಲ್ಫರ್ ಅನ್ನು ಹೊಂದಿವೆ.

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಇತ್ತೀಚಿನ ಸಂಘರ್ಷದಿಂದ ಭಾರತದ ರಸಗೊಬ್ಬರ ಪೂರೈಕೆ ಸರಪಳಿ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ದೇಶಕ್ಕೆ ರಸಗೊಬ್ಬರ ಮತ್ತು ಕಚ್ಚಾ ವಸ್ತುಗಳನ್ನು ಸಾಗಿಸುವ 20 ಹಡಗುಗಳಲ್ಲಿ 15 ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಭಾನುವಾರ ತಿಳಿಸಿದೆ.

ಇವುಗಳಲ್ಲಿ ಎಂಟು ಹಡಗುಗಳು 3.32 ಲಕ್ಷ ಟನ್ ಯೂರಿಯಾವನ್ನು ಸಾಗಿಸುತ್ತಿವೆ. ನಾಲ್ಕು ಹಡಗುಗಳು 2.57 ಲಕ್ಷ ಟನ್ ಡಿಎಪಿಯನ್ನು ಸಾಗಿಸುತ್ತಿವೆ ಮತ್ತು ಮೂರು ಹಡಗುಗಳು 1.11 ಲಕ್ಷ ಟನ್ ಸಲ್ಫರ್ ಅನ್ನು ಹೊಂದಿವೆ.

ಇವೆಲ್ಲವೂ ನಿಗದಿತ ವೇಳಾಪಟ್ಟಿಯ ಪ್ರಕಾರ ಭಾರತೀಯ ಬಂದರುಗಳಿಗೆ ರಸಗೊಬ್ಬರ ಸಾಗಿಸುವ ನಿರೀಕ್ಷೆಯಿದೆ. ತಲಾ 0.25 ಲಕ್ಷ ಟನ್ ಅಮೋನಿಯಾ ಮತ್ತು 0.45 ಲಕ್ಷ ಟನ್ ಯೂರಿಯಾವನ್ನು ಸಾಗಿಸುವ ಐದು ಹಡಗುಗಳು ಕೂಡಾ ಇವೆ.

ಪ್ರಸ್ತುತ ಎರಡು ಹೆಚ್ಚುವರಿ ಯೂರಿಯಾ ಹಡಗುಗಳು ಮತ್ತು ಒಂದು ಸಲ್ಫರ್ ಹಡಗಿನಲ್ಲಿ ಲೋಡಿಂಗ್ ನಡೆಯುತ್ತಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಪಶ್ಚಿಮ ಏಷ್ಯಾ ಸಂಘರ್ಷದಿಂದ ಜಲಸಂಧಿಯ ಮೂಲಕ ಸಮುದ್ರ ಸಂಚಾರಕ್ಕೆ ಅಡ್ಡಿಯಾದರೂ "ಸಕಾಲಿಕ ಯೋಜನೆ, ಪರಿಣಾಮಕಾರಿ ಸಮನ್ವಯ ಮತ್ತು ನಿರಂತರ ಮೇಲ್ವಿಚಾರಣೆಯ ಮೂಲಕ" ನಿರಂತರ ರಸಗೊಬ್ಬರ ಲಭ್ಯತೆಯನ್ನು ಖಚಿತಪಡಿಸಿಕೊಂಡಿದೆ ಎಂದು ಕೇಂದ್ರ ಹೇಳಿದೆ.

ಓಮನ್, ಮಲೇಷ್ಯಾ, ವಿಯೆಟ್ನಾಂ, ಜಾರ್ಜಿಯಾ, ನೈಜೀರಿಯಾ, ರಷ್ಯಾ, ಫಿನ್ಲ್ಯಾಂಡ್, ಈಜಿಪ್ಟ್, ಅಲ್ಜೀರಿಯಾ, ಟರ್ಕಿಯೆ ಮತ್ತು ನೆದರ್‌ಲ್ಯಾಂಡ್ಸ್‌ನಿಂದ ಯೂರಿಯಾ ಸರಬರಾಜು ವ್ಯವಸ್ಥೆ ಮಾಡಲಾಗಿದೆ.

DAP ಮತ್ತು NPK ಗಾಗಿ, ರಷ್ಯಾ, ಮೊರಾಕೊ, ಈಜಿಪ್ಟ್, ಯುಎಸ್, ಜೋರ್ಡಾನ್, ದಕ್ಷಿಣ ಕೊರಿಯಾ, ಟುನೀಶಿಯಾ ಮತ್ತು ಸೌದಿ ಅರೇಬಿಯಾದಿಂದ ಕೆಂಪು ಸಮುದ್ರ ಮಾರ್ಗದ ಮೂಲಕ ಭಾರತ ಸರಕುಗಳನ್ನು ಪಡೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoorನಲ್ಲಿ ಧ್ವಂಸವಾಗಿದ್ದ ಜೈಶ್ ನೆಲೆ ಮರುನಿರ್ಮಾಣ! ಪಾಕ್‌ ಸರ್ಕಾರದಿಂದ 25 ಕೋಟಿ ನೆರವು!

Onion Price: ದಿಢೀರ್ ಈರುಳ್ಳಿ ಬೆಲೆ ಏರಿಕೆ; ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತಷ್ಟು ದುಬಾರಿ ಸಾಧ್ಯತೆ, ದರ ಏರಿಕೆಗೆ ಕಾರಣವೇನು?

ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿ, ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಪೂರ್ತಿಯಾಗಿ ಹಾಡಿ ತೋರಿಸಿ: ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಸವಾಲು

ಮದ್ಯ ಸಾಗಣೆ ಹಗರಣ: ಆಂಧ್ರಪ್ರದೇಶದ ಮಾಜಿ ಸಚಿವರ ಬಂಧಿಸಿದ ED

'3 ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ': SIR ಪಟ್ಟಿಯಲ್ಲಿ ಹೆಸರು ನಾಪತ್ತೆ ಬಗ್ಗೆ ಮಾಜಿ ರಾಯಭಾರಿ ಅಸಮಾಧಾನ!