ಕೋಲ್ಕತ್ತಾ: ತೃಣಮೂಲ ನಾಯಕಿ ಮಮತಾ ಬ್ಯಾನರ್ಜಿ ತಾಳ್ಮೆ ಕಳೆದುಕೊಂಡು ತನ್ನದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಕೊಲ್ಕತ್ತಾದಲ್ಲಿ ಪಕ್ಷದ ಪ್ರತಿಭಟನಾ ಮೆರವಣಿಗೆಯ ವೇಳೆ ಮಮತಾ ಬ್ಯಾನರ್ಜಿ ಮನೆಯ ಮುಂದೆ ಒಬ್ಬ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದರು. ಆ ಸಮಯದಲ್ಲಿ ಅವರ ಮನೆಯ ಮುಂದೆ ಬಹಳಷ್ಟು ಕಾರ್ಯಕರ್ತರು ಸೇರಿದ್ದರು. ಎಲ್ಲರನ್ನೂ ಸ್ಥಳಾಂತರಿಸಲು ಮಮತಾ ಮುಂದಾದಾಗ ಘಟನೆ ನಡೆದಿದೆ. ಆದಾಗ್ಯೂ, ಮಮತಾ ಯಾಕೆ ಕಪಾಳಮೋಕ್ಷ ಮಾಡಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ನ್ಯಾಯಾಲಯದ ಅನುಮತಿಯೊಂದಿಗೆ, ಬುಧವಾರ ನಗರದಲ್ಲಿ ತೃಣಮೂಲದ ಮೆರವಣಿಗೆ ನಡೆಯಿತು. ಆ ಮೆರವಣಿಗೆಯ ವೇಳೆ ವ್ಯಾಪಕ ಅಶಾಂತಿ ಮತ್ತು ಅವ್ಯವಸ್ಥೆ ಇತ್ತು. ಆ ಸಮಯದಲ್ಲಿ ಮಮತಾ ಮನೆಯಿಂದ ಹೊರಬಂದು ಜನಸಂದಣಿಯನ್ನು ನಿಯಂತ್ರಿಸಲು ಸ್ವತಃ ಕೆಳಗೆ ಇಳಿದರು. ಎಲ್ಲರಿಗೂ ಅಲ್ಲಿಂದ ಮುಂದೆ ಹೋಗುವಂತೆ ಸೂಚಿಸಿದರು. ಆದರೆ ಅನೇಕ ಜನರು ತಮ್ಮ ಫೋನ್ ಕ್ಯಾಮೆರಾಗಳನ್ನು ಕೈಯಲ್ಲಿ ಹಿಡಿದುಕೊಂಡು ಅಲ್ಲಿಂದ ಹೋಗಲು ಮುಂದಾಗಿಲ್ಲ. ಹೀಗಾಗಿ ಮಮತಾ ಅವರಲ್ಲಿ ಒಬ್ಬರಿಗೆ ಕಪಾಳಮೋಕ್ಷ ಮಾಡಿದರು.
ಕಾನೂನು ಎಲ್ಲಿದೆ? ಅರಾಜಕತೆ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲೂ ಇದು ಹೆಚ್ಚುತ್ತಿದೆ. ನ್ಯಾಯಾಲಯದಿಂದ ಅನುಮತಿ ಇದೆ ಎಂದು ಪೊಲೀಸರಿಗೆ ತಿಳಿದಿದೆ. ಅವರು ಇನ್ನೂ ನ್ಯಾಯಾಲಯದ ಆದೇಶವನ್ನು ಹೇಗೆ ಉಲ್ಲಂಘಿಸಬಹುದು? ಅವರಿಗೆ ಭದ್ರತೆ ಒದಗಿಸಲು ಸಾಧ್ಯವಾಗುತ್ತಿಲ್ಲ, ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ನಾವು ಅದನ್ನು ಖಂಡಿಸುತ್ತೇವೆ. ನಾವು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ ಎಂದರು.