ಬಂಧಿತ ಆರೋಪಿಗಳು 
ದೇಶ

ರಾಮನಗರ: ಹೋಂ ಸ್ಟೇ, ರೆಸಾರ್ಟ್‌ ಹೆಸರಲ್ಲಿ ಹೈಟೆಕ್ ಸೆಕ್ಸ್​ ದಂಧೆ; 10 ಯುವತಿಯರ ರಕ್ಷಣೆ, 52 ಜನರ ಬಂಧನ

ರಾಮನಗರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ, ರೆಸಾರ್ಟ್ ನಲ್ಲಿ ಅಪ್ರಾಪ್ತ ಬಾಲಕಿಯರು ಸೇರಿದಂತೆ 10 ಮಹಿಳೆಯರನ್ನು ರಕ್ಷಿಸಿದ್ದಾರೆ ಮತ್ತು 52 ಜನರನ್ನು ಬಂಧಿಸಿ, ರೆಸಾರ್ಟ್ ಅನ್ನು ಸೀಜ್ ಮಾಡಲಾಗಿದೆ.

ರಾಮನಗರ: ವಿಶ್ವವಿಖ್ಯಾತ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ಉತ್ತರಾಖಂಡದ ರಾಮನಗರದಲ್ಲಿ ಐಷಾರಾಮಿ ರೆಸಾರ್ಟ್ ಹಾಗೂ ಹೋಂ ಸ್ಟೇ ಹೆಸರಿನಲ್ಲಿ ನಡೆಯುತ್ತಿದ್ದ ಹೈಟೆಕ್​ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಬಯಲು ಮಾಡಿದ್ದು, 52 ಜನರನ್ನು ಬಂಧಿಸಿದ್ದಾರೆ.

ಮಾನವ ಕಳ್ಳಸಾಗಣೆ ವಿರೋಧಿ ಘಟಕ(AHTU), ವಿಶೇಷ ಕಾರ್ಯಾಚರಣೆ ಗುಂಪು(SOG) ಮತ್ತು ರಾಮನಗರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರೆಸಾರ್ಟ್ ಮೇಲೆ ದಾಳಿ ನಡೆಸಿ, ಅಪ್ರಾಪ್ತ ಬಾಲಕಿಯರು ಸೇರಿದಂತೆ 10 ಮಹಿಳೆಯರನ್ನು ರಕ್ಷಿಸಿದ್ದಾರೆ ಮತ್ತು 52 ಜನರನ್ನು ಬಂಧಿಸಿ, ರೆಸಾರ್ಟ್ ಅನ್ನು ಸೀಜ್ ಮಾಡಲಾಗಿದೆ.

ಪೊಲೀಸರ ಪ್ರಕಾರ, ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ ಕರೆತರಲಾದ ಮಹಿಳೆಯರನ್ನು ಒಳಗೊಂಡ ಸಂಘಟಿತ ವೇಶ್ಯಾವಾಟಿಕೆ ಜಾಲವನ್ನು ನಡೆಸಲು ರೆಸಾರ್ಟ್ ಅನ್ನು ಬಳಸಲಾಗುತ್ತಿದೆ ಎಂಬ ಖಚಿತ ಮಾಹಿತಿ ದೊರೆತ ನಂತರ ಈ ದಾಳಿ ನಡೆಸಲಾಗಿದೆ.

ಪೊಲೀಸ್ ತಂಡ ಬಂದಾಗ ಮದ್ಯ ಪಾರ್ಟಿ ನಡೆಯುತ್ತಿತ್ತು, ಅತಿಥಿಗಳು ಮಹಿಳೆಯರ ಮೇಲೆ ನೋಟುಗಳನ್ನು ಎಸೆಯುತ್ತಿದ್ದರು ಮತ್ತು ಅವರಿಗೆ ಅಶ್ಲೀಲ ನೃತ್ಯಗಳನ್ನು ಪ್ರದರ್ಶಿಸಲು ಒತ್ತಾಯಿಸಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಆವರಣದಿಂದ ಆಕ್ಷೇಪಾರ್ಹ ವಸ್ತುಗಳು ಮತ್ತು ಇತರ ಪುರಾವೆಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಪಾರ್ಟಿಯನ್ನು ಮೀರತ್​ನ ಉದ್ಯಮಿ ಉಮೇಂದ್ರ ಕುಮಾರ್​ ಎಂಬಾತ ಆಯೋಜನೆ ಮಾಡಿದ್ದ ಎಂದು ತಿಳಿದು ಬಂದಿದ್ದು, ಪ್ರತಿ ಮಹಿಳೆಯರಿಗೆ ಹತ್ತು ಸಾವಿರ ರೂಪಾಯಿ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಪಾರ್ಟಿಗೆ ಜುಲೈ 4 ಮತ್ತು 5 ರಂದು ಬುಕ್ಕಿಂಗ್​ ಪ್ರಾರಂಭಿಸಲಾಗಿದ್ದು ಎರಡು ದಿನಗಲ್ಲಿ ಸುಮಾರು 2.25 ಲಕ್ಷ ಕಲೆಕ್ಷನ್​ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 52 ಜನರ ಮೇಲೆ ಎಫ್​ಐಆರ್​ ದಾಖಲಾಗಿದೆ. ಬಂಧಿತರ ಮೇಲೆ ಅಕ್ರಮ ಮಾನವ ಕಳ್ಳಸಾಗಾಣಿಕೆ, ಪೊಕ್ಸೊ ಹಾಗೂ ಅಬಕಾರಿ ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'3 ರಾಷ್ಟ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ': SIR ಪಟ್ಟಿಯಲ್ಲಿ ಹೆಸರು ನಾಪತ್ತೆ ಬಗ್ಗೆ ಮಾಜಿ ರಾಯಭಾರಿ ಅಸಮಾಧಾನ!

ಮಂಡ್ಯದಲ್ಲಿ ಭಿಕ್ಷುಕಿ ನಿಧನ: ಮೃತಳ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ; ಊರಿಗೂರೇ ಶಾಕ್!

ಕ್ರಿಕೆಟ್: ಮೈದಾನದಲ್ಲೇ ಜೈಸ್ವಾಲ್-ಅಸಿತ ಫೆರ್ನಾಂಡೊ ಕಿರಿಕ್: ಟೀಂ ಇಂಡಿಯಾ ಓಪನರ್‌ಗೆ ಭಾರೀ ಶಿಕ್ಷೆ ಸಾಧ್ಯತೆ!

KPSC ಕರ್ಮಕಾಂಡ: ನಾಪತ್ತೆಯಾಗಿರುವ IAS ಅಧಿಕಾರಿಗೆ ED ಬಿಗ್ ಶಾಕ್; ಜ್ಞಾನೇಂದ್ರ ಕುಮಾರ್ ಮನೆ ಮೇಲೆ ದಾಳಿ

ಐಫೋನ್ EMI ತಲೆನೋವು, ಯಮುನಾ ನದಿಗೆ ಹಾರಿದ ಡ್ಯಾನ್ಸ್ ಟೀಚರ್! ಮುಂದೇನಾಯ್ತು!