ಸೌರಭ್ ಚಂದ್ರಕರ್ 
ದೇಶ

Mahadev betting app: ಸ್ಥಾಪಕ ಸೌರಭ್ ಚಂದ್ರಕರ್ ಒಮಾನ್‌ನಲ್ಲಿ ಬಂಧನ: ಹಸ್ತಾಂತರಕ್ಕೆ ಭಾರತ ಮನವಿ!

ಜಾರಿ ನಿರ್ದೇಶನಾಲಯ (ಇಡಿ) ಮತ್ತು ಛತ್ತೀಸ್‌ಗಢ ಪೊಲೀಸರ ಮನವಿ ಹಿನ್ನೆಲೆಯಲ್ಲಿ ಇಂಟರ್‌ಪೋಲ್ ರೆಡ್ ನೋಟಿಸ್ ಆಧಾರದ ಮೇಲೆ 30 ವರ್ಷದ ಚಂದ್ರಕರ್ ಅವರನ್ನು ರಾಯಲ್ ಒಮನ್ ಪೊಲೀಸರು ಕೆಲ ವಾರಗಳ ಹಿಂದೆಯೇ ಬಂಧಿಸಿದ್ದು, ಪ್ರಸ್ತುತ ಮಸ್ಕತ್‌ನ ಅಲ್ ಖೌದ್ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ.

ನವದೆಹಲಿ: 6,000 ಕೋಟಿ ರೂ. ಮೊತ್ತದ ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಸ್ಥಾಪಕ ಮತ್ತು ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ ಸೌರಭ್ ಚಂದ್ರಕರ್ ಅವರನ್ನು ನಕಲಿ ಇಂಡೋನೇಷ್ಯಾ ಪಾಸ್‌ಪೋರ್ಟ್‌ನಲ್ಲಿ ದೇಶಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಒಮಾನ್‌ನಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಆತನನ್ನು ಹಸ್ತಾಂತರಿಸಲು ಭಾರತ ಕೋರಿದೆ.

ಜಾರಿ ನಿರ್ದೇಶನಾಲಯ (ಇಡಿ) ಮತ್ತು ಛತ್ತೀಸ್‌ಗಢ ಪೊಲೀಸರ ಮನವಿ ಹಿನ್ನೆಲೆಯಲ್ಲಿ ಇಂಟರ್‌ಪೋಲ್ ರೆಡ್ ನೋಟಿಸ್ ಆಧಾರದ ಮೇಲೆ 30 ವರ್ಷದ ಚಂದ್ರಕರ್ ಅವರನ್ನು ರಾಯಲ್ ಒಮನ್ ಪೊಲೀಸರು ಕೆಲ ವಾರಗಳ ಹಿಂದೆಯೇ ಬಂಧಿಸಿದ್ದು, ಪ್ರಸ್ತುತ ಮಸ್ಕತ್‌ನ ಅಲ್ ಖೌದ್ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ನಕಲಿ ಪಾಸ್‌ಪೋರ್ಟ್ ಬಳಕೆ ಮತ್ತು ದೇಶಕ್ಕೆ ಅಕ್ರಮ ಪ್ರವೇಶದ ಆರೋಪದ ಮೇಲೆ ಒಮಾನ್ ಅವರ ವಿರುದ್ಧ ಪ್ರತ್ಯೇಕ ಕ್ರಿಮಿನಲ್ ಪ್ರಕರಣವನ್ನು ಸಹ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂದ್ರಕರ್ ನನ್ನು ಭಾರತಕ್ಕೆ ಹಸ್ತಾಂತರಿಸಲು ಕೇಂದ್ರ ತನಿಖಾ ದಳ (CBI)ಕಳೆದ ವಾರ ವಿದೇಶಾಂಗ ಸಚಿವಾಲಯದ ಮೂಲಕ ಒಮನ್ ಅಧಿಕಾರಿಗಳಿಗೆ ಮನವಿ ಕಳುಹಿಸಿದೆ. ಜೊತೆಗೆ ಒಮನ್ ಕಾನೂನಿನಡಿಯಲ್ಲಿ ಅಗತ್ಯವಿರುವಂತೆ ಅರೇಬಿಕ್‌ಗೆ ಅನುವಾದಿಸಲಾದ ನ್ಯಾಯಾಂಗ ದಾಖಲೆಯನ್ನು ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಮಾನ್ ನ್ಯಾಯಾಲಯ ಹಸ್ತಾಂತರ ಮನವಿಯನ್ನು ತೆರವುಗೊಳಿಸಿದ ನಂತರ ಜಂಟಿ ಸಿಬಿಐ-ಇಡಿ ತಂಡವು ಮಸ್ಕತ್‌ಗೆ ಪ್ರಯಾಣಿಸುವ ನಿರೀಕ್ಷೆಯಿದೆ.

ಈ ಹಿಂದೆ, ಚಂದ್ರಕರ್ ಅವರನ್ನು 2024 ರಲ್ಲಿ ದುಬೈನಲ್ಲಿ ಇಂಟರ್‌ಪೋಲ್ ರೆಡ್ ನೋಟಿಸ್‌ನಡಿಯಲ್ಲಿ ಯುಎಇ ಅಧಿಕಾರಿಗಳು ಬಂಧಿಸಿದ್ದರು. ಆದರೆ ಭಾರತದ ಹಸ್ತಾಂತರ ಮನವಿಯನ್ನು ಸ್ವೀಕರಿಸದೆ ನಂತರ ಬಿಡುಗಡೆ ಮಾಡಲಾಗಿತ್ತು.

ರೆಡ್ ನೋಟಿಸ್ ಅನ್ನು ಹಿಂತೆಗೆದುಕೊಳ್ಳಬೇಕೆಂಬ ಅವರ ಮನವಿಯನ್ನು ನಂತರ ಇಂಟರ್‌ಪೋಲ್‌ನ ಫೈಲ್‌ಗಳ ನಿಯಂತ್ರಣ ಆಯೋಗವು ತಿರಸ್ಕರಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ED ಪ್ರಕಾರ, ಮಹಾದೇವ್ ಸಿಂಡಿಕೇಟ್ ಟೈಗರ್ ಎಕ್ಸ್‌ಚೇಂಜ್, ಗೋಲ್ಡ್ 365 ಮತ್ತು ಲೇಸರ್ 247 ನಂತಹ ಪ್ಲಾಟ್ ಫಾರ್ಮ್ ಮೂಲಕ ಭಾರತದಾದ್ಯಂತ ಸಾವಿರಾರು ಆನ್‌ಲೈನ್ ಬೆಟ್ಟಿಂಗ್ "ಪ್ಯಾನೆಲ್"ಗಳನ್ನು ನಿರ್ವಹಿಸುತ್ತಿದ್ದು, ಪ್ರತಿದಿನ ನೂರಾರು ಕೋಟಿ ರೂಪಾಯಿಗಳನ್ನು ಗಳಿಸುತ್ತಿದೆ ಮತ್ತು ಛತ್ತೀಸ್‌ಗಢದ ಹಿರಿಯ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ದೋಷಾರೋಪಣೆ ಮಾಡಿದೆ ಎಂದು ಆರೋಪಿಸಲಾಗಿದೆ.

ರಾಯಪುರದ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಐದು ಚಾರ್ಜ್‌ಶೀಟ್‌ಗಳಲ್ಲಿ ಸಂಸ್ಥೆಯು ಇದುವರೆಗೆ 13 ಜನರನ್ನು ಬಂಧಿಸಿದೆ ಮತ್ತು 74 ಸಂಸ್ಥೆಗಳನ್ನು ಆರೋಪಿಗಳಾಗಿ ಹೆಸರಿಸಿದೆ. ಮಾರ್ಚ್‌ನಲ್ಲಿ, ಬುರ್ಜ್ ಖಲೀಫಾದಲ್ಲಿನ ಆಸ್ತಿ ಸೇರಿದಂತೆ ದುಬೈನಲ್ಲಿರುವ ಚಂದ್ರಕರ್‌ಗೆ ಸಂಬಂಧಿಸಿದ 1,700 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ED ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ನಾವು ವಿಭಿನ್ನ ಜೆನ್ ಝೀಗಳಾಗಿರಬಹುದು, ಆದರೆ...: ʻಟಾಕ್ಸಿಕ್‌ʼ ಬಿಡುಗಡೆಗೂ ಮುನ್ನ ಯಶ್‌ ಹಾಡಿ ಹೊಗಳಿದ ಅನುಪಮ್ ಖೇರ್

ಬಂಟ್ವಾಳದಲ್ಲಿ ಕಸ ಗುಡಿಸಲು ಫಾರ್ಚೂನರ್‌ ಕಾರಲ್ಲಿ ಬರುತ್ತಾನೆ ಪೌರಕಾರ್ಮಿಕ: ಸೈಕಲ್​ನಿಂದ ಐಷರಾಮಿ ಕಾರಿನವರೆಗೆ 'ಸೇಸಪ್ಪ'ರ ಯಶೋಗಾಥೆ!

ನಮ್ಮ ಹೋರಾಟ ಉದ್ಯಮಿಗಳ ವಿರುದ್ಧ ಅಲ್ಲ: CM ಡಿಕೆ ಶಿವಕುಮಾರ್ - ಗೌತಮ್ ಅದಾನಿ ಭೇಟಿ ಸಮರ್ಥಿಸಿಕೊಂಡ ಪವನ್‌ ಖೇರಾ

ಕೇರಳದ 19 ವರ್ಷದ ವಿದ್ಯಾರ್ಥಿನಿ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ; ಯಾರು ಈ ಅತಿಲೋಕ ಸುಂದರಿ?