ಮಹಾರಾಷ್ಟ್ರ ಕಾರ್ಪೊರೇಟರ್ ನಿಂದ ಕಪಾಳಮೋಕ್ಷಕ್ಕೊಳಗಾದ ಮಹಿಳಾ ವೈದ್ಯೆ ರಾಜೀನಾಮೆ online desk
ದೇಶ

ಮಹಾರಾಷ್ಟ್ರ: ಕಾರ್ಪೊರೇಟರ್ ಕಪಾಳಮೋಕ್ಷ ಪ್ರಕರಣ; ಮಹಿಳಾ ವೈದ್ಯೆ ರಾಜೀನಾಮೆ!

ಕಾರ್ಪೊರೇಟರ್‌ನಿಂದ ಕಪಾಳಮೋಕ್ಷಕ್ಕೊಳಗಾದ ಅವರ ಸಹೋದ್ಯೋಗಿ ವೈಭವ್ ಸಲುಂಖೆ ತಮ್ಮ ಕೆಲಸವನ್ನು ತ್ಯಜಿಸಿ ನಗರವನ್ನು ತೊರೆದ ಒಂದು ದಿನದ ನಂತರ ಸೃಷ್ಟಿ ಬಾವಿಸ್ಕರ್ ಸಹ ರಾಜೀನಾಮೆ ನೀಡಿದ್ದಾರೆ.

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಪೊರೇಟರ್ ರಾಕೇಶ್ ಮ್ಹಾತ್ರೆಯಿಂದ ಹಲ್ಲೆಗೊಳಗಾದ ಮಹಿಳಾ ವೈದ್ಯೆಯೊಬ್ಬರು ರಾಜೀನಾಮೆ ನೀಡಿದ್ದಾರೆ.

ಕಾರ್ಪೊರೇಟರ್‌ನಿಂದ ಕಪಾಳಮೋಕ್ಷಕ್ಕೊಳಗಾದ ಅವರ ಸಹೋದ್ಯೋಗಿ ವೈಭವ್ ಸಲುಂಖೆ ತಮ್ಮ ಕೆಲಸವನ್ನು ತ್ಯಜಿಸಿ ನಗರವನ್ನು ತೊರೆದ ಒಂದು ದಿನದ ನಂತರ ಸೃಷ್ಟಿ ಬಾವಿಸ್ಕರ್ ಸಹ ರಾಜೀನಾಮೆ ನೀಡಿದ್ದಾರೆ.

"ತುಂಬಾ ಭಯ ಇರುವುದರಿಂದ ರಾಜೀನಾಮೆ ನೀಡಿದ್ದೇನೆ. ಗೂಂಡಾಗಳು ನಮ್ಮನ್ನು ನೋಡುತ್ತಿದ್ದಾರೆ ಮತ್ತು ನಾನು ಈಗಾಗಲೇ ನಗರವನ್ನು ತೊರೆದಿದ್ದೇನೆ. ಅವರು ತುಂಬಾ ಅಪಾಯಕಾರಿ ಜನರು. ಇತರ ವೈದ್ಯರು ಅಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಬಹುದು, ಆದರೆ ನನಗೆ ಸಾಧ್ಯವಿಲ್ಲ. ನಾನು ಮತ್ತೆ ಅಲ್ಲಿಗೆ ಹಿಂತಿರುಗುವುದಿಲ್ಲ" ಎಂದು ಸಾಲುಂಖೆ ಹೇಳಿದ್ದರು.

ಆದಾಗ್ಯೂ, ಕೆಡಿಎಂಸಿ (ಕಲ್ಯಾಣ್-ಡೊಂಬಿವ್ಲಿ ಮುನ್ಸಿಪಲ್ ಕಾರ್ಪೊರೇಷನ್) ಮುಖ್ಯ ವೈದ್ಯಾಧಿಕಾರಿ ಡಾ. ದೀಪಾ ಶುಕ್ಲಾ, ವೈದ್ಯರಾದ ವೈಭವ್ ಸಲುಂಖೆ ಮತ್ತು ಸೃಷ್ಟಿ ಬಾವಿಸ್ಕರ್ ತಮ್ಮ ರಾಜೀನಾಮೆಯನ್ನು ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಇಬ್ಬರೂ ವೈದ್ಯರನ್ನು ಮೂರನೇ ವ್ಯಕ್ತಿಯ ನೇಮಕಾತಿ ಸಂಸ್ಥೆಯ ಮೂಲಕ ನೇಮಿಸಲಾಗಿದೆ. ಅವರು ಈ ಪೋಷಕ ಸಂಸ್ಥೆಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿಲ್ಲ. "ಅವರು ಸೂಚನೆ ಇಲ್ಲದೆ ತಮ್ಮ ಕರ್ತವ್ಯಗಳಿಗೆ ಗೈರುಹಾಜರಾಗಿದ್ದಾರೆ" ಎಂದು ಅವರು ಹೇಳಿದರು.

ಕಲ್ಯಾಣ್-ಡೊಂಬಿವ್ಲಿ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವ ಡೊಂಬಿವಿಲಿಯ ಶಾಸ್ತ್ರಿನಗರ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಗುಂಪಿನ ಮೇಲೆ ಮ್ಹಾತ್ರೆ ಹಲ್ಲೆ ನಡೆಸಲಾಗಿತ್ತು.

ಆಸ್ಪತ್ರೆಯಲ್ಲಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕ ಭರ್ತಿಯಾಗಿರುವುದರಿಂದ ನವಜಾತ ಶಿಶುವನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಇಬ್ಬರು ವೈದ್ಯರು ಸಂಬಂಧಿಕರಿಗೆ ಸೂಚಿಸಿದ ನಂತರ ಗಲಾಟೆ ಪ್ರಾರಂಭವಾಯಿತು. ನಂತರ ಸಂಬಂಧಿಕರು ಮ್ಹಾತ್ರೆ ಅವರನ್ನು ಸಂಪರ್ಕಿಸಿದರು, ಅವರು ತಮ್ಮ ಸಹಚರರೊಂದಿಗೆ ಆಸ್ಪತ್ರೆಗೆ ಬಂದರು ಈ ಬಳಿಕ ವಿಷಯವು ಉಲ್ಬಣಗೊಂಡಿತು.

ಶಿವಸೇನಾ ಕಾರ್ಪೊರೇಟರ್ ಮಹಿಳಾ ವೈದ್ಯರನ್ನು ಹಿಂದಿನಿಂದ ಹೊಡೆಯುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ನಂತರ ಅವರು ಇತರ ವೈದ್ಯರು ಮತ್ತು ಸಿಬ್ಬಂದಿ ಸದಸ್ಯರ ಕಡೆಗೆ ತಿರುಗಿ ಅವರ ಮೇಲೆ ಹಲ್ಲೆ ನಡೆಸಿದರು.

ದಾಳಿಯ ವೀಡಿಯೊ ವ್ಯಾಪಕವಾಗಿ ಪ್ರಸಾರವಾದ ನಂತರ ಸಾರ್ವಜನಿಕರ ಆಕ್ರೋಶದ ನಂತರ, ಮ್ಹಾತ್ರೆ ಅವರನ್ನು ಬುಧವಾರ ಬಂಧಿಸಲಾಯಿತು. ಆದರೆ ಅನಾರೋಗ್ಯದ ಆಧಾರದ ಮೇಲೆ ಅವರನ್ನು ಥಾಣೆ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು, ಇದು ಆದ್ಯತೆಯ ಚಿಕಿತ್ಸೆಯ ಆರೋಪಗಳನ್ನು ಹುಟ್ಟುಹಾಕಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ