ಪ್ರಧಾನಿ ನರೇಂದ್ರ ಮೋದಿ  
ದೇಶ

'ಪಶ್ಚಿಮ ಏಷ್ಯಾ ಸಂಘರ್ಷದಿಂದ LPG ಸಿಲಿಂಡರ್ ಬೆಲೆ 2 ಸಾವಿರ ರೂ.ಗೆ ಏರಿಕೆಯಾಗುತ್ತಿತ್ತು, ಅದನ್ನು ನಾವು ತಡೆದೆವು': ಪ್ರಧಾನಿ ಮೋದಿ-Video

ರಾಜಸ್ಥಾನದ ಬಾಲೋತ್ರಾ ಜಿಲ್ಲೆಯ ಪಾಚ್‌ಪದ್ರಾದಲ್ಲಿ ನಿರ್ಮಿಸಲಾದ ರಿಫೈನರಿ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾದ ಸಂಘರ್ಷವು 21ನೇ ಶತಮಾನದ ಅತ್ಯಂತ ಗಂಭೀರ ಇಂಧನ ಬಿಕ್ಕಟ್ಟಿಗೆ ಕಾರಣವಾಯಿತು ಎಂದು ಹೇಳಿದರು.

ಪಾಚ್‌ಪದ್ರಾ: ಪಶ್ಚಿಮ ಏಷ್ಯಾದ ಸಂಘರ್ಷದಿಂದ ಉಂಟಾದ ವ್ಯತ್ಯಯಗಳ ಪರಿಣಾಮ ಅಡುಗೆ ಅನಿಲ (LPG) ಸಿಲಿಂಡರ್‌ನ ಬೆಲೆ 2,000 ರೂಪಾಯಿಗಳವರೆಗೆ ಏರಬಹುದಾಗಿತ್ತು. ಆದರೆ ಕೇಂದ್ರ ಸರ್ಕಾರ ಗ್ರಾಹಕರ ಮೇಲಿನ ಹೊರೆ ಹೆಚ್ಚದಂತೆ ಬೆಲೆಯನ್ನು ನಿಯಂತ್ರಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಜಸ್ಥಾನದ ಬಾಲೋತ್ರಾ ಜಿಲ್ಲೆಯ ಪಾಚ್‌ಪದ್ರಾದಲ್ಲಿ ನಿರ್ಮಿಸಲಾದ ರಿಫೈನರಿ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾದ ಸಂಘರ್ಷವು 21ನೇ ಶತಮಾನದ ಅತ್ಯಂತ ಗಂಭೀರ ಇಂಧನ ಬಿಕ್ಕಟ್ಟಿಗೆ ಕಾರಣವಾಯಿತು ಎಂದು ಹೇಳಿದರು.

ಭಾರತವು ಪ್ರತಿಯೊಂದು ಹಂತದಲ್ಲೂ ಸರಿಯಾದ ನಿರ್ಧಾರಗಳನ್ನು ಕೈಗೊಂಡಿತು. ಪರಿಸ್ಥಿತಿಯನ್ನು ಸಮಯಕ್ಕೆ ಸರಿಯಾಗಿ ಅಂದಾಜಿಸಿ, ಪರಿಣಾಮಕಾರಿ ಕಾರ್ಯತಂತ್ರಗಳನ್ನು ರೂಪಿಸಿತು. ಸಂಪನ್ಮೂಲಗಳನ್ನು ಸಮತೋಲನದಿಂದ ಬಳಸಿಕೊಂಡು, ತನ್ನ ರಾಜತಾಂತ್ರಿಕ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಅದಕ್ಕಾಗಿಯೇ ಭಾರತ ಈ ಬಿಕ್ಕಟ್ಟನ್ನು ಯಶಸ್ವಿಯಾಗಿ ಎದುರಿಸಿತು ಎಂದು ಮೋದಿ ಹೇಳಿದರು.

ಮತ್ತೊಂದೆಡೆ, ದೇಶೀಯ ಗ್ರಾಹಕರ ಮೇಲೆ ಅತಿಯಾದ ಹೊರೆ ಬೀಳದಂತೆ ನಾವು ನೋಡಿಕೊಂಡೆವು. ಆ ಸಂದರ್ಭದಲ್ಲಿನ ಅಂದಾಜುಗಳ ಪ್ರಕಾರ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 2,000 ರೂಪಾಯಿಗಳವರೆಗೆ ಏರಬಹುದಿತ್ತು ಎಂದು ಪ್ರಮುಖ ಮಾರುಕಟ್ಟೆ ತಜ್ಞರು ಅಂದಾಜಿಸಿದ್ದರು ಎಂದು ಅವರು ಹೇಳಿದರು.

ಆದರೆ ಈಗಲೂ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು 950 ರೂಪಾಯಿಗಿಂತ ಕಡಿಮೆ ಬೆಲೆಗೆ ಒದಗಿಸಲಾಗುತ್ತಿದೆ. ಬಡವರಿಗಾಗಿ ಉಜ್ವಲಾ ಯೋಜನೆಯ ಸಿಲಿಂಡರ್‌ಗಳು 650 ರೂಪಾಯಿಗಳಿಗಿಂತ ಕಡಿಮೆ ದರದಲ್ಲಿ ಲಭ್ಯವಿವೆ. ಕೇವಲ ಎರಡು ದಿನಗಳ ಹಿಂದೆ ಸರ್ಕಾರ ವಾಣಿಜ್ಯ ಬಳಕೆಯ ಅನಿಲದ ದರದಲ್ಲಿಯೂ ಗಮನಾರ್ಹ ಇಳಿಕೆ ಮಾಡಿದೆ. ನಮ್ಮ ಸರ್ಕಾರ ಎಷ್ಟು ಸೂಕ್ಷ್ಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ, 14.2 ಕೆ.ಜಿ. ತೂಕದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದೆಹಲಿಯಲ್ಲಿ 942 ರೂಪಾಯಿಗೆ ಲಭ್ಯವಿದೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ 300 ರೂಪಾಯಿಗೆ ಗುರಿತಪ್ಪದ ಸಬ್ಸಿಡಿ ನೀಡಲಾಗುತ್ತಿದ್ದು, ಅವರಿಗೆ ಸಿಲಿಂಡರ್ 642 ರೂಪಾಯಿಗೆ ದೊರೆಯುತ್ತಿದೆ.

ಅಮೆರಿಕ–ಇರಾನ್ ಯುದ್ಧದಿಂದ ಉಂಟಾದ ವ್ಯತ್ಯಯಗಳ ಬಳಿಕ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಒಟ್ಟಾರೆ ಸುಮಾರು 90 ರೂಪಾಯಿಗಳಷ್ಟು ಏರಿಕೆಯಾಗಿದೆ.

2022ರಲ್ಲಿ ಆರಂಭವಾದ ರಷ್ಯಾ–ಉಕ್ರೇನ್ ಯುದ್ಧದಿಂದ ಉಂಟಾದ ಅಡಚಣೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಚೀಲದ ಬೆಲೆ 3,000 ರೂಪಾಯಿ ಮೀರಿದ್ದರೂ, ರೈತರಿಗೆ ಸುಮಾರು 300 ರೂಪಾಯಿಗೆ ಯೂರಿಯಾ ಒದಗಿಸುವ ಮೂಲಕ ಸರ್ಕಾರ ಅವರನ್ನು ರಕ್ಷಿಸಿತು ಎಂದು ಹೇಳಿದರು.

ಇದಕ್ಕಾಗಿ ಸರ್ಕಾರ ಖಜಾನೆಯಿಂದ ಲಕ್ಷಾಂತರ ಕೋಟಿ ರೂಪಾಯಿ ವೆಚ್ಚ ಮಾಡಿ ಸಬ್ಸಿಡಿ ನೀಡಿದೆ ಎಂದು ಪ್ರಧಾನಿ ಹೇಳಿದರು.

ಜಾಗತಿಕ ಪೂರೈಕೆ ಸರಪಳಿಗಳು ಅಸ್ತವ್ಯಸ್ತಗೊಂಡಿದ್ದರೂ, ಭಾರತ ಪರಿಹಾರಗಳನ್ನು ಕಂಡುಕೊಂಡಿತು. ಸರ್ಕಾರ ಪರ್ಯಾಯ ಮಾರ್ಗಗಳನ್ನು ಹುಡುಕಿತು. ಹಲವು ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳಿಗೆ ರಸಗೊಬ್ಬರ ಖರೀದಿಸುವ ವಿಶೇಷ ಜವಾಬ್ದಾರಿ ನೀಡಲಾಯಿತು. ಆಮದುಗಳ ಜೊತೆಗೆ ದೇಶೀಯ ಉತ್ಪಾದನೆಯನ್ನೂ ಹೆಚ್ಚಿಸಲಾಯಿತು. ನೈಸರ್ಗಿಕ ಕೃಷಿಯಂತಹ ಪರ್ಯಾಯಗಳನ್ನು ಉತ್ತೇಜಿಸಲಾಯಿತು. ದಾಸ್ತಾನು ಹಾಗೂ ಕಾಳಸಂತೆಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಯಿತು," ಎಂದು ಅವರು ಹೇಳಿದರು.

ಬಾಲೋತ್ರಾದಲ್ಲಿ ಸುಮಾರು 1.06 ಲಕ್ಷ ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಿ, ಉದ್ಘಾಟನೆ ನೆರವೇರಿಸಿ, ಶಂಕುಸ್ಥಾಪನೆ ಮಾಡಿದರು.

ಇವುಗಳಲ್ಲಿ ಸುಮಾರು 80,000 ಕೋಟಿ ರೂಪಾಯಿ ಹೂಡಿಕೆಯಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಹಾಗೂ ರಾಜಸ್ಥಾನ ಸರ್ಕಾರ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ರಿಫೈನರಿ ಯೋಜನೆಯೂ ಸೇರಿದೆ.

ಇದೇ ವೇಳೆ, ಜೋಧ್‌ಪುರದ ಹೊಸ ವಿಮಾನ ನಿಲ್ದಾಣ ಟರ್ಮಿನಲ್‌ನ್ನು ಉದ್ಘಾಟಿಸಿದ ಪ್ರಧಾನಿ, ಉಡಾನ್ (UDAN) ಯೋಜನೆಯ ಹೊಸ ಹಂತಕ್ಕೂ ಚಾಲನೆ ನೀಡಿದರು. ಈ ಹೊಸ ಹಂತದ ಯೋಜನೆಯಡಿ ಸಣ್ಣ ಪಟ್ಟಣಗಳು ಹಾಗೂ ದೂರದ ಪ್ರದೇಶಗಳನ್ನು ವಿಮಾನ ಸಂಪರ್ಕದ ಮೂಲಕ ದೇಶದ ಇತರೆ ಭಾಗಗಳೊಂದಿಗೆ ಸಂಪರ್ಕಿಸುವ ಉದ್ದೇಶ ಹೊಂದಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoorನಲ್ಲಿ ಧ್ವಂಸವಾಗಿದ್ದ ಜೈಶ್ ನೆಲೆ ಮರುನಿರ್ಮಾಣ! ಪಾಕ್‌ ಸರ್ಕಾರದಿಂದ 25 ಕೋಟಿ ನೆರವು!

Onion Price: ದಿಢೀರ್ ಈರುಳ್ಳಿ ಬೆಲೆ ಏರಿಕೆ; ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತಷ್ಟು ದುಬಾರಿ ಸಾಧ್ಯತೆ, ದರ ಏರಿಕೆಗೆ ಕಾರಣವೇನು?

ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿ, ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಪೂರ್ತಿಯಾಗಿ ಹಾಡಿ ತೋರಿಸಿ: ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ಸವಾಲು

ಮದ್ಯ ಸಾಗಣೆ ಹಗರಣ: ಆಂಧ್ರಪ್ರದೇಶದ ಮಾಜಿ ಸಚಿವರ ಬಂಧಿಸಿದ ED

'3 ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ': SIR ಪಟ್ಟಿಯಲ್ಲಿ ಹೆಸರು ನಾಪತ್ತೆ ಬಗ್ಗೆ ಮಾಜಿ ರಾಯಭಾರಿ ಅಸಮಾಧಾನ!